ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ದಿಲ್ಲಿ ಕೋರ್ಟ್ ನ ಹೆಚ್ಚುವರಿ ಸೆಶನ್ ನ್ಯಾಯಾಧೀಶ ವಿನೋದ್ ಯಾದವ್ ಅವರು ಶಿವ್ ವಿಹಾರದ ಮದೀನಾ ಮಸ್ಜಿದ್ ಧ್ವಂಸ ಪ್ರಕರಣದಲ್ಲಿ ದಿಲ್ಲಿ ಪೊಲೀಸರ ತನಿಖೆ ಮತ್ತು ತಮ್ಮ ಬೇಜವಾಬ್ದಾರಿಯುತ ತನಿಖೆಗಾಗಿ ಪೊಲೀಸ್ ಅಧಿಕಾರಿಗಳನ್ನು ಮುಕ್ತ ನ್ಯಾಯಾಲಯಕ್ಕೆ ಎಳೆದು ತಂದಿದ್ದು, ದಿಲ್ಲಿ ಗಲಭೆಯ ತನಿಖೆಯು ಹೇಗೆ ಪಕ್ಷಪಾತಿಯಾಗಿತ್ತು ಮತ್ತು ಮುಸ್ಲಿಮ್ ವಿರೋಧಿಯಾಗಿತ್ತು ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ ಮೆನ್ ಒ.ಎಂ.ಎ.ಸಲಾಂ ಹೇಳಿದ್ದಾರೆ.
ದಿಲ್ಲಿ ಪೊಲೀಸರು ಅಮಾಯಕ ಮುಸ್ಲಿಮರ ವಿರುದ್ಧದ ಹಿಂದುತ್ವ ಹಿಂಸಾಚಾರಕ್ಕೆ ಪ್ರಚೋದನೆ ಮತ್ತು ನೆರವು ನೀಡಿರುವುದು ಬಯಲಾಗಿತ್ತು. ತಮ್ಮ ಕೋಮು ಪಕ್ಷಪಾತ ಮತ್ತು ಮುಸ್ಲಿಮ್ ವಿರೋಧಿ ಧೋರಣೆಗಾಗಿ ಕುಖ್ಯಾತವಾಗಿರುವ ದಿಲ್ಲಿ ಪೊಲೀಸರು, ಈಶಾನ್ಯ ದಿಲ್ಲಿ ಗಲಭೆಯನ್ನು ನಿಷ್ಫಲವಾಗಿ ನಿರ್ವಹಿಸಿದ ಕಾರಣಕ್ಕಾಗಿ ಕಳೆದ ವರ್ಷ ಗಂಭೀರ ಟೀಕೆಯನ್ನು ಎದುರಿಸಬೇಕಾಗಿ ಬಂದಿತ್ತು ಎಂದು ಸಲಾಂ ನೆನಪಿಸಿದ್ದಾರೆ.
ದಿಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ್ದರು ಎಂದು ಕೋರ್ಟ್ ಮೇಲ್ನೋಟದ ಅಭಿಪ್ರಾಯ ವ್ಯಕ್ತಪಡಿಸಿದೆ. ಹಾಗೆಯೇ ಮಸ್ಜಿದ್ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್.ಐ.ಆರ್ ದಾಖಲಿಸಲಾಗಿತ್ತು ಎಂಬುದರ ಬಗ್ಗೆ ಅವರಿಗೆ ಈವರೆಗೂ ತಿಳಿದಿಲ್ಲ. ಇದು ತನಿಖಾ ಏಜೆನ್ಸಿಗಳು ತೋರ್ಪಡಿಸಿರುವ ‘ಆಲಸಿ ಧೋರಣೆ’ಯಾಗಿದೆ ಎಂದು ಕೋರ್ಟ್ ದುಃಖ ವ್ಯಕ್ತಪಡಿಸಿದೆ. ದಿಲ್ಲಿ ಕೋರ್ಟ್, ಈಶಾನ್ಯ ದಿಲ್ಲಿಯಲ್ಲಿ ಫೆಬ್ರವರಿ 2020ರ ಮುಸ್ಲಿಮ್ ವಿರೋಧಿ ಹತ್ಯಾಕಾಂಡಕ್ಕೆ ಸಂಬಂಧಿಸಿದ ಪ್ರಕರಣಗಳ ತನಿಖೆಯಲ್ಲಿ “ಶೋಚನೀಯ ವೈಫಲ್ಯ”ಕ್ಕಾಗಿ ದಿಲ್ಲಿ ಪೊಲೀಸರಿಗೆ ಕಳೆದ ವಾರ(13 ಜುಲೈ 2021) ದಂಡ ಹಾಕಿತ್ತು. ನಂತರ ದಿಲ್ಲಿ ಪೊಲೀಸರು ತನಿಖೆಯನ್ನು “ಅನುದ್ದೇಶಿತವಾಗಿ, ಕಠೋರವಾಗಿ ಮತ್ತು ಹಾಸ್ಯಾಸ್ಪದ” ವಿಧಾನದಲ್ಲಿ ನಡೆಸಿತ್ತು ಎಂದು ಅದು ಗಮನಿಸಿತ್ತು.
ಭಾರತೀಯ ಅಲ್ಪಸಂಖ್ಯಾತ ಸಮುದಾಯವು ಪೊಲೀಸ್ ಪಡೆಗಳ ಒಳಸಂಚಿನ ಸಂತ್ರಸ್ತರಾಗಿದ್ದಾರೆ. ಈ ಪೊಲೀಸ್ ಪಡೆಗಳು ಆಗಾಗ್ಗೆ ಹಿಂದುತ್ವ ಹಿಂಸಾಚಾರವನ್ನು ಪ್ರಚೋದಿಸುವ, ಅಮಾಯಕರನ್ನು ತಪ್ಪಾಗಿ ಸಿಲುಕಿಸುವ ಮತ್ತು ಅಪರಾಧ ಪ್ರಕ್ರಿಯೆಗಳಿಂದ ಹಿಂದುತ್ವ ಗಲಭೆಕೋರರನ್ನು ರಕ್ಷಿಸಲು ಹಿಂದುತ್ವ ರಾಜಕಾರಣಿಗಳೊಂದಿಗೆ ಪಿತೂರಿಗೆ ಸಹಕಾರ ನೀಡುತ್ತಿದ್ದಾರೆ.
ಈ ಸನ್ನಿವೇಶದಲ್ಲಿ ಈಶಾನ್ಯ ದಿಲ್ಲಿ ಹಿಂಸಾಚಾರದ ಪ್ರಕರಣಗಳ ವಿಚಾರಣೆಯ ವೇಳೆ ದಿಲ್ಲಿ ಕೋರ್ಟ್ ಪ್ರದರ್ಶಿಸಿದ ಜಾಗರೂಕತೆಯನ್ನು ನಾವು ಶ್ಲಾಘಿಸುತ್ತೇವೆ. ಪ್ರಬಲ ವ್ಯಕ್ತಿಗಳೊಂದಿಗೆ ನಿಕಟ ಸಂಬಂಧ ಹೊಂದಿರುವ ಹಿಂದುತ್ವ ರಾಜಕಾರಣಿಗಳು ಇನ್ನು ಕೂಡ ಕಾನೂನು ಮತ್ತು ಸುವ್ಯವಸ್ಥೆಯ ನಿಯಂತ್ರಣದಿಂದ ಹೊರಗಿದ್ದಾರೆ ಮತ್ತು ಅಲ್ಪಸಂಖ್ಯಾತ ಸಮುದಾದಯಗಳ ವಿರುದ್ಧ ಮತ್ತಷ್ಟು ದ್ವೇಷ ಮತ್ತು ಹಿಂಸಾಚಾರ ಪ್ರಚೋದಿಸುವ ಹಾದಿಯಲ್ಲಿದ್ದಾರೆ. ಆದುದರಿಂದ ಈ ಪ್ರಕರಣಗಳಿಗೆ ಸಂಬಂಧಿಸಿ ಮುಂದಿನ ವಿಚಾರಣೆಯನ್ನು ಸೂಕ್ಷ್ಮವಾಗಿ ಗಮನಿಸಬೇಕೆಂದು ನಾವು ನ್ಯಾಯಾಂಗಕ್ಕೆ ಕರೆ ನೀಡುತ್ತಿದ್ದೇವೆ ಎಂದು pfi ನಾಯಕರುಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.