(www.vknews.com) : ಹಾಸನ ಜಿಲ್ಲಾ ಕೊಲ್ಲಹಳ್ಳಿ ಬದ್ರಿಯಾ ಜುಮಾ ಮಸ್ಜಿದ್ ಹಳೆಯ ಕಟ್ಟಡ ತೆರವು ಮತ್ತು ನೂತನ ಕಟ್ಟಡ ವೀಕ್ಷಣೆಗಾಗಿ ಎಸ್ ಬಿ ದಾರಿಮಿ, ಅಝೀಝ್ ದಾರಿಮಿ, ಉಮರ್ ದಾರಿಮಿ ಮತ್ತು ಜಿಲ್ಲೆಯ ಹಲವು ಉಲಮ-ಉಮಾರ ಗಳು ಭೇಟಿಕೊಟ್ಟು ಪ್ರಾರ್ಥಿಸಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಹಳೆಯ ಮಸೀದಿ ಅನಿವಾರ್ಯವಾಗಿ ತೆರವುಗೊಳಿಸಲಾಗಿದೆ. ಆದರೆ ಇದರ ಗರ್ಭಗುಡಿ ಯಾದ ಮೆಹರಾಬ್ ಮುತ್ತು ಮಿಂಬರ್ ಸ್ಥಳ ಸೇರಿದಂತೆ ಒಂದು ನೂರು ಚದರ ಅಡಿ ಉಳಿದುಕೊಂಡಿದೆ. ಹಳೆಯ ಮಸೀದಿ ಸ್ವಲ್ಪ ಸ್ಥಳ ಉಳಿದುಕೊಂಡಿದ್ದು ಇದು ಪ್ರಾರ್ಥನೆಗೆ ಉತ್ತರ ಸಿಗುವ ಸ್ಥಳವಾಗಿದೆ. ಆದುದರಿಂದ ಈ ಸ್ಥಳವನ್ನು ಒಂದು ಉತ್ತಮವಾದ ಸಣ್ಣ ಕಟ್ಟಡವಾಗಿ ರಚಿಸಿ ಹಳೆಯ ಕಟ್ಟಡದ ವಿನ್ಯಾಸವನ್ನು ಕಾಪಾಡಿಕೊಂಡು ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯ ಸಮಿತಿಯವರಿಗೆ ಎಸ್ ಬಿ ದಾರಿಮಿ ಯವರು ಸೂಚಿಸಿದರು.
ನಂತರ ಅಝೀಝ್ ದಾರಿಮಿ ಯವರು ಭಕ್ತಿಪೂರ್ವ ಸಾಮೂಹಿಕ ಪ್ರಾರ್ಥನೆ ನಡೆಸಿದರು. ನೂತನ ಮಸೀದಿ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಕಾಮಗಾರಿ ಪೂರ್ಣಗೊಳಿಸಲು ಲಕ್ಷಾಂತರ ರೂಪಾಯಿಗಳ ಅವಶ್ಯಕತೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಮದರಸ ನಡೆಸಲು ಮತ್ತು ಶುಕ್ರವಾರ ಜುಮಾ ನಮಾಝ್ ನಿರ್ವಹಿಸಲು ಸ್ಥಳವಕಾಶದ ಕೊರತೆ ಇದ್ದು,ಸಾಧ್ಯ ಇಲ್ಲದೆ ಇರುವ ಪರಿಸ್ಥಿತಿಯನ್ನು ಮನಗಂಡು ಸಾಧ್ಯವಾದಷ್ಟು ದಾನಿಗಳನ್ನು ಈ ಬಗ್ಗೆ ಪ್ರೋತ್ಸಾಹಿಸು ಹುದಾಗಿ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.