ಮಾಲೂರು (ವಿಶ್ವ ಕನ್ನಡಿಗ ನ್ಯೂಸ್):ಮಾಲೂರು ಪಟ್ಟಣ್ಣದ ಹೊರವಲಯದ ಆಂಜನೇಯಸ್ವಾಮಿ ದೇವಾಲಯದ ಹೆಂಚಿನ ಕಾರ್ಖಾನೆ ಬಳಿ ಸಾರಂಗ ರಂಗ ಸಂಸ್ಥೆಯ ಪಿಚ್ಚಳ್ಳಿ ಶ್ರೀನಿವಾಸ್ ಮತ್ತು ತಂಡ ಬಿ.ವಿ.ಕಾರಂತರನ್ನು ನೆನಪಿಸುವಂತಹ ಭಾರತೀಯ ರಂಗ ಸಂಗೀತ ದಿನವನ್ನುಅ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ರಾಜ್ಯದ ಜನಪ್ರಿಯ ಜನಪದ ಗಾಯಕರು, ಸಾರಂಗ ರಂಗ ಸಂಸ್ಥೆಯ ಪಿಚ್ಚಳ್ಳಿ ಶ್ರೀನಿವಾಸ್ ರವರು ಮಾತನಾಡುತ್ತಾ “ಬಿ.ವಿ.ಕಾರಂತರು ಕನ್ನಡ ನಾಡಿನ ಜನಪದ ಹಾಗೂ ಯಕ್ಷಗಾನವನ್ನು ಹೊಸ ಸಂಗೀತ ಸಂಯೋಜನೆಯ ಮೂಲಕ ಜೀವಂತಗೋಳಿಸಿ ಜನಪ್ರಿಯಗೋಳಿಸಿದವರು. ಅನೇಕ ನಾಟಕಗಳನ್ನು, ಸಿನಿಮಾಗಳನ್ನು ನಿರ್ದೇಶನವನ್ನು ಮಾಡುವುದರ ಮೂಲಕ ಹೊಸ ಆಲೋಚನಾ ಪರಂಪರೆಗೆ ದಿಕ್ಸೂಚಿಯಾಗಿ ನಿಂತವರು. ಕರ್ನಾಟಕದ ರಂಗಭೂಮಿಗೆ ಸಂಗೀತವನ್ನು ಕಟ್ಟಿಕೊಟ್ಟವರು ಬಿ.ವಿ.ಕಾರಂತರು” ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಜೆ.ಜಿ.ನಾಗರಾಜ್ ಮಾತನಾಡಿ “ಬಿ.ವಿ.ಕಾರಂತರ ಜೀವನವನ್ನು ನೆನಪಿಸಿಕೊಂಡು ಇಂತಹ ಕಾರ್ಯಕ್ರಮಗಳ ಮೂಲಕ ಹೊಸ ಆಲೋಚನೆಗಳಿಗೆ ಯುವಕರನ್ನು, ಉತ್ಸಾಹಿಗಳನ್ನು ಕರೆದುಕೊಂಡು ಹೋಗುವ ಕಾರ್ಯವಾಗಲಿ” ಎಂದರು.
ಕಾರ್ಯಕ್ರಮದಲ್ಲಿ ಸಾಹಿತ್ಯದ ಪರಿಚಾರಕರು, ವೇಣು ವಿದ್ಯಾಸಂಸ್ಥೆಯ ಆಡಳಿತ ವೈದ್ಯಾಧಿಕಾರಿಗಳಾದ ಎನ್.ಬಿ.ಗೋಪಾಲ ಗೌಡ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ನಾರಾಯಣಪ್ಪ, ಸಾಹಿತಿ ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ತಬಲವಾದಕ ಸೋಮು, ಇತರರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.