ಜೀರ್ಮುಕ್ಕಿ, ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): 74 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಜೀರ್ಮುಕ್ಕಿ ಮುಹ್ಯದ್ದೀನ್ ಮಸೀದಿ ಹಾಗೂ ತರ್ಬಿಯ್ಯತ್ತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ಮಸೀದಿ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆಯು ನಡೆಯಿತು.
ಮಸೀದಿ ಅಧ್ಯಕ್ಷರಾದ ಅಬ್ದುಲ್ಲ ಜೀರ್ಮುಕ್ಕಿಯವರು ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ಇಮಾಮರಾದ ಸೂಫಿ ಮುಸ್ಲಿಯಾರ್ ಪಾಣಾಜೆ ಪ್ರಾರ್ಥನೆಗೆ ನೇತೃತ್ವ ನೀಡಿದರು. ತರ್ಬಿಯ್ಯತ್ತುಲ್ ಇಸ್ಲಾಂ ಎಸೋಸಿಯೇಶನ್ ಪ್ರ.ಕಾರ್ಯದರ್ಶಿ ಜುನೈದ್ ಸಖಾಫಿ ಜೀರ್ಮುಕ್ಕಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಊರ ಪ್ರಮುಖರಾದ ಇಬ್ರಾಹಿಂ ಜಿ, ಇಬ್ರಾಹಿಂ ಜೆ.ಪಿ.ಎಂ, ಹನೀಫ್ ಜಿ.ಎಂ, ಸಿದ್ದೀಖ್ ಜಿ.ಎ, ಮುಹಮ್ಮದ್ ಗುಡ್ಡೆ ಮುಂತಾದವರು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.