ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಮೂರು ದಿನದ ಹಿಂದೆ ರಾಜಾಸ್ಥಾನದ ಉದಯಪುರ್ ಎಂಬಲ್ಲಿ ಟೈಲರ್ ಒಬ್ಬರನ್ನು ಕತ್ತು ಸೀಳಿ ಕೊಂದ ಘಟನೆಯನ್ನು ವಿಷಯವಾಗಿ ತೆಗೆದುಕೊಂಡು ಜುಮಾಅ ಭಾಷಣವನ್ನು ಆರಂಭಿಸಿದ ಸಂಪ್ಯ ಖತೀಬರಾದ ಅಲ್ ಹಾಜಿ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರು ಇಸ್ಲಾಂ ಎಂಬುವುದು ಶಾಂತಿ,ಸಹನೆಯನ್ನು ಸಾರುವ ಧರ್ಮವಾಗಿದ್ದು, ಹಿಂದೂ ಧರ್ಮವೂ ಕೂಡ ಎಲ್ಲೂ ಹಿಂಸೆಯನ್ನು ಪ್ರಚೋದಿಸುವುದಿಲ್ಲ. ತಪ್ಪು ಮಾಡಿದವರನ್ನು ಕ್ಷಮಿಸುವ ಮಹಾಗುಣವನ್ನು ಎಲ್ಲಾ ಧರ್ಮಗಳು ಕಲಿಸಿಕೊಟ್ಟಿರುವಾಗ ಉದಯಪುರ್ ನಲ್ಲಿ ಘಟನೆಯು ಅಮಾನವೀಯವಾಗಿದ್ದು ಕತ್ತು ಸೀಳಿ ಕೊಲ್ಲುವುದೆಂದರೆ ಅದನ್ನು ಸಹಿಸಲಾಗದು ಎಂದರು.
ಕೊಂದವರು ನಾಮಮಾತ್ರ ಮುಸ್ಲಿಮರಾಗಿದ್ದು ಅವರನ್ನು ಇಸ್ಲಾಮಿನ ಚೌಕಟ್ಟಿನೊಳಗಡೆ ಬದುಕಲು ಅವಕಾಶ ನೀಡಬಾರದು. ಅವರನ್ನು ಕಾನೂನಿನ ಕಟಕಟೆಯಲ್ಲಿ ನಿಲ್ಲಿಸಿ ಕಠಿಣ ಶಿಕ್ಷೆ ನೀಡಿ ಶಿಕ್ಷಿಸಲು ಸರಕಾರ ಕಾನೂನು ಅಧಿನಿಯಮವನ್ನು ಹೊರಡಿಸಬೇಕೆಂದು ಸರಕಾರವನ್ನು ಒತ್ತಾಯಿಸಿದರು.
ಹಿಂಸೆ, ಅನ್ಯಾಯ, ಅನಾಚಾರದ ಮೂಲಕ ದೇಶದಲ್ಲಿರುವ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯ ಕದಡುವವರನ್ನು ತಕ್ಷಣವೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಯಾಗಿಸಿ ನಮ್ಮ ದೇಶದಲ್ಲಿರುವ ಪ್ರತಿಯೊಂದು ಸಮುದಾಯದ ಜನರು ಯಾವುದೇ ಭಯವಿಲ್ಲದೆ ಭದ್ರತೆಯುಳ್ಳ ಸ್ವಚ್ಚಂದವಾದ ನೆಮ್ಮದಿಯ ಬದುಕು ಸಾಗಿಸಲು ಕರಡು ರೂಪಿಸಬೇಕೆಂದು ಸರಕಾರವನ್ನು ಮನವಿ ಮಾಡಿಕೊಂಡರು.
ದಯೆ, ಕರುಣೆ, ಮಾನವೀಯತೆಯನ್ನು ಮರೆತು ಮೃಗೀಯ ಮನಸ್ಥಿತಿಗೆ ಮಾನವೀಯ ಮೌಲ್ಯವನ್ನು ಅಳವಡಿಸಿಕೊಂಡು ಒಳ್ಳೆಯವರಾಗಿ ಬದುಕುವ ಮನಸ್ಸನ್ನು ಸರ್ವಶಕ್ತನಾದ ಅಲ್ಲಾಹು ದಯಪಾಲಿಸಲಿ ಎಂಬ ದುವಾದೊಂದಿಗೆ ತಮ್ಮ ಜುಮಾಅ ಭಾಷಣವನ್ನು ಅವರು ಮುಕ್ತಾಯಗೊಳಿಸಿದರು.
– ಮುಸ್ತಫಾ ನೆಕ್ಕರೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.