(www.vknews.in) : ಏಳಿ ಎದ್ದೇಳಿ ಯುವ ಜನಾಂಗವೇ ಏಳಿ ಎಚ್ಚೆತ್ತುಕೊಳ್ಳಿ ಇಲ್ಲಿ ನಡೆಯುವ ಅನಾಚಾರದ ವಿರುದ್ಧ ಹೋರಾಡೋಣ ಬನ್ನಿ..
ಜಾತಿ-ಧರ್ಮದ ಹೆಸರಿನಲ್ಲಿ ಸಮಾಜದ ಶಾಂತಿ ಕದಡುವವರ ವಿರುದ್ಧ ರಾಜಕೀಯ ಸ್ವಾರ್ಥಕ್ಕಾಗಿ ಗಲಭೆ ಸೃಷ್ಟಿ ಮಾಡುವವರ ವಿರುದ್ಧ ಏಳಿ ಯುವ ಜನಾಂಗವೇ ಎಚ್ಚೆತ್ತುಕೊಳ್ಳೋಣ..
ಶೋಷಣೆ ಮಾಡುವವರನ್ನು ವಿರೋಧಿಸಿ ಹೊತ್ತುತ್ತಿರುವ ಕೋಮ ಜ್ವಾಲೆಗೆ ಸೌಹಾರ್ದತೆ ಎಂಬ ನೀರೆರಚಿ ಮಾನವೀಯತೆಗಾಗಿ ದುಡಿಯೋಣ ಎಲ್ಲರೂ ಒಟ್ಟಾಗಿ ಶಾಂತಿ ಸಮಾಧಾನವ ಮೆರೆಸೋಣ..
ಬಡವ ಶ್ರೀಮಂತರೆಂಬ ಕೀಳು ಮೇಲನ್ನು ನಿಲ್ಲಿಸೋಣ. ಎಲ್ಲರೂ ಸಮಾನರು ಎಂದು ಸಾರೋಣ ದುಷ್ಟಶಕ್ತಿಗಳ ಹುಚ್ಚು ಅಡಗಿಸೋಣ ಏಳಿ ಎದ್ದೇಳಿ ಯುವ ಜನಾಂಗವೇ ಎಚ್ಚೆತ್ತುಕೊಳ್ಳಿ..
ಸ್ವಾತಂತ್ರ್ಯದ ಪವಿತ್ರ ಸಂವಿಧಾನ ನಮ್ಮದು ಭವ್ಯ ಸಂವಿಧಾನ ಸೃಷ್ಟಿಸಿದರು ಅಂಬೇಡ್ಕರರು ತ್ರಿವರ್ಣ ಧ್ವಜವು ಸಾರುವ ನೀತಿಯ ಎಲ್ಲೆಡೆ ಪಸರಿಸೋಣ ಯುವ ಜನಾಂಗವೇ ಎದ್ದೇಳಿ…
ಸಿಂಸಾರುಲ್ ಹಕ್ ಆರ್ಲಪದವು (ವಿದ್ಯಾರ್ಥಿ ಸಂತ ಫಿಲೋಮಿನಾ ಕಾಲೇಜು ಪುತ್ತೂರು)
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.