ಕೊಡಗು(ವಿಶ್ವಕನ್ನಡಿಗ ನ್ಯೂಸ್): ಶುಂಟಿಕೊಪ್ಪ ಇಹ್ಸಾನಿಯ್ಯ ಮಹಿಳಾ ಶರೀಅತ್ ಕಾಲೇಜ್ನ ಪ್ರಥಮ ‘ಅಲ್ ಮಾಹಿರಾ’ ಸನದ್ ದಾನ ಹಾಗೂ ಸಂಸ್ಥೆಯ ನಾಲ್ಕನೇ ವಾರ್ಷಿಕ ಸಮ್ಮೇಳನವು 2021 ಮೇ ತಿಂಗಳ 21,22 ಶುಕ್ರವಾರ, ಶನಿವಾರ ದಿನಗಳಲ್ಲಿ ನಡೆಸಲು ಸಂಸ್ಥೆಯ ಆಡಳಿತ ಸಮಿತಿ ಸಭೆಯಲ್ಲಿ ನಿರ್ಣಯಿಸಲಾಯಿತು.
ಇಹ್ಸಾನಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ ಮುಹಮ್ಮದ್ ಅಲಿ ಶುಂಟಿಕೊಪ್ಪ ಅಧ್ಯಕ್ಷತೆ ವಹಿಸಿದರು. ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷ ಡಾ. ಎಮ್ಮೆಸ್ಸೆಂ. ಝೈನೀ ಕಾಮಿಲ್ ಉದ್ಘಾಟಿಸಿದರು. ಸಮ್ಮೇಳನದ ಘೋಷಣಾ ಸಮಾವೇಶವು ಮಾರ್ಚ್ ಏಳು ಭಾನುವಾರ ಬೆಳಗ್ಗೆ ನಡೆಯಲಿದ್ದು ಕರ್ನಾಟಕ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಉಸ್ತಾದ್ ಕೆ.ಎ.ಮಹ್ಮೂದ್ ಮುಸ್ಲಿಯಾರ್ ಎಡಪ್ಪಲಂ ಸಮ್ಮೇಳನ ಘೋಷಣೆ ಮಾಡಲಿರುವರು.
ಮೇ 21 ಶುಕ್ರವಾರ ಅಪರಾಹ್ನ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವ ಸಮ್ಮೇಳನ ನಡೆಯಲಿದ್ದು ಪ್ರಮುಖ ಉಲಮಾ- ಸಾದತ್ಗಳು,ರಾಜಕೀಯ, ಸಾಮಾಜಿಕ ,ಧುರೀಣರು ಭಾಗವಹಿಸಲಿರುವರು.
ಮೇ 22 ಶನಿವಾರ ಬೆಳಗ್ಗೆ ನಡೆಯುವ ಮಹಿಳಾ ಸಮಾವೇಶದಲ್ಲಿ ಸಂಸ್ಥೆಯಲ್ಲಿ ಮೂರು ವರ್ಷಗಳ ಶರೀಅತ್ ಕೋರ್ಸ್ ಮುಗಿಸಿದ ಹನ್ನೊಂದು ಮಂದಿ ಆಲಿಮಾಗಳಿಗೆ ‘ಅಲ್ ಮಾಹಿರಾ’ ಪದವಿ ಪ್ರದಾನ ಮಾಡಲಾಗುವುದು.
ಇಹ್ಸಾನಿಯ್ಯ ಪ್ರಧಾನ ಕಾರ್ಯದರ್ಶಿ ಎಂ.ಇ.ಉಮರ್ ಸಖಾಫಿ ಎಡಪ್ಪಾಲ್ ವಿಷಯ ಮಂಡಿಸಿದರು. ಕೋಶಾಧಿಕಾರಿ ಪಿ.ಎಂ.ಅಬ್ದುಲ್ಲತೀಫ್ ಸದಸ್ಯರಾದ. ಮೂಸಾ, ಅಬ್ದುಲ್ ರಝಾಖ್ ಮುಂತಾದವರು ಪಾಲ್ಗೊಂಡರು. ಪ್ರಿನ್ಸಿಪಾಲ್ ರಫೀಖ್ ಸಅದಿ ಶುಂಟಿಕೊಪ್ಪ ಸ್ವಾಗತಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.