(www.vknews.in) : ಈ ಬಾರಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥಿ೯ ಆರ್. ಪದ್ಮರಾಜ್ ರವರು ಅತ್ಯಧಿಕ ಅಂತರದಿಂದ ಗೆಲುವು ಸಾಧಿಸಿ ಲೋಕ ಸಭೆಗೆ ಪ್ರವೇಶಿಸುವುದು ಖಚಿತವೆಂದು ಪುತ್ತೂರು ತಾಲೂಕು ಕಾಂಗ್ರೆಸ್ ನ ಚುನಾವಣಾ ಉಸ್ತುವಾರಿಗಳೂ, ಮಾಜಿ ಬ್ಲಾಕ್ ಕಾಂಗ್ರೆಸ್ ಮುಖಂಡರೂ ಜನಪ್ರಿಯ ಮುಂದಾಳುಗಳಾಗಿರುವ ಶ್ರೀ ಹೇಮನಾಥ ಶೆಟ್ಟಿ ಕಾವು ಅಭಿಮತ ವ್ಯಕ್ತ ಪಡಿಸಿದ್ದಾರೆ.
ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸರ್ವ ಮತದಾರ ಬಾಂಧವರ ಸಂಪ್ರೀತಿ ಗಳಿಸಿರುವ ಆರ್. ಪದ್ಮರಾಜ್ ಜಾತಿ- ಮತ ಮತ್ತು ವರ್ಗಗಳ ಭೇದವಿಲ್ಲದೆ ಮಾಡಿದ ಜನ ಸೇವೆಯನ್ನು ಪರಿಗಣಿಸಿ ಮತದಾರರು ಈ ಬಾರಿ ಪದ್ಮರಾಜ್ ರವರ ಗೆಲುವಿಗಾಗಿ ಹಾತೊರೆದಿದ್ದು ಪ್ರಮುಖವಾಗಿ ಪುತ್ತೂರು ಪುರಸಭಾ ವ್ಯಾಪ್ತಿಯಲ್ಲದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲೂ ಪದ್ಮರಾಜ್ ಸಾಕಷ್ಟು ಅಂತರದಿಂದ ಬಹುಮತ ಪಡೆಯಲಿದ್ದು ಅವರ ಗೆಲುವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ವೆಂದು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ಈ ಬಾರಿ ಮಂಗಳೂರು ಕ್ಷೇತ್ರದಲ್ಲಿ ಅತ್ಯಧಿಕ ಮತದಾನವಾಗಲಿದ್ದು ಕಾಂಗ್ರೆಸ್ ಗೆಲುವಿನ ಸಂಕೇತವಾಗಲಿದೆ. ಬಿಜೆಪಿ ಕೇವಲ ಒಂದು ವರ್ಗದ ಮತದಾರರನ್ನು ಮಾತ್ರ ಸೆಳೆಯುತ್ತಿದ್ದು ಪದ್ಮರಾಜ್ ರವರು ಸಮಾಜ ಸೇವಾ ಚಟುವಟಿಕೆಯಲ್ಲಿ ಭಾಗಿಯಾಗಿ ಸರ್ವ ಜನರ ಸಂಪ್ರೀತಿಗೆ ಪಾತ್ರರಾಗಿರುವುದರಿಂದ ತನ್ನ ಸ್ವಂತ ಸಮುದಾಯವಲ್ಲದೆ ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗಗಳ ಹಾಗೂ ಧೀನ ದಲಿತರ ಮತಗಳು ಬಾರೀ ಪ್ರಮಾಣದಲ್ಲಿ ಪದ್ಮರಾಜ್ ಪರ ಚಲಾವಣೆಯಾಗಲಿದೆ. ಹಾಗೂ ಪದ್ಮರಾಜ್ ಗೆಲುವು ಖಚಿತವೆಂದು ಹೇಮನಾಥ ಶೆಟ್ಟಿ ಯವರು ವಿಶ್ಲೇಶಿಸಿದ್ದಾರೆ. ಅಲ್ಲದೆ ಹೇಮನಾಥ ಶೆಟ್ಟರ ಧರ್ಮಪತ್ನಿ ಜಿಲ್ಲಾ ಪಂಚಾಯತ್ ನ ಮಾಜಿ ಸದಸ್ಯೆಯಾಗಿರುವ ಅನಿತಾ ಹೇಮನಾಥ ಶೆಟ್ಟಿ ಯವರು ತಮ್ಮ ಎಲ್ಲಾ ಪ್ರಭಾವವನ್ನು ಬಳಸಿ ಕಾಂಗ್ರೆಸ್ ಪಕ್ಷದ ಗೆಲುವಿಗೋಸ್ಕರ ಶಕ್ತಿ ಮೀರಿ ಪದ್ಮರಾಜ್ ರವರ ಗೆಲುವಿಗೆ ಶ್ರಮಿಸಿದ್ದಾರೆ.
ಶೇಖ್ ಇಸಾಕ್ ಸಂಪಾದಕರು, ಕಾಕೋ೯ಟಕ ಸಾಪ್ತಾಹಿಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.