ಜಮಖಂಡಿ (ವಿಶ್ವ ಕನ್ನಡಿಗ ನ್ಯೂಸ್) : ಕರೋನಾ ಲಾಕ್ಡೌನ್ ಹಿನ್ನಲೆಯಲ್ಲಿ ದುಡಿಯದೆ ಮನೆಗಳಲ್ಲಿರುವ ಕೂಲಿ ಕಾರ್ಮಿಕರಿಗೆ, ಬಡ ಕುಟುಂಬಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ ಇಂತಹ ಸಮಯದಲ್ಲಿ ಬಡಜನರ ಹಾಗೂ ನಿರ್ಗತಿಕರಿಗೆ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸುಮಾರು 1400 ರೇಷನ್ ಕಿಟ್ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಜಮಖಂಡಿ ವತಿಯಿಂದ ವಿತರಿಸಲಾಯಿತು.
ಈ ಸಂಘಟನೆಯು ಈ ಹಿಂದೆಯು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದೆ, ಇಂತಹ ಕೊರೊನಾ ವೈರಸ್ ಸಮಯದಲ್ಲಿ ಇಂತಹ ಒಳ್ಳೆಯ ಕೆಲಸ ಗಳನ್ನು ಮಾಡುತ್ತಿದೆ ಬಡಮಕ್ಕಳ ಎಜುಕೇಷನ್ ನಲ್ಲಿ ಸಹಾಯ ಹಾಗೂ ಅನ್ಯಾಯ ಆದವರಿಗೆ ನ್ಯಾಯ ಒದಗಿಸುವ ಕೆಲಸ, ಇನ್ನು ಅನೇಕ ಹಲವು ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದೆ ಎಂದು ಉದ್ಯಮಿ ಇರ್ಫಾನ್ ಪಠಾನ ಹೇಳಿದರು.
ಜಮಖಂಡಿಯಲ್ಲಿ ಫ್ಲಡ್ ಬಂದಾಗು ಕೂಡಾ ನಿರಂತರ ಎಲ್ಲಾ ಹಳ್ಳಿ ಗಳಲ್ಲಿ ಹೋಗಿ ಸೇವೆ ಮಾಡಿದೆ ಹಾಗೂ ನಿರಂತರ ಜಮಖಂಡಿಯಲ್ಲಿ ನಿರ್ಗತಿಕರ ಬಡಜನರ ಸಹಾಯ ಮಾಡೋಕ್ಕೆ ಮುಂದೆ ಬಂದು ನಿಲ್ಲುತ್ತಾರೆ ಹಾಗೆ ಈ ಸಂಘಟನೆಯು ಮುಂದೆ ಸಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಇದೆ ಸಂದರ್ಭದಲ್ಲಿ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಬಾಗಲಕೋಟೆ ಜಿಲ್ಲಾದ್ಯಕ್ಷ ಇಮ್ತಿಯಾಜ ಜಮಾದಾರ,ನಗರಸಭೆ ಸದಸ್ಯ ಸುನಿಲ್ ಶಿಂಧೆ,ಸಲಿಂ ಅವಟಿ, ಅಸ್ಲಂ ಝೆಂಡೆ, ಶಫೀಕ್ ಪಠಾನ, ಸರ್ಫರಾಜ ಮುಲ್ಲಾ ಹಾಗೂ ಸಂಘಟನೆಯ ಕಾರ್ಯಕರ್ತರು ಇದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.