ದುಬೈ(www.vknews.in): ಹೆಸರಾಂತ ಸಮಾಜ ಸೇವಕ ಹಾಗೂ ಕೆಎಂಸಿಸಿ ಅಬುಧಾಬಿ ವಲಯದ ಅಧ್ಯಕ್ಷರಾಗಿದ್ದ ಕರೀಂ ಹಾಜಿ (62) ಅವರು ಎಪ್ರಿಲ್ 30ರಂದು ಕೊರೊನಾ ವೈರಸ್ ಗೆ ಬಲಿಯಾಗಿದ್ದಾರೆ. ಯುಎಇಯಲ್ಲಿ ಕೊರೊನಾ ವೈರಸ್ ಹರಡುವಿಕೆಯ ಆರಂಭದಲ್ಲಿ ಕರೀಂ ಹಾಜಿಯವರು ಆಹಾರ ಅಭಿಯಾನದ ನೇತೃತ್ವ ವಹಿಸಿದ್ದರು . ಎಮಿರೇಟ್ನಲ್ಲಿ ಆಹಾರದ ಅಗತ್ಯವಿರುವ 1,000 ಕ್ಕೂ ಹೆಚ್ಚು ಜನರಿಗೆ ಆಹಾರವನ್ನು ನೀಡುವ ಜವಾಬ್ದಾರಿಯನ್ನು ಅವರು ಹೊಂದಿದ್ದರು. ಸಕ್ರೀಯ ಸಮಾಜ ಸೇವಕಾಗಿದ್ದ ಹಾಜಿಯವರು ಕೆಎಂಸಿಸಿ ಅಲ್ಲದೇ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಹಾಗೂ ಸುನ್ನಿ ಸೆಂಟರ್ ನ ಸಕ್ರೀಯ ಸದಸ್ಯರಾಗಿದ್ದರು.
ಕೊರೊನಾ ಬಾಧಿತರಾದ ಕರೀಂ ಹಾಜಿ ಕಳೆದ 10 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತಿರುವನಂತಪುರದ ನಿವಾಸಿಯಾದ ಕರೀಂ ಹಾಜಿಯವರು ಚಿಕಿತ್ಸೆ ಫಲಕಾರಿಯಾಗದೇ ಅಬುಧಾಬಿಯ ಅಲ್ ಬುರ್ಜೀಲ್ ಆಸ್ಪತ್ರೆಯಲ್ಲಿ ಎಪ್ರಿಲ್ 30ರಂದು ಕೊನೆಯುಸಿರೆಳೆದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.