ಚಿಕ್ಕಬಳ್ಳಾಪುರ,(ವಿಶ್ವ ಕನ್ನಡಿಗ ನ್ಯೂಸ್): ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಬೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪ್ರಧಾನ ಮಂತ್ರಿ ವನಧನ್ ವಿಕಾಸ ಯೋಜನೆಯಡಿ ರಚಿಸಲಾದ ವನಧನ್ ವಿಕಾಸ ಕೇಂದ್ರಗಳ ಸಮಿತಿಯಲ್ಲಿನ ಸದಸ್ಯರಿಗೆ ದಿವಸಗಳ ವಸತಿ ಸಹಿತ ತರಬೇತಿಯನ್ನು ಆಯೋಜಿಸಲಾಗಿತ್ತು.
ಸರ್ಕಾರದ ನಿರ್ದೇಶನದಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈಗಾಗಲೇ ಬಾಗೇಪಲ್ಲಿ, ಚಿಂತಾಮಣಿ, ಗೌರಿಬಿದನೂರು ಹಾಗೂ ಶಿಡ್ಲಘಟ್ಟ, ತಾಲ್ಲೂಕುಗಳಲ್ಲಿ ತಲಾ ಒಂದರಂತೆ ಪ್ರಧಾನ ಮಂತ್ರಿ ವನಧನ್ ವಿಕಾಸ ಯೋಜನೆಯಡಿ ವನಧನ್ ವಿಕಾಸ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಪ್ರಧಾನ ಮಂತ್ರಿ ವನಧನ್ ವಿಕಾಸ ಯೋಜನೆಯಡಿ ರಚಿಸಲಾದ ವನಧನ್ ವಿಕಾಸ ಕೇಂದ್ರಗಳ ಸಮಿತಿಯಲ್ಲಿನ ಸದಸ್ಯರಿಗೆ ವನಧನ್ ವಿಕಾಸ್ ಕೇಂದ್ರಗಳ ಮೂಲಕ ಸ್ಥಳಿಯವಾಗಿ ಪರಿಶಿಷ್ಟ ಪಂಗಡಗದ ಕೃಷಿಕರು ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ, ಪ್ಯಾಕಿಂಗ್, ಬ್ರಾಂಡಿಂಗ್ ಹಾಗೂ ಮಾರುಕಟ್ಟೆ, ಸಂಪರ್ಕ ಒದಗಿಸಲು ಅಗತ್ಯವಿರುವ ತರಬೇತಿ, ಮಾರ್ಗದರ್ಶನ, ಮಾರುಕಟ್ಟೆ ಸೌಲಭ್ಯದ ಕುರಿತು ಮಾಹಿತಿ ನೀಡುವುದರ ಜೊತೆಗೆ ಅಗತ್ಯವಾದ ಯಂತ್ರೋಪಕರಣಗಳನ್ನು ಸಹ ಖರೀದಿಸಲು ಅವಕಾಶವಿರುತ್ತದೆ.
ಪ್ರತಿ ವನ್ಧನ್ ವಿಕಾಸ ಕೇಂದ್ರದಲ್ಲಿ ಗುರುತಿಸಲಾಗಿರುವ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಶ್ರೀ ಮಾತಾ ಶಬರಿ ಪ್ರಧಾನಮಂತ್ರಿ ವನಧನ ವಿಕಾಸದ ಕೇಂದ್ರದ 45 ಜನ ಸದಸ್ಯರು ಹಾಗೂ ಒಬ್ಬ ವನಸಖಿಗೆ ನಾಲ್ಕು ದಿವಸಗಳ ಮೌಲ್ಯವರ್ಧನೆ, ಪ್ಯಾಕಿಂಗ್, ಬ್ರಾಂಡಿಂಗ್ ಹಾಗೂ ಮಾರುಕಟ್ಟೆಯ ಸಂಪರ್ಕದ ಬಗೆಗಿನ ವಸತಿ ಸಹಿತ ತರಬೇತಿ ನೀಡಲಾಗಿದೆ ಎಂದು ಎನ್ಆರ್ಎಲ್ಎಂ ಜಿಲ್ಲಾ ಕಾರ್ಯಕ್ರಮದ ವ್ಯವಸ್ಥಾಪಕ ಎ.ಎಸ್.ಬಿರಾದರ್ ತಿಳಿಸಿದ್ದಾರೆ.
ವರದಿ: ತೇ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.