ದಮ್ಮಾಮ್ /ಜುಬೈಲ್ (ವಿಶ್ವ ಕನ್ನಡಿಗ ನ್ಯೂಸ್): ಅನಿವಾಸಿ ಭಾರತೀಯ ಮಲೆನಾಡಿಗರ ಪ್ರತಿಷ್ಠಿತ ಸಂಘಟನೆಯಾದ ಮಲ್ನಾಡ್ ಗಲ್ಫ್ ಅಸೋಸಿಯೇಷನ್ ,ಸೌದಿ ಅರೇಬಿಯಾ ಇದರ ಅಧ್ಯಕ್ಷರಾದ ಷರೀಫ್ ಕಳಸರವರ ನೇತೃತ್ವದಲ್ಲಿ ಸಚಿವ ಸಿಟಿ. ರವಿರವರಿಗೆ ಟೆಲಿಕಾನ್ಫರೆನ್ಸ್ ಮೂಲಕ ಮಾತನಾಡಿ ಕಾವಿಡ್ -19 ರ ಸನ್ನಿವೇಶದಿಂದಾಗಿ ಉಂಟಾಗಿರುವ ಸಮಸ್ಯೆಗೆ ಈ ವರೆಗೂ ಕರ್ನಾಟಕಕ್ಕೆ ವಿಶೇಷ ವಿಮಾನದ ವ್ಯವಸ್ಥೆ ಮಾಡದೇ ಇರುವ ಬಗ್ಗೆ ಪ್ರಸ್ತಾಪಿಸಿ ,ಬಹು ಹೆಚ್ಚು ಸಂಖ್ಯೆಯಲ್ಲಿ ಕೆಲಸ ಕಳೆದುಕೊಂಡು ಊರಿನತ್ತ ಪ್ರಯಾಣಿಸಲು ಕಾಯುತ್ತಿರುವ ಅನಿವಾಸಿ ಕನ್ನಡಿಗರು ಮತ್ತು ವಿಸಿಟ್ ವೀಸಾ ,ಪ್ರವಾಸಿ ವೀಸಾದಲ್ಲಿ ಬಂದು ಕಾಲಾವಧಿ ಮುಗಿದು ಸಿಲಿಕಿರುವ ಹಿರಿಯ ನಾಗರಿಕರು ,ಗರ್ಭಿಣಿಯರು, ವೇತನವಿಲ್ಲದೆ ಪರದಾಡುತ್ತಿರುವವರು,ರೋಗಿಗಳು ಎಲ್ಲರಿಗೂ ಉಪಯೋಗವಾಗಲು ಆದಷ್ಟು ಬೇಗ ಈ ಸೇವೆಯನ್ನು ಪ್ರಾರಂಭಿಸಲು ಕೇಳಿಕೊಳ್ಳಲಾಯಿತು .
ಕೇಂದ್ರ ಹಾಗು ರಾಜ್ಯ ಎರಡೂ ಕಡೆ ಒಂದೇ ಸರಕಾರ ಇದ್ದಾಗ್ಯೂ ,ಸರಕಾರದ ಕಡಗಣನೆ ತೀವ್ರ ವಿಷಾದನೀಯ ಎಂದು ಗಣ್ಯರು ಅಭಿಪ್ರಾಯ ವ್ಯಕ್ತಪಡಿಸಿದರು.
ಸಚಿವ ಸಿಟಿ. ರವಿ ಇದಕ್ಕೆ ಪೂರಕವಾಗಿ ಸ್ಪಂದಿಸಿ ಆದಷ್ಟು ಬೇಗ ಇದರ ಉಸ್ತುವಾರಿಗಳಾದ ಸದಾನಂದ ಗೌಡ ಹಾಗೂ ಸಂಬದ್ಧಪಟ್ಟ ಅಧಿಕಾರಿಗಳಲ್ಲಿ ಚರ್ಚಿಸಿ ಉತ್ತರಿಸುವುದಾಗಿ ತಿಳಿಸಿದರು .
ಟೆಲಿಕಾನ್ಫರೆನ್ಸ್ ಸಭೆಯಲ್ಲಿ ಕೆ .ಎನ್. ಆರ್.ಐ. ಫಾರಂನ ಅಧ್ಯಕ್ಷರೂ ,ಹಿರಿಯ ಮುಖಂಡರೂ ಆದ ಝಕಾರಿಯ ಹಾಜಿ ಅಲ್ ಮುಝಯ್ನ್, ಫಾರೂಕ್ ಪೋರ್ಟ್ ಫೋಲಿಯೋ , ಮಲ್ನಾಡ್ ಗಲ್ಫ್ ನ ಜುಬೈಲ್ ಘಟಕದ ಗೌರವಾಧ್ಯಕ್ಷರಾದ ಫಾರೂಕ್ ಅರಬ್ ಎನರ್ಜಿ , ಅಂತರ್ರಾಷ್ಟ್ರೀಯ ಸಂಯೋಜಕರಾದ ಅಬ್ದುಲ್ ಸತ್ತಾರ್ ಕ್ಲೌಡ್ ಸೆವೆನ್ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು .
ಮಲ್ನಾಡ್ ಗಲ್ಫ್ ಅಸೋಸಿಯೇಷನ್ ಈ ಸಂಬಂದ ಸಹಾಯವಾಣಿಯನ್ನೂ ಆರಂಭಿಸಿದ್ಗು ಗರಿಷ್ಠ ಮಟ್ಟದ ಸಹಾಯ ಹಸ್ತ ಚಾಚುವ ಕಟಿಬದ್ದತೆಯನ್ನು ಹೊಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.