ಜೆದ್ದಾ(www.vknews.in): ಮಕ್ಕಾ ಇಮಾಂ ಶೈಖ್ ಅಬ್ದುರ್ರಹ್ಮಾನ್ ಅಲ್ ಸುದೈಸ್ ಅವರ ಅನಾರೋಗ್ಯದ ಕುರಿತು ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ವದಂತಿಗಳನ್ನು ಹರಂ ಆಡಳಿತವು ಅಲ್ಲಗೆಳದಿದೆ. ಸೆಪ್ಟೆಂಬರ್ 25ರಂದು ಶೈಖ್ ಸುದೈಸ್ ರವರು ನಮಾಝ್ ನಿರ್ವಹಿಸುತ್ತಿರುವ ವೇಳೆ ಕೆಲವು ಕ್ಷಣ ಅಶಕ್ತರಾದ ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಈ ಘಟನೆಯ ನಂತರ ಸಾಮಾಜಿಕ ತಾಣಗಳಲ್ಲಿ ಕೆಲವರು ಸುದೈಸ್ ರವರು ನಿಧನರಾಗಿದ್ದಾರೆ ಎಂಬ ಆದಾರರಹಿತ ವರದಿಗಳನ್ನು ಪ್ರಕಟಿಸಿದ್ದರು.
ಶೈಖ್ ಸುದೈಸ್ ರವರು ಆರೋಗ್ಯವಾಗಿದ್ದು ಸದ್ಯ ವಿಶ್ರಾಂತಿಯನ್ನು ಪಡೆಯುತ್ತಿದ್ದಾರೆ ಮಾತ್ರವಲ್ಲ ಹರಂ ಮೇಲ್ವಿಚಾರಣಾ ಸಮಿತಿಯ ಸಭೆಯಲ್ಲೂ ತನ್ನ ಸಲಹೆಯನ್ನು ನೀಡಿದ್ದಾರೆ ಎಂದು ಹರಂ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.