ಮುಂಬೈ (ವಿಶ್ವ ಕನ್ನಡಿಗ ನ್ಯೂಸ್) : ಟ್ವೆಂಟಿ-20 ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಸೋಲಿನ ಬಗ್ಗೆ ಚರ್ಚೆಗಳು ಕೊನೆಗೊಳ್ಳುತ್ತಿಲ್ಲ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕು ಎಂಬ ಬೇಡಿಕೆಗಳು ಹಲವು ಕಡೆಗಳಿಂದ ಹೆಚ್ಚುತ್ತಿವೆ. ಇದೇ ವೇಳೆ ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಭಾರತದ ಸೋಲಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸೋತಿತ್ತು.
ನಾಯಕತ್ವ ಬದಲಾವಣೆ ಪಂದ್ಯದ ಫಲಿತಾಂಶವನ್ನೇ ಬದಲಿಸುತ್ತದೆ ಎಂದು ಭಾವಿಸಬೇಡಿ. ತಂಡದ ಧೋರಣೆ ಬದಲಾಗಬೇಕು. ಆರಂಭಿಕರು ಮುಕ್ತವಾಗಿ ಆಡಬೇಕು (ಕನಿಷ್ಠ ಒಬ್ಬರು). ತಂಡಕ್ಕೆ ವಿಕೆಟ್ ಪಡೆಯುವ ಮಣಿಕಟ್ಟಿನ ಸ್ಪಿನ್ನರ್ ಅಗತ್ಯವಿದ್ದು, ವೇಗಿಗಳಲ್ಲಿ ಬದಲಾವಣೆಯ ಅಗತ್ಯವಿದೆ ಎಂದು ಇರ್ಫಾನ್ ಪಠಾಣ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ನಾಯಕತ್ವ ವಹಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಪಾಂಡ್ಯ ಅವರನ್ನು ನಾಯಕರನ್ನಾಗಿ ಪರಿಗಣಿಸಬಾರದು ಎಂಬುದು ಪಠಾಣ್ ನಿಲುವು. ‘ಹಾರ್ದಿಕ್ ಪಾಂಡ್ಯ ಒಬ್ಬ ಪೇಸ್ ಆಲ್ ರೌಂಡರ್. ಅವರಿಗೆ ಗಾಯದ ಸಮಸ್ಯೆಯೂ ಇದೆ. ವಿಶ್ವಕಪ್ಗೂ ಮುನ್ನ ನಾಯಕ ಗಾಯಗೊಂಡರೆ? ಮತ್ತೊಬ್ಬ ಆಟಗಾರ ನಾಯಕನಾಗಿ ತಯಾರಾಗದಿದ್ದರೆ ತಂಡ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಇರ್ಫಾನ್ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.
Indian cricket going forward 1) Openers playing freely, At least one of them. 2) Wrist spinner (wicket taker ) is must. 3) Tear away fast bowler. 4) please don’t think changing captaincy will give us changed result. It’s the approach what needs to change. — Irfan Pathan (@IrfanPathan) November 15, 2022
Indian cricket going forward 1) Openers playing freely, At least one of them. 2) Wrist spinner (wicket taker ) is must. 3) Tear away fast bowler. 4) please don’t think changing captaincy will give us changed result. It’s the approach what needs to change.
— Irfan Pathan (@IrfanPathan) November 15, 2022
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.