(www.vknews.in) : SKSSF ಉದ್ದಬೆಟ್ಟು ಶಾಖೆ ವತಿಯಿಂದ ಸಮಸ್ತ ಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಜರುಗಿತು. ಸಯ್ಯದ್ ಹಸನ್ ಹೈದ್ರೋಸ್ ಜುಮ್ಮಾ ಮಸ್ಜಿದ್ ಉದ್ದಬೆಟ್ಟು ಖತೀಬರಾದ ಬಹು| ಶರೀಫ್ ದಾರಿಮಿ ಧ್ವಜಾರೋಹಣ ಹಾಗೂ ದುವಾ ನೆರವೇರಿಸಿದರು. SKSSF ಉದ್ದಬೆಟ್ಟು ಶಾಖೆ ಅಧ್ಯಕ್ಷರಾದ ನಸ್ಫಾನ್ ಉದ್ದಬೆಟ್ಟು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮೂಲಭೂತ ಸೌಕರ್ಯ ವಂಚಿತ ಅಂಗನವಾಡಿ ಕೇಂದ್ರಕ್ಕೆ ಉದ್ದಬೆಟ್ಟು SKSSF ಶಾಖೆ ವತಿಯಿಂದ ಗೋಡ್ರೆಜ್, ಫ್ಯಾನ್ ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಉದ್ದಬೆಟ್ಟು ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಉಮ್ಮರ್ ಮಯ್ಯದ್ಧಿ ಬೊಲ್ಲಂಕಿಣಿ, SKSSF ಉದ್ದಬೆಟ್ಟು ಶಾಖೆ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್, ಉದ್ದಬೆಟ್ಟು, ಮಸ್ಜಿದ್ ಕೋಶಾಧಿಕಾರಿ ಅಬ್ದುಲ್ ಲತೀಫ್, ಪತ್ರಕರ್ತ ಜಬ್ಬಾರ್ ಮಲ್ಲೂರು, ಸಾಮಾಜಿಕ ಕಾರ್ಯಕರ್ತ ಅಲ್ತಾಫ್ ದೆಮ್ಮಲೆ, SKSSF ಉದ್ದಬೆಟ್ಟು ಪ್ರಧಾನ ಕಾರ್ಯದರ್ಶಿ ಸುಹೈಲ್ ಉದ್ದಬೆಟ್ಟು ಸೇರಿದಂತೆ ಊರಿನ ಹಿರಿಯರು, SKSSF ಸದಸ್ಯರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.