ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):
ಮಾಲೂರು ಪಟ್ಟಣ್ಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಎನ್.ಎಸ್.ಎಸ್, ಸ್ಕೌಟ್ಸ್-ಗೈಡ್ಸ್, ರೆಡ್ ಕ್ರಾಸ್, ಎನ್.ಸಿ.ಸಿ ಹಾಗೂ ಆರ್.ಎಲ್.ಜಾಲಪ್ಪ ರಕ್ತನಿಧಿ ಕೇಂದ್ರದ ಇವರ ಸಹಯೋಗದಲ್ಲಿ “ಸ್ವಯಂಪ್ರೇರಿತ ರಕ್ತದಾನ ಶಿಬಿರ” ವನ್ನು ಏರ್ಪಡಿಸಲಾಗಿತ್ತು.
ರಕ್ತದಾನ ಶಿಬಿರದ ಉದ್ಘಾಟನೆ ಮಾಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವೈ.ವೆಂಕಟೇಶ್ ರವರು ಚಾಲನೆ ನೀಡಿ ಮಾತನಾಡುತ್ತಾ “ಎಲ್ಲ ದಾನಗಳಲ್ಲೇ ರಕ್ತದಾನ ಶ್ರೇಷ್ಠ ದಾನ. ರಕ್ತವನ್ನು ದಾನ ಮಾಡುವುದು ಒಳ್ಳೆಯ ಕಾರ್ಯ. ರಕ್ತದಾನ ಮತ್ತೊಬ್ಬರ ಪ್ರಾಣ ಉಳಿಸುವ ಜತೆಗೆ ವ್ಯಕ್ತಿ ಆರೋಗ್ಯಯುತ ಜೀವನ ನಡೆಸಲು ಸಹಕಾರಿಯಾಗಲಿದೆ ರಕ್ತಕ್ಕೆ ಪರ್ಯಾಯ ಇಲ್ಲ. ಆದ್ದರಿಂದ ಸಾವಿನ ಅಂಚಿನಲ್ಲಿರುವವರ ಜೀವ ಉಳಿಸಬೇಕಾದರೆ ರಕ್ತವೇ ನೀಡಬೇಕು. ಆದ್ದರಿಂದ ಪ್ರತಿಯೊಬ್ಬರೂ ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು, ಇಂದು ನಮ್ಮ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಸಹ ರಕ್ತದಾನ ಮಾಡುವ ಮೂಲಕ ಮಾನವೀಯ ಕಾರ್ಯ ಮಾಡಿದ್ದಾರೆ” ಎಂದರು.
ಎನ್.ಎಸ್.ಎಸ್ ಸಂಚಾಲಕರು ಹಾಗೂ ಪ್ರಾಧ್ಯಪಕರಾದ ಕೆ.ಆರ್.ಗಣೇಶ್ ಮಾತನಾಡಿ “ಒಂದು ಯೂನಿಟ್ ರಕ್ತದಿಂದ ನಾಲ್ಕು ಜನರ ಪ್ರಾಣ ಉಳಿಸಬಹುದಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರಬೇಕು. ಇದರಿಂದ ಪ್ರಾಣ ಹಾನಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ರಕ್ತದಾನ ಇತರರಿಗೆ ಮರುಜನ್ಮನೀಡುವ ಶ್ರೇಷ್ಠ ಮತ್ತು ಸಾರ್ಥಕ ಸೇವೆಯಾಗಿದೆ, ನಮ್ಮ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಉತ್ಸಾಹದಿಂದ ರಕ್ತದಾನ ಮಾಡುತ್ತಿರುವುದು ಸಂತಸವಾದ ವಿಚಾರ” ಎಂದರು.
ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಸುಮಾರು 55 ಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು, ಉಪನ್ಯಾಸಕರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಐ,ಕ್ಯೂ,ಎಸಿ ಸಂಚಾಲಕರಾದ ಡಾ.ವಿ.ಶ್ರೀಕಾಂತ್, ಎನ್.ಎಸ್.ಎಸ್.ಸಂಚಾಲಕರಾದ ಮೀನಾಕುಮಾರಿ.ಎಂ, ಸ್ಕೌಟ್ಸ್-ಗೈಡ್ಸ ಸಂಚಲಕಾರದ ಆರ್.ಅಮೃತಮ್ಮ, ರೆಡ್ ಕ್ರಾಸ್ ಸಂಚಾಲಕರಾದ ಅನಂತರಾಜು, ಎನ್.ಸಿ.ಸಿ ಸಂಚಾಲಕರಾದ ಅಶೋಕ್ ಬಾಬು, ಕಾಲೇಜಿನ ಪ್ರಾಧ್ಯಪಕರಾದ ನಾಗರೆಡ್ಡಿ, ಚಿಕ್ಕರಾಜು ಸಿ, ವೇಣುಗೋಪಾಲ್, ಚಿಕ್ಕಣ್ಣ.ಬಿ.ಎಸ್, ಮೋಹನ್ ಕುಮಾರ್, ಡಾ.ಎಸ್.ಲಕ್ಷ್ಮೀ, ಮಾಲಾ, ಅನುರಾಧ.ಪಿ, ಶಾಂತಮ್ಮ.ಕೆ, ಮಾಲಿನಿ.ಎಂ.ವಿ, ಡಾ.ಎಸ್.ಶಿಲ್ಪ, ಕಚೇರಿ ವ್ಯವಸ್ಥಾಪಕರಾದ ವರಲಕ್ಷ್ನೀ ಹಾಗೂ ಜಾಲಪ್ಪ ರಕ್ತನಿಧಿ ಕೇಂದ್ರದ ಚಲಪತಿ ಉಪಸ್ಥಿತರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.