ಕೋಲಾರ (ವಿಶ್ವ ಕನ್ನಡಿಗ ನ್ಯೂಸ್): ನಮ್ಮ ಪಕ್ಷದ ನಾಯಕರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಬಗ್ಗೆ ಸ್ವಪಕ್ಷದವರಿಗೆ ಗೊತ್ತಿರುತ್ತದೆ ಹೊರತು ಬೇರೆ ಪಕ್ಷದವರಿಗೆ ಹೇಗೆ ಗೊತ್ತಿರುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪುತ್ರ , ಶಾಸಕ ಡಾ.ಎಸ್.ಯತೀಂದ್ರ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಟಾಂಗ್ ನೀಡಿದರು.
ಕೋಲಾರಕ್ಕೆ ಭೇಟಿ ನೀಡಿದ್ದ ವೇಳೆ,ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಮಾಡುವುದಿಲ್ಲ ಎಂದು ಬಿ.ಎಸ್. ಯಡಿಯೂರಪ್ಪ ಇತ್ತೀಚೆಗೆ ನೀಡಿದ್ದ ಹೇಳಿಕೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಯತೀಂದ್ರ ನಮ್ಮ ಪಕ್ಷದವರ ಸ್ಪರ್ಧೆ ವಿಚಾರ ಬೇರೆ ಪಕ್ಷದವರಿಗೆ ಏನು ಗೊತ್ತಿರುತ್ತದೆ ಎಂದರು. ಕೋಲಾರದಲ್ಲಿ ಸ್ಪರ್ಧೆ ಮಾಡುವುದಾಗಿ ಈಗಾಗಲೇ ನನ್ನ ತಂದೆ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ, ಹೈಕಮಾಂಡ್ ಒಪ್ಪಿದರೆ ಸ್ಪರ್ಧಿಸಲಿದ್ದಾರೆ.
ಆ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಮನೆಯನ್ನು ಎಂಎಲ್ಸಿ ಅನಿಲ್ಕುಮಾರ್ , ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ವ್ಯವಸ್ಥೆ ಮಾಡಿದ್ದು , ಮನೆ ನೋಡಿಕೊಂಡು , ಕೋಲಾರದ ಮುಖಂಡರು , ಕಾರ್ಯಕರ್ತರನ್ನು ಭೇಟಿಯಾಗಲು ನಾನು ಬಂದಿದ್ದೇನೆ.
ಮನೆ ಚೆನ್ನಾಗಿದೆ , ತಂದೆಯವರು ಒಮ್ಮೆ ನೋಡಿ ತೀರ್ಮಾನ ಮಾಡಲಿದ್ದಾರೆ, ವಾಸ್ತು ಮೇಲೆ ನನಗೆ ಹಾಗೂ ನನ್ನ ತಂದೆಗೆ ನಂಬಿಕೆಯಿಲ್ಲ ಎಂದರು . ವರುಣಾ ಕ್ಷೇತ್ರಕ್ಕೂ ಬಂದು ಸ್ಪರ್ಧೆ ಮಾಡುವಂತೆ ತಂದೆಗೆ ಹೇಳಿದ್ದೇನೆ . ಆದರೆ , ಕೋಲಾರದಲ್ಲಿ ಸ್ಪರ್ಧೆ ಮಾಡಬೇಕು . ಅದಕ್ಕೆ ಹೈಕಮಾಂಡ್ ಒಪ್ಪಬೇಕು ಎನ್ನುವ ಮನಸ್ಸು ಅವರದ್ದಾಗಿದೆ.
ಇಲ್ಲಿಯೇ ಸ್ಪರ್ಧೆ ಘೋಷಣೆಯಾದರೆ ಕೊನೆಯ ಕ್ಷಣದಲ್ಲಿ ಸಿದ್ಧತೆಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ . ಅದಕ್ಕಾಗಿ ಸಿದ್ಧತೆಗಳನ್ನು ಮಾಡಿಕೊಂಡು ಬೂತ್ ಮಟ್ಟದಲ್ಲಿ ಕೆಲಸ ಪ್ರಾರಂಭಿಸಬೇಕಿದೆ ಎಂದರು. ಸ್ಪರ್ಧೆ ವಿಚಾರವಾಗಿ ದೈವವನ್ನು ಕೇಳಲು ನಾವು ಹೋಗಿರಲಿಲ್ಲ . ಪೂಜಾ ಕಾರ್ಯಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿಚಾರ ಬಂದಿದೆ . ನಮ್ಮ ಮನೆ ದೇವರು ಸ್ವಗ್ರಾಮದಲ್ಲಿ ಇದೆ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇವೆ . ನಾವು ಭೇಟಿ ನೀಡಿದ್ದ ದೇವಾಲಯವು ಮನೆ ದೇವರು ಅಲ್ಲ.
ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ವಿರೋಧಿಗಳಿಗೆ ಹೇಳಬೇಕಾಗಿರುವುದು ಏನೂ ಇಲ್ಲ . ಕೋಲಾರದಲ್ಲಿ ಕಾಂಗ್ರೆಸ್ ಅಲೆಯಿದೆ . ಬಿಜೆಪಿಯ ದುರಾಡಳಿತದ ಬಗ್ಗೆ ಆಕ್ರೋಶವಿದ್ದು , ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಮಾಡಿರುವ ಜನಪರ ಕೆಲಸದ ಬಗ್ಗೆಯೂ ಒಲವಿದೆ ಎಂದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.