ದುಬೈ(www.vknews.in): ಕರೋನವೈರಸ್ ಸಾಂಕ್ರಾಮಿಕ ಹರಡುತ್ತಿರುವುದರ ಮಧ್ಯೆ ಇಲ್ಲಿನ ಭಾರತೀಯರ ತುರ್ತು ಅಗತ್ಯಗಳನ್ನು ಪೂರೈಸಲು ದುಬೈನಲ್ಲಿರುವ ಭಾರತೀಯ ದೂತಾವಾಸವು ಆಗಸ್ಟ್ 1 ರಿಂದ ಡಿಸೆಂಬರ್ 31 ರವರೆಗೆ ವಾರಾಂತ್ಯ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಸಹ ತೆರೆದಿರುತ್ತದೆ ಎಂದು ಮಾಧ್ಯಮ ವರದಿ ಸೋಮವಾರ ತಿಳಿಸಿದೆ.
ಜುಲೈ 19 ರಂದು ದುಬೈನಲ್ಲಿ ಭಾರತದ ಕಾನ್ಸುಲ್ ಜನರಲ್ ಆಗಿ ಅಧಿಕಾರ ವಹಿಸಿಕೊಂಡ ಡಾ.ಅಮನ್ ಪುರಿ ‘ತುರ್ತು ಪ್ರಯಾಣದ ಅಗತ್ಯತೆ ಇರುವವರಿಗೆ ತುರ್ತು ಪ್ರಯಾಣಕ್ಕಾಗಿ ಪಾಸ್ಪೋರ್ಟ್ ನವೀಕರಣದಂತಹ ಕಾನ್ಸುಲರ್ ಸೇವೆಗಳನ್ನು ಲಭ್ಯಗೊಳಿಸಲಾಗುವುದು’ ಎಂದು ತಿಳಿಸಿದ್ದಾರೆ.
ಆಗಸ್ಟ್ 1 ರಿಂದ ಡಿಸೆಂಬರ್ 31 ರವರೆಗೆ, ರಜಾದಿನಗಳಲ್ಲಿ ದೂತಾವಾಸವು ಬೆಳಿಗ್ಗೆ 8 ರಿಂದ ಬೆಳಿಗ್ಗೆ 10 ರವರೆಗೆ ತೆರೆದಿರುತ್ತದೆ. ಮುಂಬರುವ ಕಠಿಣವಾದ ದಿನಗಳಲ್ಲಿ ಜನರಿಗೆ ನಮ್ಮ ಬೆಂಬಲ ಬೇಕಾಗಬಹುದು ಎಂದು ನಾವು ಭಾವಿಸುತ್ತೇವೆ ಎಂದು ಪುರಿ ಹೇಳಿದ್ದಾರೆೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.