(www.vknews.com) : ವಿಶ್ವದಾದ್ಯಂತ ಕೋವಿಡ್ 19 ವೈರಸ್ ಸಾಂಕ್ರಾಮಿಕ ರೋಗ ಹರಡುತ್ತಿರುವ ಹಿನ್ನಲೆಯಲ್ಲಿ ದಂತ ಚಿಕಿತ್ಸೆ ಸಂದರ್ಭದಲ್ಲಿ ಕೊರೋನಾ ವೈರಾಣು ಹರಡುವ ಸಾಧ್ಯತೆ ಹೆಚ್ಚಿರುವ ಕಾರಣದಿಂದ ದಿನಾಂಕ 18-03-2020 ರಿಂದ ಹೊಸಂಗಡಿಯ ಹೈ ಲ್ಯಾಂಡ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಚರಿಸುತ್ತಿರುವ ಸುರಕ್ಷಾ ದಂತ ಚಿಕಿತ್ಸಾಲಯವನ್ನು ಸಾರ್ವಜನಿಕ ಹಿತಾಸಕ್ತಿಯ ದೃಷ್ಠಿಯಿಂದ ಮುಚ್ಚಲಾಗಿತ್ತು. ದಿನಾಂಕ 10-06-2020 ನೇ ಬುಧವಾರ ಎಂದಿನಂತೆ ಸುರಕ್ಷಾ ದಂತ ಚಿಕಿತ್ಸಾಲಯ ದಂತ ಚಿಕಿತ್ಸೆಗಳಿಗೆ, ರೋಗಿಗಳಿಗೆ ತೆರೆದಿರುತ್ತದೆ.
ಕೇವಲ ತುರ್ತು ಅಗತ್ಯದ ದಂತ ಸೌಲಭ್ಯ ಮಾತ್ರ ಲಭ್ಯವಿರುತ್ತದೆ. ಸೌಂಧರ್ಯವರ್ಧಕ ಚಿಕಿತ್ಸೆಗಳು ಕೋವಿಡ್-19 ಚಿಕಿತ್ಸೆ ನಿಯಂತ್ರಣಕ್ಕೆ ಬಂದ ಬಳಿಕವೇ ಆರಂಭಿಸಲಾಗುವುದು ಎಂದು ಸುರಕ್ಷಾ ದಂತ ಚಿಕಿತ್ಸಾಲಯದ ವೈದ್ಯರಾದ ಡಾ: ಮುರಲೀ ಮೋಹನ್ ಚೂಂತಾರು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಡಾ: ರಾಜಶ್ರೀ ಮೋಹನ್ ಅವರ ಸೇವೆ ಜುಲೈ 1 ರಿಂದ ದೊರಕುತ್ತದೆ. ಆದಿತ್ಯವಾರದ ಹೊರತಾಗಿ ಪ್ರತಿದಿನ 10.00 ರಿಂದ 5.00 ರವರೆಗೆ ಮಾತ್ರ ದಂತ ಚಿಕಿತ್ಸೆ ಸೌಲಭ್ಯ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.