ಪಯ್ಯನ್ನೂರು (www.vknews.in) ; ಮನೆಯಲಿ ನೀರು ತುಂಬಿದ ಬಕೆಟ್ಗೆ ಬಿದ್ದು ಪುಟ್ಟ ಮಗು ಮೃತಪಟ್ಟ ಘಟನೆ ನಡೆದಿದೆ. ಪಯ್ಯನ್ನೂರು ಕಾರದ ಆಟೋರಿಕ್ಷಾ ಚಾಲಕ ರಿಯಾಝ್ ಮತ್ತು ಉವೈಸಾ ದಂಪತಿಯ ಪುತ್ರಿ ಆಯಿಷಾ ಮೃತರು.
ಎರಡು ದಿನಗಳ ಹಿಂದೆ ಮಗು ಆಕಸ್ಮಿಕವಾಗಿ ಬಕೆಟ್ನಲ್ಲಿದ್ದ ನೀರಿಗೆ ಬಿದ್ದ ಮಗುವನ್ನು ಪರಿಯಾರಂ ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಗುರುವಾರ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.