ಪವಿತ್ರ ಮಕ್ಕತುಲ್ ಮುಕರ್ರಮದಲ್ಲಿರುವ ಏಷ್ಯನ್ ಆಸ್ಪತ್ರೆಯಲ್ಲಿ ಸೇವೆಗಯ್ಯುತ್ತಿದ್ದ ಉಪ್ಪಳದ ಡಾ| ಎ ಕೆ ಖಾಸಿಮ್ ರವರು ಇಂದು ಬೆಳಿಗ್ಗೆ ಮರಣ ಹೊಂದಿದ್ದಾರೆ.
ಒಮ್ಮೆ ಜಿದ್ದಾದಿಂದ ಮುಂಬೈಗೆ ಹೋಗುತ್ತಿದ್ದ ವಿಮಾನದಲ್ಲಿ 55 ವರ್ಷದ ಮಹಿಳೆಯೊಬ್ಬರಿಗೆ ಹೃದಯಾಘಾತವಾದ ಸಂದರ್ಭದಲ್ಲಿ ಡಾ| ಖಾಸಿಮ್ ರವರು ನೆರವಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಅನಿವಾಸಿ ಕನ್ನಡಿಗರಿಗೆಂದೂ ಆಸರೆಯಾಗಿದ್ದ ಇವರ ಅಗಲುವಿಕೆ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
ಕೆಸಿಎಫ್ ಸಂಘಟನೆಗೆ ಬೆನ್ನೆಲುಬಾಗಿದ್ದ ಇವರು ಹಜ್ಜ್ ಸಮಯದಲ್ಲಿ KCF – HVC ಸ್ವಯಂಸೇವಕರಿಗೆ ಬೇಕಾದ ಎಲ್ಲಾ ರೀತಿಯ ಮಾರ್ಗದರ್ಶನ ಗಳನ್ನು ನೀಡುತ್ತಿದ್ದರು.
ಅಲ್ಲಾಹನು ಮೃತರಿಗೆ ಮಗ್’ಫಿರತ್ ಹಾಗೂ ಮರ್’ಹಮತ್ ನೀಡಿ ಅನುಗ್ರಹಿಸಲಿ. ಅವರ ಖಬರನ್ನು ಸ್ವರ್ಗದ ಉದ್ಯಾನವನ್ನಾಗಿ ಮಾರ್ಪಡಿಸಲಿ. ಮೃತರ ಕುಟುಂಬ, ಬಂದು-ಬಳಗದವರಿಗೆ ದುಃಖವನ್ನು ಸಹಿಸುವ ತಾಳ್ಮೆ ಹಾಗೂ ಸಹನೆ ಶಕ್ತಿಯನ್ನು ಅಲ್ಲಾಹನು ನೀಡಿಲಿ. ಇವರ ಅಕಾಲಿಕ ಮರಣಕ್ಕೆ ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು, ಪ್ರಧಾನ ಕಾರ್ಯದರ್ಶಿ ಜನಾಬ್ ಖಮರುದ್ದೀನ್ ಗೂಡಿನಬಳಿ ಹಾಗೂ ಸೌದಿ ಅರೇಬಿಯಾ ರಾಷ್ಟ್ರೀಯ ಅಧ್ಯಕ್ಷರಾದ ಡಿಪಿ ಯೂಸುಫ್ ಸಖಾಫಿ ಬೈತಾರ್ ರವರು ಸಂತಾಪ ಸೂಚಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.