(www.vknews.com) : ಉಜಿರೆಯಲ್ಲಿ ಎಸ್ಡಿಪಿಐ ಕಾರ್ಯಕರ್ತರು ಪಾಕಿಸ್ಥಾನ್ ಪರ ಘೋಷಣೆ ಕೂಗಿದ್ದಾರೋ ಇಲ್ಲವೂ, ಆದರೆ ಮಾಧ್ಯಮಗಳು “ಕೂಗಿದ್ದಾರೆ” ಎಂದು ಬಲಾತ್ಕರಿಸುತ್ತಿದೆ. ಪೊಲೀಸ್ ಇಲಾಖೆ ತುರ್ತಾಗಿ ಘೋಷಣೆ “ಕೂಗಿದ್ದಾರೆ” ಎಂದು ದೃಡಪಡಿಸಿ ಆರು ಮಂದಿಯ ವಿರುದ್ದ ದೇಶದ್ರೋಹದ ಖೇಸು ದಾಖಲಿಸಿದೆ. ಈ ಮೊದಲು ಬಿಜೆಪಿಗರು ರಾಜಕೀಯ ಸ್ವಾರ್ಥಕ್ಕಾಗಿ ಮುಸ್ಲಿಮರನ್ನು ದೇಶದ್ರೋಹಿ ಮಾಡುತ್ತಿದ್ದರು. ಈಗ ಅದನ್ನು ಪೋಲೀಸರು ಸಂವಿಧಾನಿಕವಾಗಿ ಮಾಡುತ್ತಿದ್ದಾರೆ.
ಇಲ್ಲಿ ದೇಶದ್ರೋಹಿ ಆಗುವುದು ಮುಸ್ಲಿಮ್ ಹೆಸರಿನವರು ಮಾತ್ರ ಎಂದು ಪೊಲೀಸ್ ಇಲಾಖೆ ಕೂಡ ನಿರ್ಧರಿಸಿದರೆ, ನ್ಯಾಯ ನಿರಾಕರಣೆಯು ಬಲು ದೊಡ್ಡ ಅಪಾಯಕ್ಕೆ ನಾವೇ ಬಾಗಿಲು ತೆರೆದು ಕೊಟ್ಟಂತೆಯೇ ಸರಿ. ಯಾವುದೇ ತಪ್ಪು ಮಾಡದ ಯುವಕರನ್ನು ದೇಶದ್ರೋಹಿ ಮಾಡುವುದು, ಅವರಿಗೆ ಈ ದೇಶ- ಸಮಾಜ ಮತ್ತು ಜನರ ವಿರುದ್ದ ದ್ವೇಷ ಸಾಧಿಸಲು ಅವಕಾಶ ಮಾಡಿ ಕೊಟ್ಟಂತೆ.
ಮಾಧ್ಯಮ- ಕಾನೂನು – ನ್ಯಾಯ ಎಲ್ಲರೂ ಮಾಡದ ತಪ್ಪಿಗೆ ದೇಶದ್ರೋಹಿ ಪಟ್ಟ ಕಟ್ಟಿದಾಗ ಉಂಟಾಗುವ ಬೇಗುದಿ-ಹತಾಶೆ- ದ್ವೇಷ ಇದೆಯಲ್ಲವೇ , ಅದು ಅವರನ್ನು ಮುಂದೆ ಅತ್ಯಂತ ದೊಡ್ಡ ಅಪರಾಧಕ್ಕೆ ಪ್ರೇರೇಪಿಸಬಹುದು.
ಈ ಕುರಿತಂತೆ ಮುಸ್ಲಿಂ ಸಮುದಾಯದ ಉಲೆಮಾಗಳು, ವಿದ್ವಾಂಸರು, ಶ್ರೀಮಂತರು, ನಾಯಕರು ಮೌನ ವಹಿಸಿ, ಅದು ರಾಜಕೀಯ ಎಂದು ಸುಮ್ಮನೆ ಕುಳಿತರೆ ಮುಂದೆ ಗಂಭೀರ ಅಪಾಯವಿದೆ. ಭವಿಷ್ಯದ ನಿಮ್ಮ ತಲೆಮಾರು ವಿನಾಶ ಕಾಣಲಿದೆ. ನ್ಯಾಯ ನಿರಾಕರಣೆಯ ಗಂಭೀರತೆ ನಿಮಗೆ ಅರ್ಥ ಆಗದೇ ಇರಲು ಸಾಧ್ಯವಿಲ್ಲ. ಅದು ನಮ್ಮ ಯುವಕರನ್ನು ಇನ್ನಷ್ಟೂ ಕೇಡಿನತ್ತ ಕೊಂಡಯ್ಯಬಲ್ಲುದು. ಅನಂತರ ಚಿಂತಿಸಿ ಫಲವಿಲ್ಲ. ಅವರು ಯಾವುದೇ ಪಕ್ಷದ ವಿರುದ್ದ ದಾಳಿ ಮಾಡುತ್ತಿಲ್ಲ. ಅವರು ಸ್ಪಷ್ಟ ಗುರಿಯೊಂದಿಗೆ ಮುಸ್ಲಿಮರ ವಿರುದ್ದ ಸಂಘಟಿತ ದಾಳಿ ನಡೆಸುತ್ತಿದ್ದಾರೆ. ಪಾಕಿಸ್ಥಾನ ಪರ ಘೋಷಣೆ ಕೂಗಿದ್ದರೆ ಅವರನ್ನು ನಾವು ಬಹಿಷ್ಕರಿಸುವ. ಆದರೆ, ಅಲ್ಲಿ ಹಾಗೇ ಕೂಗಲು ಕಾರಣವೇ ಇಲ್ಲ…..
ಗ್ರಾಮ ಪಂಚಾಯತ್ ಚುನಾವಣೆ ಗೆದ್ದಾಗ ಪಾಕಿಸ್ಥಾನ್ ಮುರ್ದಾಬಾದ್ ಕೂಗುವ ಅನಿವಾರ್ಯತೆ ಏಕೆ ಬಂತು ಎಂದು ಬಿಜೆಪಿಗರಲ್ಲಿ ಇಲ್ಲಿ ಯಾರೂ ಪ್ರಶ್ನಿಸುವುದಿಲ್ಲ. ಪಾಕಿಸ್ಥಾನಕ್ಕೆ ಉಜಿರೆಯಲ್ಲಿ ಮುರ್ದಾಬಾದ್ ಕೂಗಿ ಇವರು ಸಾದಿಸುವುದೇನು ಎಂದು ಅರ್ಥವಾಗದ ವಿಷಯ. ಇದೇ ಸಮಯ ಎಸ್ಡಿಪಿಐ ಕಾರ್ಯಕರ್ತರು ಎಸ್ಡಿಪಿಐ ಜಿಂದಾಬಾದ್ ಕೂಗಿದ್ದನ್ನು ಪಾಕಿಸ್ಥಾನ್ ಜಿಂದಾಬಾದ್ ಕೂಗಿದ್ದಾರೆ ಎಂದು ಹೇಳುವಾಗ, ತಕ್ಷಣ ಅದರ ಸತ್ಯಾಸತ್ಯತೆ ತಿಳಿಯದೆ ಒತ್ತಡಕ್ಕೆ ಮಣಿದು ದೇಶದ್ರೋಹಿ ಪ್ರಕರಣ ದಾಖಲಿಸಿ ಆರು ಯುವಕರನ್ನು ಬಂದಿಸಿದ ಪೊಲೀಸರ ತುರ್ತು ಸಂಶಯಿತವಾಗಿದೆ. ಅಲ್ಲಿ ಎರಡೂ ಕಡೆಯವರೂ ಇದ್ದರು. ಬಿಜೆಪಿ ಕಾರ್ಯಕರ್ತರು ಪಾಕಿಸ್ಥಾನದ ವಿರುದ್ದ ಘೋಷಣೆ ಕೂಗಿದ್ದರು. ಬಿಜೆಪಿ ಕಾರ್ಯಕರ್ತರ ಪಾಕಿಸ್ಥಾನ ಕೂಗು, ಎಸ್ಡಿಪಿಐ ಕಾರ್ಯಕರ್ತರ ಜಿಂದಾಬಾದ್ ಕೂಗನ್ನು ಒಂದೇ ಭಾಗದಲ್ಲಿ ಚಿತ್ರಿಸಲಾಗಿದೆ.
ಈಗ ಇನ್ನೊಂದು ವಿಡಿಯೋ ವೈರಲ್ ಆಗುತ್ತಿದ್ದು, ಬಿಜೆಪಿ ಕಾರ್ಯಕರ್ತನೊಬ್ಬ ಪಾಕಿಸ್ಥಾನ್ ಜಿಂದಾಬಾದ್ ಕೂಗುವುದು ಅದರಲ್ಲಿ ಕೇಳಿಸುತ್ತಿದೆ. ಅದು ಕೂಗುವ ಬರದಲ್ಲಿ ಮುರ್ದಾಬಾದ್ ಎನ್ನುವ ಬದಲು ಜಿಂದಾಬಾದ್ ಆಗಿರಲೂ ಬಹುದು. ಆದರೆ, ಅಮಾಯಕ ಯುವಕರನ್ನು ಮುಸ್ಲಿಂ ಎನ್ನುವ ಕಾರಣಕ್ಕೆ ಬಂದಿಸುವ ಎಮರ್ಜೆನ್ಸಿ ಇಲ್ಲಿ ಕಾಣಿಸಲಿಲ್ಲ.
ಪಾಕಿಸ್ಥಾನದ ಹೆಸರೆತ್ತಿದ್ದು ಬಿಜೆಪಿ ಕಾರ್ಯಕರ್ತರಾಗಿದ್ದಾರೆ. ವಾಸ್ತವದಲ್ಲಿ ಅಲ್ಲಿ ಎಸ್ಡಿಪಿಐ ಕಾರ್ಯಕರ್ತರನ್ನು ಮಾತ್ರವೇ ತೋರಿಸಲಾಗಿತ್ತು. ಪಾಕಿಸ್ಥಾನ ಕೂಗು ಬಿಜೆಪಿ ಕಾರ್ಯಕರ್ತರ ಶಬ್ಧವಾಗಿತ್ತು. ಮಾದ್ಯಮಗಳಿಗೆ ಅದೆಂತಹ ದೇಶಪ್ರೇಮ ಎಂದರೆ ಎಸ್ಡಿಪಿಐನವರೇ ಅದನ್ನು ಕೂಗಿದ್ದು ಎಂದು ಬಿಂಬಿಸಿದರು. ಪಾಕಿಸ್ಥಾನ ಎಂಬ ವಾಖ್ಯ ಕೂಗಿದ ಬಿಜೆಪಿ ಕಾರ್ಯಕರ್ತರ ಕುರಿತು ಯಾರೂ ಪ್ರಶ್ನೆ ಮಾಡಲೇ ಇಲ್ಲ.
ಮುಸ್ಲಿಮರನ್ನು ಪ್ರಶ್ನಿಸುವ ಮತ್ತು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಅವಕಾಶ ಸಿಕ್ಕಿದ್ದನ್ನು ಬಹಳ ವ್ಯವಸ್ಥಿತವಾಗಿ ಬಳಸಿದ ಮಾಧ್ಯಮ. ಇದಕ್ಕೆ ವ್ಯಾಪಕ ಪ್ರಚಾರ ಕೊಡಲು ಮತ್ತು ಮುಸ್ಲಿಮರನ್ನು ಅಪಾಯಕಾರಿಗಳು ಎಂದು ಜನರತ್ತ ತಲುಪಿಸಲು ಸಾಹಸಿಕ ಹೋರಾಟ ಮಾಡಿತು. ರಾಜಕೀಯ ನಾಯಕರ ಸಂದರ್ಶನ, ಡಿಬೆಟ್ ಗಳು, ದಿನಕ್ಕೆ ಎಂಟು ಹತ್ತು ಪೊರ್ಟಲ್ ನ್ಯೂಸ್ ಗಳನ್ನು ಹಾಕಿತು. ಒಟ್ಟಿನಲ್ಲಿ ಜನರ ಮೆದುಳಿನಲ್ಲಿ ಮುಸ್ಲಿಮರ ಕುರಿತ ಒಂದು ಚಿತ್ರಣವನ್ನು ಮಾಧ್ಯಮ ರೂಪಿಸಿತು. ಇದಕ್ಕೆ ಬೆಂಬಲವಾಗಿ ಸತ್ಯವನ್ನು ತನಿಖೆ ಮಾಡಿ ಜನರ ಮುಂದೆ ಇಡಬೇಕಾಗಿದ್ದ ಪೊಲೀಸರು ಎಫ್ ಐ ಆರ್ ದಾಖಲಿಸಿ ರಾಜಕೀಯ ಹಿತಾಸಕ್ತಿಯನ್ನು ಕಾಪಾಡಿದರು. ಯು.ಟಿ. ಖಾದರ್ ಮುಂದೆಯೂ ಮೈಕ್ ಹಿಡಿದು ಎಸ್ಡಿಪಿಐ ಪಾಕಿಸ್ಥಾನದ ಪರ ಘೋಷಣೆ ಕೂಗಿದೆ ನಿಮ್ಮ ಅಭಿಪ್ರಾಯ ಏನು ಎಂದು ಮಾಧ್ಯಮ ಬೈಟ್ಸ್ ಕೇಳಿತ್ತು. ಆಗ ವಿಡಿಯೋ ವೀಕ್ಷಿಸಿದ ಯುಟಿ ಖಾದರ್ ಇದರಲ್ಲಿ ಅಂತಹ ಘೋಷಣೆ ಕೇಳುವುದಿಲ್ಲ ಎಂದರು. ತಕ್ಷಣ ಎಸ್ಪಿ ಅವರಿಗೆ ಕರೆ ಮಾಡಿ ಘಟನೆಯ ಮಾಹಿತಿ ಪಡೆದರು. ರಾಜಕೀಯವಾಗಿ ನಮಗೆ ವಿರೋಧ ಇರಬಹುದು, ಆದರೆ, ಅಮಾಯಕರನ್ನು ಬಲಿಪಶು ಮಾಡಬಾರದು. ಇಲ್ಲಿ ಪೊಲೀಸ್ ಇಲಾಖೆ ಬಹಳ ಜಾಗರೂಕತೆಯಿಂದ ವರ್ತಿಸಿ ಸತ್ಯಾಸತ್ಯತೆ ಬಯಲಿಗೆ ತರಬೇಕು ಎಂದರು.
ಮಾದ್ಯಮಗಳು ಜನಕ್ರಾಂತಿಗೆ ಆಹಾರವಾಗುವ ಕಾಲ ಬಂದಿದೆ. ಸಮಾಜದಲ್ಲಿ ಅಶಾಂತಿ ಮತ್ತು ಅಭದ್ರತೆ ಹರಡಿ ಅವರು, ಅವರನ್ನೇ ಸಮಾಜದ ಶತ್ರುಗಳು ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ನಮಗೆ ಯಾರೂ ಕೇಳುವವರು, ವಿರೋಧಿಸುವವರು ಇಲ್ಲಾ ಎಂಬ ಅಹಂ ಅವರ ದುಷ್ಕೃತ್ಯಕ್ಕೆ ಇನ್ನಷ್ಟೂ ಪ್ರೇರಣೆ. ಕೆಲವು ಕುಖ್ಯಾತ ಪತ್ರಕರ್ತರು, ಟೀವಿ ಆಂಕರ್ ಗಳು ಮುಸ್ಲಿಮರ ವಿರುದ್ದ ದ್ವೇಷ ಹರಡಿ ಹಿಂದುಗಳನ್ನು ಕೆರಳಿಸಲು ಪ್ರಾಯೋಜಿತ ಅಭಿಯಾನದಲ್ಲಿ ಇದ್ದಾರೆ. ಅವರಿಗೆ ಜನ-ಹಣ – ಅಧಿಕಾರದ ಬಲ ಇದೆ. ಮುಸ್ಲಿಮರ ಅಸಂಘಟಿತ ಮತ್ತು ಅಪ್ರಬುದ್ಧ ಹೋರಾಟದ ಬಗ್ಗೆ ತಿಳಿದಿರುವ ಇವರು ಅದರ ಭರಪೂರ ಲಾಭವನ್ನು ಪಡೆಯುತ್ತಿದ್ದಾರೆ.
ಸಮುದಾಯ ಎಂದರೆ ರಾಜಕೀಯ ಪಕ್ಷವಲ್ಲ. ಎಸ್ಡಿಪಿಐನ್ನು ವಿರೋಧಿಸುವಾಗ ಇವರಿಗೆ ಮುಸ್ಲಿಮರು ಟಾರ್ಗೆಟ್, ಕಾಂಗ್ರೆಸ್ಸನ್ನು ವಿರೋಧಿಸುವಾಗ ಇವರಿಗೆ ಮುಸ್ಲಿಮರೇ ಟಾರ್ಗೆಟ್. ಕಾಂಗ್ರೆಸ್ಸ್ ಮತ್ತು ಎಸ್ಡಿಪಿಐಗಳಲ್ಲಿ ಎಲ್ಲಾ ಜಾತಿ – ಧರ್ಮದವರು ಇದ್ದಾರೆ. ಹೀಗಿದ್ದು ಒಂದು ಧರ್ಮದ ಅನುಯಾಯಿಗಳನ್ನು ವಿಲನ್ ಮಾಡಿ ರಾಜಕೀಯ ಮಾಡುವುದು ಬಿಜೆಪಿಯ ಬಹಿರಂಗ ನೀತಿಯಾಗಿದೆ. ಅದರ ನೇತೃತ್ವ ಕೊಡಲು ಮಾಧ್ಯಮವು ತನ್ನ ಸ್ವಂತಿಕೆಯನ್ನು ಅಡವಿಟ್ಟಿದೆ. ಬಲಿಪಶು ಸಮುದಾಯದ ಪರ ಮಾತನಾಡುವ ಎಲ್ಲರೂ ದೇಶದ್ರೋಹಿಗಳಾಗಿದ್ದಾರೆ. ಹೀಗಿದ್ದೂ ಕಾನೂನಿನ ಮೇಲೆ, ಪೊಲೀಸ್ ಇಲಾಖೆಯ ಮೇಲೆ ಭರವಸೆ ಜನರಿಗಿತ್ತು. ಈಗ ಅದೂ ಇಲ್ಲವಾಗುತ್ತಿದೆ.
ನ್ಯಾಯ ನಿರಾಕರಿಸಲ್ಪಟ್ಟಾಗ, ರಕ್ಷಕರೇ ದ್ವೇಷ ಸಾಧಿಸಲು ಹೊರಟಾಗ, ಕಾನೂನು, ಒತ್ತಡಕ್ಕೆ ಮಣಿದು ಅಮಾಯಕರನ್ನು ಶಿಕ್ಷಿಸಿದಾಗ ಅವರನ್ನು ಈ ವ್ಯವಸ್ಥೆಯೇ ಸಮಾಜಘಾತುಕರಾಗಲು ಪ್ರೆರೇಪಿಸುತ್ತಿದೆ ಎಂಬ ಭಯ ಕಾಡುತ್ತಿದೆ. ಆದರೂ, ನನ್ನ ಮುಸ್ಲಿಂ ಸಹೋದರರಲ್ಲಿ ಒಂದು ವಿನಂತಿ. ಪವಿತ್ರ ಕುರ್ ಆನ್ ನಲ್ಲಿ ಅಲ್ಲಾಹನು ಹೇಳುತ್ತಾನೆ ” ನೀವು ಸಹನೆ ಪಾಲಿಸಿರಿ. ಎಷ್ಟೆಂದರೆ ಎಲ್ಲರನ್ನೂ ಮೀರಿಸುವಷ್ಟು, ಸಹನೆ ಪಾಲಿಸಿದವರು ವಿಜಯಿಗಳಾಗುತ್ತಾರೆ. ನೀವು ಅಲ್ಲಾಹನ ಮೇಲೆ ಭರವಸೆ ಇಡಿ . ಅಕ್ರಮವು ಅಳಿದು ಹೋಗುತ್ತದೆ. ಸಹನೆಯ ಫಲ ಶುಭಕರವಾಗಿದೆ”.
ಸಂವಿಧಾನವು ಭಾರತೀಯರಿಗೆ ಎಲ್ಲರಿಗೂ ಒಂದೇ ಆಗಿದೆ. ನ್ಯಾಯಕ್ಕಾಗಿ ಸಂವಿಧಾನಾತ್ಮಕವಾಗಿ ಹೋರಾಡಿ. ಪ್ರಜಾಪ್ರಭುತ್ವ ಎಲ್ಲರ ಹಕ್ಕನ್ನು ಸಂರಕ್ಷಿಸುವ ಬುನಾದಿಯಾಗಿದೆ.
Sunni Today
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.