(www.vknews.com) : ದೇಶದಾದ್ಯಂತ ಕೊರೋನ ಸೋಂಕು ಪ್ರತಿನಿತ್ಯ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿರುವುದು ವಿಪರ್ಯಾಸವೇ ಸರಿ.
ದ.ಕ. ಜಿಲ್ಲೆಯಲ್ಲೂ ಕೊರೋನ ಇನ್ನೂ ಕೂಡಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಅಲ್ಲದೆ ಈದುಲ್ ಫಿತ್ರ್ ಹಬ್ಬ ಸಮೀಪಿಸುತ್ತಿದೆ. ಈದ್ ಹಬ್ಬದ ಖರೀದಿಗೆ ಜನಸಂದಣಿ ಹೆಚ್ಚಾದಲ್ಲಿ ಕೊರೋನ ಸೋಂಕು ಹರಡುವ ಭೀತಿಯೂ ಇದೆ. ಹೀಗಾದಲ್ಲಿ ಈ ಅಪವಾದವನ್ನೂ ನಾವು ಹೊರಬೇಕಾಗುತ್ತದೆ. ಆದುದರಿಂದ ಈ ಸಂದಿಗ್ದ ಪರಿಸ್ಥಿತಿಯಲ್ಲಿ ಲಾಕ್ ಡೌನ್ ಸಡಿಲಿಕೆ ಯಾಕೆ ಮಾಡಲಾಯಿತು ಎಂಬುದರ ಬಗ್ಗೆಯೂ ಮುಸ್ಲಿಂ ಸಮುದಾಯ ಆತ್ಮಾವಲೋಕನ ಮಾಡಬೇಕಾಗಿದೆ.
ಈ ನಡುವೆ ಲಾಕ್ ಡೌನ್ ಸಡಿಲಿಕೆ ಮಾಡಿದರೂ ಮಂಗಳೂರಿನ ಮುಸ್ಲಿಮ್ ಜವಳಿ ವ್ಯಾಪಾರಿಗಳು, ರೆಡಿಮೇಡ್ ಬಟ್ಟೆ ವ್ಯಾಪಾರಿಗಳು, ಫ್ಯಾನ್ಸಿ ಮತ್ತು ಪಾದರಕ್ಷೆ ಅಂಗಡಿಯವರನ್ನೊಳಗೊಂಡ ವರ್ತಕರ ಸಂಘವು ತಮ್ಮ ಅಂಗಡಿಗಳನ್ನು ತೆರೆಯದೇ ಇರಲು ಕೈಗೊಂಡಿರುವ ತೀರ್ಮಾನ ಅತ್ಯಂತ ಶ್ಲಾಘನೀಯವಾಗಿದೆ. ಕೆ.ಟಿ.ಎ.ಯೂತ್ ಫಾರಂ ಎಂಬ ಹೆಸರಿನ ಈ ಸಂಘಟನೆಯು ರಂಝಾನ್ ಮುಗಿಯುವ ವರೆಗೂ ಅಂಗಡಿ ಮುಂಗಟ್ಟುಗಳನ್ನು ತೆರೆಯದೇ ಇರಲು ನಿರ್ಧರಿಸಿರುವುದು ಸಾಂಧರ್ಭೀಕವಾಗಿ ಉತ್ತಮ ತೀರ್ಮಾನವಾಗಿದೆ. ನಾಡಿನ ಸಂರಕ್ಷಣೆಗಾಗಿ ಇವರು ತೆಗೆದುಕೊಂಡಿರುವ ನಿರ್ಧಾರ ನಿಜವಾಗಿಯೂ ಅಭಿನಂದನೀಯ. ಇವರಿಗೆ ಹ್ರತ್ಪೂರ್ವಕ ಕ್ರತಜ್ಞತೆಗಳು.
ಪವಿತ್ರ ರಂಜಾನ್ ತಿಂಗಳಲ್ಲಿ ಮಸೀದಿಗಳಲ್ಲಿ ನಿರ್ವಹಿಸಲಾಗುವ ಅತ್ಯಂತ ಪುಣ್ಯ ಕಾರ್ಯವಾದ ಜಮಾತ್ ನಮಾಝನ್ನೇ ಕೊರೋನ ನಿಯಂತ್ರಣದ ಅನಿವಾರ್ಯ ಕಾರಣಕ್ಕಾಗಿ ಬಿಟ್ಟಿರುವ ನಾವು ಈ ಬಾರಿಯ ಈದ್ ಹಬ್ಬವನ್ನು ಕೂಡಾ ಬಹಳ ಸರಳವಾಗಿ ಆಚರಿಸಬೇಕಾಗಿದೆ. ದ.ಕ.ಜಿಲ್ಲೆಯನ್ನು ಕೊರೋನ ಮುಕ್ತ ಜಿಲ್ಲೆಯನ್ನಾಗಿಸಲು ನಾವೆಲ್ಲರೂ ಜಿಲ್ಲಾಡಳಿತಕ್ಕೆ ಸಹಕಾರ ನೀಡೋಣ…
ಕೆ.ಅಶ್ರಫ್ ಮಾಜಿ ಮೇಯರ್ ಅಧ್ಯಕ್ಷರು, ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.