ಚಿಕ್ಕಬಳ್ಳಾಪುರ,(ವಿಶ್ವಕನ್ನಡಿಗ ನ್ಯೂಸ್): ಅವಿಭಜಿತ ಕೋಲಾರ ಜಿಲ್ಲೆಯಿಂದ 2007 ರಲ್ಲಿ ಪ್ರತ್ಯೇಕಗೊಂಡು ರಾಜ್ಯದ 29 ನೇ ಜಿಲ್ಲೆಯಾಗಿ ರೂಪುಗೊಂಡ ಚಿಕ್ಕಬಳ್ಳಾಪುರ ಜಿಲ್ಲೆಯು ಆಗಸ್ಟ್ 23, 2021ಕ್ಕೆ 14 ವರ್ಷ ಪೂರೈಸಿ 15ನೇ ವರ್ಷದತ್ತ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಜಿಲ್ಲೆಯ 15 ನೇ ವರ್ಷದ ಸಂಭ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿ ಜಿಲ್ಲೆಯ ಅಭಿವೃದ್ಧಿಯನ್ನು ಮತ್ತಷ್ಟು ಉತ್ತೇಜಿಸುವ ಉದ್ದೇಶ ಹಾಗೂ ಜಿಲ್ಲೆಯಾದ ಸವಿ ನೆನಪಿಗಾಗಿ ಜಿಲ್ಲಾಡಳಿತವು ಜಿಲ್ಲೆಯ ಇತಿಹಾಸ, ಸಾಹಿತ್ಯ, ಸಂಸ್ಕೃತಿ ಮತ್ತು ಅಭಿವೃದ್ದಿ ನಡೆದುಬಂದ ದಾರಿ ಹಾಗೂ ಮುನ್ನೋಟಗಳನ್ನೊಳಗೊಂಡ ಸ್ಮರಣ ಸಂಚಿಕೆಯೊಂದನ್ನು ಹೊರತರಲು ಉದ್ದೇಶಿಸಲಾಗಿದೆಯೆಂದು ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಸ್ಮರಣ ಸಂಚಿಕೆಗೆ ಜಿಲ್ಲೆಯಲ್ಲಿನ ಸಾಹಿತಿಗಳು,ಮಾಧ್ಯಮ ಪ್ರತಿನಿಧಿಗಳು,ಬೋಧಕ ವರ್ಗದವರು,ಇತಿಹಾಸ ತಜ್ಞರು ಸಮಾಜ ಸೇವಕರು ಹಾಗೂ ಆಸಕ್ತ ಸಾರ್ವಜನಿಕರು ತಮ್ಮ ಅಮೂಲ್ಯವಾದ ಸಲಹೆ, ಸೂಚನೆಗಳನ್ನು ನೀಡಬಹುದು ಹಾಗೂ ಜಿಲ್ಲೆಗೆ ಸಂಬಂಧಪಟ್ಟಂತೆ ತಮಗೆ ಆಸಕ್ತಿಯಿರುವ ವಿಷಯದ ಬಗ್ಗೆ 400 ಪದಗಳಿಗೆ ಮೀರದಂತೆ ಸಿದ್ಧಪಡಿಸಿದ ಲೇಖನಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಿಂಚಂಚೆ ವಿಳಾಸ infcbp@gmail ಗೆ ಕಳುಹಿಸಲು ಕೋರಿದೆ. ಜೊತೆಗೆ ಲೇಖಕರು ತಮ್ಮ ವಿಳಾಸ,ಮೊಬೈಲ್ ಸಂಖ್ಯೆ ವಿವರಗಳನ್ನೂ ಲೇಖನದೊಂದಿಗೆ ಕಳುಹಿಸಿಕೊಡಬೇಕಾಗಿರುತ್ತದೆ.
ಒಬ್ಬರು ಒಂದು ಲೇಖನ ಕಳುಹಿಸಲು ಮಾತ್ರ ಅವಕಾಶವಿರುತ್ತದೆ. ಲೇಖನಗಳನ್ನು ಸಪ್ಟೆಂಬರ್ 7 ರ ಒಳಗಾಗಿ ನುಡಿ ತಂತ್ರಾಂಶದಲ್ಲಿ ಟೈಪಿಸಿ ಕಳುಹಿಸುವುದು. ಅತ್ಯುತ್ತಮವೆನಿಸಿದ ಲೇಖನಗಳನ್ನು ಪ್ರಕಟಿಸಲಾಗುವುದು. ಸಂಪಾದಕ ಮಂಡಳಿ ತೀರ್ಮಾನವೇ ಅಂತಿಮವಾಗಿರುತ್ತದೆ ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ-8762548957 ಮತ್ತು 9448035322 ಸಂಖ್ಯೆಗೆ ಕರೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ತೆ.ಮೀಂ.ಅನ್ಸಾರಿ ಶಿಡ್ಲಘಟ್ಟ
ವರದಿಗಾರರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.