ಎಲ್ಲಿ ಜಾತಿ, ಎಲ್ಲಿ ಧರ್ಮ ; ಇದುವೇ ಅಲ್ಲವೇ ಮಾನವಿಯತೆ, ಮನುಷ್ಯತ್ವ..
(www.vknews.in) : ಮೊನ್ನೆ ಕನ್ಯಾನದ ಕಣಿಯೂರು ಶ್ರೀ ಕ್ಷೇತ್ರ ಚಾಮುಂಡೇಶ್ವರಿ ಸನ್ನಿಧಿಯ ಹತ್ತಿರ ಎರಡು ಕಾರುಗಳ ಮುಖಾಮುಖಿ ಡಿಕ್ಕಿ ಹೊಡೆದು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಎರಡು ಕಾರುಗಳ ಮಾಲೀಕರು ಬ್ರಾಹ್ಮಣ ವರ್ಗದವರಾಗಿದ್ದು, ಒಂದು ಕಾರು ಮಂಗಳೂರು ಕಡೆಯಿಂದ ಕನ್ಯಾನಕ್ಕೆ ಬಂದು ಪೆರುವಾಯಿ ಕಡೆಗೆ ಹೋಗುವವರು, ಮತ್ತೊಂದು ಕಾರು ಕನ್ಯಾನದಿಂದ ಮಂಗಳೂರಿನ ಕಡೆ ಹೋಗುವುದು. ಒಂದು ಕಾರಿನಲ್ಲಿ65 ವಯಸ್ಸಿನ ಪಶುಪತಿ ಭಟ್ ಹಾಗು ಅವರ ದಂಪತಿ ಪ್ರಯಾಣಿಸುತ್ತಿದ್ದರು. ಡಿಕ್ಕಿ ಹೊಡೆದ ತಕ್ಷಣ ಇವರನ್ನು ಕಣಿಯೂರು ಮಜೀದ್ ಎಂಬವರು ಆಸ್ಪತ್ರೆಗೆ ದಾಖಲು ಮಾಡಿದರು.
ಆ ಎರಡು ಕಾರುಗಳ ಮಾಲೀಕರು ಪಶುಪತಿ ಭಟ್ ಮತ್ತು ರವಿಶಂಕರ್ ಭಟ್ ಇಬ್ಬರು ಡಿಕ್ಕಿ ಹೊಡೆದು ಕಾರುಗಳನ್ನು ನೋಡುವುದು, ಅವರಿಗೆ ಏನು ಆಗಿದೆ, ಇವರಿಗೆ ಏನು ಆಗಿದೆ ಎಂದು ಕೇಳುವುದು ಹೊರತು ಬೇರೆ ಗಾಯಾಳುಗಳನ್ನು ಆಸ್ಪತ್ರೆಗೆ ಕೊಂಡೊಯ್ಯುವ ಬಗ್ಗೆ ಮಾತನಾಡುತ್ತಿರಲಿಲ್ಲ. ಅವರಿಬ್ಬರ ಮಾತಿನಲ್ಲಿ ನನಗೆ ಗೊತ್ತಾಯಿತು ಕಣ್ಣು ಮುಚ್ಚಿ ಕಣ್ಣು ತೆರೆದು ಕೊಳ್ಳುವಾಗ ಡಿಕ್ಕಿ ಹೊಡೆದಿತ್ತು ಎಂದು.
ಅಷ್ಟರಲ್ಲಿ ನಾನು ಆ ವಯಸ್ಸಿನ ದಂಪತಿಯವರನ್ನು ನೋಡಲು ಆಸ್ಪತ್ರೆಗೆ ಹೋದೆ. ಆಗ ರಿಕ್ಷಾ ಚಾಲಕ ಮಾಲಕ ಮಜೀದ್ ಕಣಿಯೂರು ಎಂಬವರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಇಲ್ಲಿ ಮಜೀದ್ ಅನ್ನುವವರು ಯಾವುದೇ ಜಾತಿ ಧರ್ಮ ಭಾಷೆ ಇಲ್ಲ ನೋಡಿಲ್ಲ. ಆಸ್ಪತ್ರೆಗೆ ಹೋಗಿ ನೋಡುವಾಗ ಈ ವಯಸ್ಸಿನ ದಂಪತಿಗಳು ನಮ್ಮೂರಿನ ಬೆನಕ ಸ್ಟುಡಿಯೊ ವಿಡಿಯೋ ಮಾಲೀಕರಾದ ಕುಮಾರಸ್ವಾಮಿ ಅವರ ದೂರದ ಸಂಬಂಧಿ. ಅಲ್ಲಿ ನೋಡುವಾಗ ಕಣಿಯೂರು ಮಜೀದ್ ಅವರ ಅಕ್ಕ ಅಪ್ಸ ಕೂಡ ಈ ವಯಸ್ಸಿನ ದಂಪತಿಗಳನ್ನು ನೋಡಲು ಬಂದಿದ್ದರು. ಇಲ್ಲಿ ಎಲ್ಲಿದೆ ಜಾತಿ ಧರ್ಮ ಭಾಷೆ.
ನಿಮ್ಮನ್ನು ನನ್ನ ತಮ್ಮ ರಿಕ್ಷಾದಲ್ಲಿ ಕರೆದುಕೊಂಡು ಬಂದಿದ್ದು ಎಂದು ಪಶುಪತಿ ಭಟ್ ದಂಪತಿಗೆ ಅಪ್ಸ ಹೇಳುತ್ತಿದ್ದರು, ಆಗ ಆ ದಂಪತಿ ಅಪ್ಸ ಎನ್ನುವ ಮುಸ್ಲಿಂ ಸಮುದಾಯದ ಅಕ್ಕರಿಗೆ ಎರಡು ಕೈ ಮುಗಿದು ನಮಸ್ಕಾರ ಮಾಡಿ ಬಹಳ ಉಪಕಾರ ಆಯಿತು. ನಿಮಗೆ ಮತ್ತು ನಿಮ್ಮ ತಮ್ಮನಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದಾಗ. ನನ್ನ ಕಣ್ಣಿನಲ್ಲಿ ನನಗೆ ಗೊತ್ತಾಗದೆ ನೀರು ಬಂತು. ಅವರಬ್ಬರು ಕೈಮುಗಿದು ನಮಸ್ಕಾರ ಮಾಡಿದಾಗ ಆಪ್ಸ ಅವರು ನಾವು ಮನುಷ್ಯರು ಅಲ್ವಾ ಸಹಾಯ ಮಾಡಬೇಕಾದ್ದು ನಾವೇ ಹೊರತು ಬೇರೆ ಯಾರೂ ಅಲ್ಲ ಎಂದರು.
ಬಳಿಕ ವಿಟ್ಲ ಸ್ಟೇಷನ್ ನಲ್ಲಿ ಎರಡು ಕಾರುಗಳ ಮಾಲೀಕರಾದ ಪಶುಪತಿ ಭಟ್ ಮತ್ತು ರವಿಶಂಕರ್ ಭಟ್ ಮತ್ತು ಕುಮಾರಸ್ವಾಮಿ ಬೆನಕ ಹೋಗಿದ್ದಾಗ ಅಲ್ಲಿಗೆ ಬಂದ ಸಿದ್ದಿಕ್ ಪೊಯ್ಯಗದ್ದೆ ಎಂಬವರು ನಿಮಗೆ ಏನಾದರೂ ಸಹಾಯ ಬೇಕಿದ್ದರೆ ಹೇಳಿ, ಸಹಿ ಏನಾದರು ಬೇಕಾ ಎಂದು ಕೇಳಿದರು.
ಇಲ್ಲಿ ಎಲ್ಲಿ ಜಾತಿ, ಎಲ್ಲಿ ಧರ್ಮ, ಎಲ್ಲಿ ಭಾಷೆ, ಇದು ಅಲ್ವಾ ಮಾನವಿಯತೆ ಇದು ಮನುಷ್ಯತ್ವ ಅಲ್ವಾ..
– ಕೆ.ಪಿ ಗಂಗಾಧರ ಕನ್ಯಾನ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.