(www.vknews.in) : ಪ್ರವಾದಿ صلي الله عليه وسلم ರ ಮಕ್ಕಾದಿಂದ ಮದೀನಾದ ಯಾತ್ರೆಯನ್ನು ಹಿಜ್ರಾ ಎಂದು ಕರೆಯಲಾಗುತ್ತದೆ.ಖಲೀಫಾ ಉಮರ್ (ರ) ಹಿಜ್ರಾ ಕ್ಯಾಲೆಂಡರ್ ವ್ಯವಸ್ಥೆಯನ್ನು ಜಾರಿಗೆ ತರುತ್ತಾರೆ. ಅದರಂತೆ ಇಸ್ಲಾಮಿಕ್ ಹಿಜರಿ ಕ್ಯಾಲೆಂಡರ್ ಪ್ರಕಾರ “ಮುಹರ್ರಂ” ವರ್ಷದ ಪ್ರಾರಂಭ.ಪಾಶ್ಚಿಮಾತ್ಯ ಸಂಸ್ಕೃತಿಯಲ್ಲಿ ಲೀನವಾದ ಆಧುನಿಕ ಮುಸ್ಲಿಂ ಸಮಾಜಕ್ಕೆ ಇದು ತೀರಾ ಅಪರಿಚಿತವಾಗಿರಬಹುದು ಅಥವಾ ತಿಳುವಳಿಕೆ ಇದ್ದರೂ ಅವುಗಳನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಕೂಡ ಕಾರಣ.
ಮುಹರ್ರಂ ಶಕೆ ಆರಂಭವಾಗೂದರೊಂದಿಗೆ ಹೊಸ ವರುಷ ಪ್ರಾರಂಭವಾಗೂದು. ಇನ್ನು ಹೊಸ ವರುಷವೆಂದು ಆಚರಣೆಗೆ ಸೀಮಿತವಾಗಿಲ್ಲ ಅಥವಾ ಅನಾಚಾರಗಳಿಗೆ ಯಾವುದೇ ಪ್ರೋತ್ಸಾಹ ವಿಲ್ಲ. ಒಬ್ಬ ವ್ಯಕ್ತಿಯ ಆಯಸ್ಸಿನ ಕಡಿತವಾಗಿದೆ ಹೊಸ ವರುಷದ ಪ್ರಾರಂಭ ಎಂಬುದನ್ನು ನಾವು ಮರೆತಿದ್ದೇವೆ.ಆದ್ದರಿಂದಲೇ ವಿದ್ವಾಂಸರು ಹೇಳುತ್ತಾರೆ ಮನುಷ್ಯನ ಜೀವನದಲ್ಲಿ ಬದಲಾವಣೆ ಅಗತ್ಯ ಮತ್ತು ಅವುಗಳನ್ನು ಕಾರ್ಯಚಟುವಟಿಕೆಗಳಿಗಿಳಿಸಿದರೆ ಮಾತ್ರವೇ ಇಹಪರ ವಿಜಯ ಸಾಧ್ಯ.. ಇನ್ನು ಚಿಂತನೆಗಳ ವಿಚಾರಕ್ಕೆ ಬರೋಣ..
ಇಲ್ಲಿ ಚಿಂತನೆಯನ್ನು ಎರಡು ವಿಭಾಗಗಳಾಗಿ ಮಾಡುವ.
1.ಇಹದ ಚಿಂತನೆ. 2.ಪರದ ಚಿಂತನೆ.
ಇಹದ ಚಿಂತನೆ: “ಬದುಕಿದು ಜಟಕಾ ಬಂಡಿ” ಹಿರಿಯರ ಮಾತಿನಂತೆ,ಜೀವನದ ಜಂಜಾಟದಲ್ಲಿ ಬೇಸತ್ತವರೇ ಹೆಚ್ಚು. ಜೀವನದಲ್ಲಿ ಕ್ರಮಗಳಿಲ್ಲದೇ,ಪ್ರಾಣಿಯಂತೆ ಜೀವಿಸುವವರೇ ಯಥೇಚ್ಚ!!!. ಇಹದ ಜೀವನ ಗೆಲುವಾದರೆ ಪರದ ಜೀವನ ಸುಗಮ ಎಂಬುದು ಹದೀಸ್, ಕುರ್ಆನಿನಿಂದ ಸಾಬೀತಾದ ಕಾರ್ಯ.ಅದಕೆಂದೇ ಕುರ್ಆನಿನಲ್ಲಿ ಪ್ರಾರ್ಥನೆಯೊಂದನ್ನು ನಿರ್ದೇಶಿಸಲಾಗಿದೆ.ಜೀವನ ಕ್ರಮದಲ್ಲಿ ಬದಲಾವಣೆ ತಂದರೆ ನೆಮ್ಮದಿ ಮತ್ತು ಸಂತೃಪ್ತಿಯನ್ನು ಕಾಣಬಹುದು.ಉದಾ..ಒಬ್ಬ ವ್ಯಕ್ತಿ ಆತನ ಕುಟುಂಬದ ಖರ್ಚುವೆಚ್ಚಗಳನು ಭರಿಸಲು, ಹೊಟ್ಟೆಗೆ ಬಟ್ಟೆಗಾಗಿ ದುಡಿಯುತ್ತಿರುತ್ತಾನೆ.ದಿನವೂ ಗಾಣದೆತ್ತಿನಂತೆ ದುಡಿಯುವ ಆತ ಉಳಿಕೆ ಗಳಿಕೆಗಳಿಲ್ಲದೆ ಖರ್ಚು ಮಾಡುತ್ತಾನೆ.ಇದರಿಂದ ಆತನ ಜೀವನದಲ್ಲೇನು ಬದಲಾವಣೆಯಾಗದು. ಇದರಿಂದ ಜಿಗುಪ್ಸೆ ಹೊಂದಿ ದುರಂತದ ದಾರಿ ಹಿಡಿಯುವವರೇ ಹೆಚ್ಚು.ಅದರಿಂದ ಈ ವರ್ಷದ ಆಯ ವ್ಯಯಗಳು,ಯೋಜನೆಗಳು ಮತ್ತು ಉಳಿಕೆ ಗಳಿಕೆಗಳನ್ನು ಮೊದಲೇ ಚಿಂತಿಸಿ, ಪತ್ನಿ ಮಕ್ಕಳೊಂದಿಗೆ ಚರ್ಚಿಸಿ ಅವರೊಂದಿಗೆ ವಿಷಯದ ಕುರಿತು ಮನದಟ್ಟು ಮಾಡಿದರೆ ಜೀವನ ಉತ್ತಮ ಮತ್ತು ಆನಂದದಿಂದ ಸಾಗೂದು ನಿಸ್ಸಂಶಯ!!!
ಪರದ ಚಿಂತನೆ: ಇದನ್ನು ಹೇಳಬೇಕಾದರೆ ಮುಗಿಯುವ ಸಾಲುಗಳಲ್ಲ. ಪವಿತ್ರ ಕುರ್ಆನಿನಲ್ಲಿ ಅಲ್ಲಾಹನು ಹೇಳುತ್ತಾನೆ:”ಮನುಷ್ಯ ಮತ್ತು ಜಿನ್ನ್ ವರ್ಗಗಳನ್ನು ಆರಾಧಿಸುವ ಸಲುವಾಗಿ ಸೃಷ್ಟಿಸಲಾಗಿದೆ ” ಆರಾಧನೆಯ ವಿಚಾರ ಬಂದಾಗ ಮೊದಲನೇ ಸಾಲಿನಲ್ಲಿ ನಿಲ್ಲೂದು ನಮಾಝ್.!! ವಿಶ್ವಾಸಿಗಳಲಲ್ಲಿ ಬಹುತೇಕರು ಗಮನ ನೀಡದಿರೂದುೂ ಈ ನಮಾಝಿನ ಕಾರ್ಯದಲ್ಲಿ!!! ಹೊಸವರುಷದ ಚಿಂತನೆಯಲ್ಲಿ ಇದನ್ನು ಪ್ರಮುಖವಾಗಿರಿಸೂದು ಉತ್ತಮ.ಖಳಾಅ್ ಆಗದೆ ವಮಾಝ್ ನಿರ್ವಹಿಸಲು ಮೊದಲೇ ಸಂಕಲ್ಪಮಾಡಿಟ್ಟುಕೊಳ್ಳಿ. ಅಲ್ಲಾಹನು ತೌಫೀಖ್ ನೀಡಲಿ..
ಅದೇ ರೀತಿ ಸುನ್ನತ್ ನಮಾಜುಗಳನ್ನು ಲೋಪವಿಲ್ಲದೆ ನಿರ್ವಹಿಸಲು ಮರೆಯಬೇಡಿ!!. ಆರಾಧನೆಗಳಾದ ಉಪವಾಸ ಝಕಾತ್ ದಾನ ಧರ್ಮಗಳಿಗೆ ಪ್ರಾಧಾನ್ಯತೆ ನೀಡಿ.ಹೃದಯವನ್ನು ನಿಷ್ಕಳಂಕವಾಗಿಸಲು ಚಿಂತನೆ ನಡೆಸಿ. ಮಾಡಿದ ಪಾಪಗಳಿಗೆ ಪಶ್ಚಾತ್ತಾಪ ಮಾಡಿ ಮತ್ತು ಆ ಪಾಪ ಕೃತ್ಯಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳಿ. ಉಪಸಂಹಾರ…
ವಿದ್ವಾಂಸರು ಹೇಳುತ್ತಾರೆ “ಪ್ರಾರಂಭ ಉತ್ತಮವಾಗಿದ್ದರೆ ಅಂತ್ಯ ಅತ್ಯುತ್ತಮವಾಗೂದು. ಆದ್ದರಿಂದ ವರುಷಗಳು ಉರುಳಿ ಹೋದಂತೆ ಜೀವನದ ಬದಲಾವಣೆ ನಾವೇ ಮಾಡಿಕೊಂಡರೇ ವಿಜಯಿಗಳಾಗಲು ಸಾಧ್ಯ. ದಿನನಿತ್ಯ ಜೀವನಕೆ ಕೆಲವೊಂದು ಕ್ರಮಗಳನ್ನಿರಿಸಿ,ಜೀವನ ಹಸನಾಗಿಸಿ. ಅಲ್ಲಾಹನು ಇಹ ಪರ ಲೋಕದ ವಿಜಯಿಗಳಾಗಲು ಅನುಗ್ರಹಿಸಲಿ ಆಮೀನ್ ಯಾ ರಬ್ಬಲ್ ಆಲಮೀನ್
– ಹನೀಫಿ ನಿಡಿಗಲ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.