ಧಾರವಾಡ (www.vknews.com) : ಕೋವಿಡ್-19 (ಕೊರೋನಾ) ಸೋಂಕು ಹರಡುವಿಕೆ ತಡೆಗಟ್ಟುವಲ್ಲಿ ಪ್ರಸ್ತುತ ದೇಶವ್ಯಾಪಿಯಾಗಿ ಜಾರಿಯಲ್ಲಿರುವ ಲಾಕ್ಡೌನ್ ಪ್ರಕ್ರಿಯೆ ಹಿನ್ನೆಲೆಗೆ ಅನುಗುಣವಾಗಿ ಮೇ ತಿಂಗಳÀಲ್ಲಿ ನಡೆಯಬೇಕಿದ್ದ ರಾಷ್ಟ್ರ ಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣ ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.
2019ರ ನವ್ಹೆಂಬರ್ 17 ರಂದು ಜರುಗಿದ್ದ ರಾಜ್ಯಮಟ್ಟದ ‘ನ್ಯಾಷನಲ್ ಟ್ಯಾಲೆಂಟ್ ಸರ್ಚ ಎಕ್ಸಾಮಿನೇಷನ್ (ಎನ್ಟಿಎಸ್ಇ)’ ಪರೀಕ್ಷೆಗೆ ಒಟ್ಟು 1,16,382 ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 393 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದಾರೆ. ಈ ಫಲಿತಾಂಶವನ್ನು ಡಿ.ಎಸ್.ಇ.ಆರ್.ಟಿ. ಅಧಿಕೃತ ಜಾಲತಾಣ www.dsert.kar.nic.in ದಲ್ಲಿ ಪ್ರಕಟಿಸಲಾಗಿದ್ದು, ಸಂಬಂಧಿಸಿದ ಅಭ್ಯರ್ಥಿಗಳು ಪರಿಶೀಲಿಸಬಹುದು.
ರಾಷ್ಟ್ರ ಮಟ್ಟದ ರಾಷ್ಟ್ರೀಯ ಪ್ರತಿಭಾನ್ವೇಷಣ ಪರೀಕ್ಷೆಯ ಮುಂದಿನ ದಿನಾಂಕ, ಪ್ರವೇಶ ಪತ್ರ(ಹಾಲ್ ಟಿಕೆಟ್) ಮುಂತಾದ ಮಾಹಿತಿಗಳನ್ನು ಭಾರತ ಸರಕಾರದ ಸ್ವಾಯತ್ ಸಂಸ್ಥೆಯಾಗಿರುವ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ಅಧಿಕೃತ ಜಾಲತಾಣ www.ncert.kar.nic.in ಮೂಲಕ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಶಿಕ್ಷಣ ಇಲಾಖೆಯ ಜಿಲ್ಲಾ ಅಭಿವೃದ್ಧಿ ಉಪನಿರ್ದೇಶಕ ಮತ್ತು ಡಯಟ್ ಪ್ರಾಚಾರ್ಯ ಅಬ್ದುಲ್ ವಾಜೀದ್ ಖಾಜಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.