ಮಂಗಳೂರು (ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕಚೇರಿ ಸಾರ್ವಜನಿಕರ ಪಾಲಿಗೆ ಇನ್ನೂ ಮುಕ್ತ ಅವಕಾಶವಲ್ಲದ ರೀತಿಯಲ್ಲಿ ಆಡಳಿತ ಸದಸ್ಯರು ಮತ್ತು ಕಾರ್ಯಕರ್ತರಿಗೆ ಸೀಮಿತವಾದ ನೆಲೆಯಲ್ಲಿರುವುದು ಬಹಳ ವಿಷಾದನೀಯವಾಗಿದೆಯೆಂದು, ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದರು.
ಇಲ್ಲಿ ಯಾವುದೇ ಪಕ್ಷಗಳ ಬಗ್ಗೆ ದೋಷಾರೋಪ ಹೊರಿಸುವ ನಿಟ್ಟಿನಲ್ಲಿ ಇದನ್ನು ಹೇಳುತ್ತಿಲ್ಲ ಬದಲಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಇದು ತುಂಬಾ ಹಿಂದಿನಿಂದಲೇ ಸಾಗಿ ಬಂದ ಜಾಯಮಾನವಾಗಿದೆ ಎಂದ ಅವರು, ಇಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಜಾರಿಯಲ್ಲಿರುವಾಗ ಮೇಯರ್ ಕಚೇರಿಗೆ ಹೋದರೆ ಅದು ಪಕ್ಷದ ಕಚೇರಿಯೋ ಎಂಬಂತೆ ಭಾಸವಾಗುವಷ್ಟು ಆ, ಪಕ್ಷದ ಕಾರ್ಯಕರ್ತರು ಮತ್ತು ಅಲ್ಲಿನ ನಾಯಕರ ಚೇಲಾಗಳಿಂದ ತುಂಬಿಕೊಂಡಿದ್ದರೆ, ಇದೀಗ ಸಂಘ, ಶಿಸ್ತು ಎಂಬ ಬಡಾಯಿ ಬಿಡುವ ಭಾಜಪ ಸರದಿ ಬಂದಾಗಲೂ, ಇದರಲ್ಲಿ ಯಾವುದೇ ಬದಲಾವಣೆ ಕಾಣಲಾಗದು.
ಈಗಾಗಲೇ ಮೇಯರ್ ಕಚೇರಿ ಭಾಜಪ ಮತ್ತು ಅವರ ಅನೇಕ ಅಂಗಸಂಸ್ಥೆಗಳು ನಡೆಸುವ ಶಾಖೆಯೋ ಎಂಬಂತೆ ಜನಸಾಮಾನ್ಯರಿಗೆ ಜನಪ್ರತಿನಿಧಿಗಳು ಲಭ್ಯವಲ್ಲದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದ ಅವರು, ಇನ್ನು ಪಾಲಿಕೆ ಕಚೇರಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಸೇರುವ ಸಮಾವೇಶ ಮಾಡಲೇ ಬೇಕೆಂದಾದಲ್ಲಿ ಅದಕ್ಕೆ ವಾರದ ಒಂದೆರಡು ದಿನದಲ್ಲಿ ಒಂದಿಷ್ಟು ನಿಗದಿತ ಸಮಯ ಗೊತ್ತು ಮಾಡಿ ಉಳಿದ ಸಮಯಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಿ ಎಂದರಲ್ಲದೆ, ಇವರೆಲ್ಲರೂ ಸದಸ್ಯರಾಗಿಯೂ, ಮುಖ್ಯಸ್ಥರಾಗಿಯೂ ತಮ್ಮ ಹುದ್ದೆಯನ್ನು ಅಲಂಕರಿಸಿಕೊಂಡ ನಂತರವಾದರೂ ತಾವು ಸರ್ವರಿಗಾಗಿರುವ ಜನಪ್ರತಿನಿಧಿಗಳು ಹಾಗೂ ಎಲ್ಲರ ಭೇಟಿಗೆ ಲಭ್ಯವಿದ್ದು ಅವರೆಲ್ಲರ ಅಹವಾಲುಗಳನ್ನು ಆಲಿಸಲು ಮಾತ್ರವಲ್ಲದೆ ಸಾದ್ಯಂತ ಪರಿಹರಿಸಲು ಬದ್ಧರಾಗಿರಬೇಕಾದವರು ಎಂಬಷ್ಟು ಪ್ರಜಾಪ್ರಭುತ್ವದ ಪ್ರಜ್ಞೆಯನ್ನಾದರೂ ಹೊಂದದಿರುವುದಕ್ಕೆ ತಮ್ಮ ಖೇದವನ್ನು ವ್ಯಕ್ತಪಡಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.