(www.vknews.com) : ಯುವಕನೊಬ್ಬ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಲು ಪ್ರಯತ್ನಿಸಿದಾಗ ಅದನ್ನು ಕಂಡ ಸ್ಥಳೀಯರು ಯುವಕರು ಆತನನ್ನು ರಕ್ಷಿಸಲು ಕೂಡಲೇ ನದಿಗೆ ಧುಮುಕಿದರು ಮತ್ತು ತಮ್ಮ ಜೀವದ ಹಂಗು ತೊರೆದು ಆ ಯುವಕನನ್ನು ರಕ್ಷಿಸಲು ಪ್ರಯತ್ನಿಸಿದರು . ಆ ವೀರ ಯೋಧರಾದ ಮುಹಮ್ಮದ್, ಸಮೀರ್ ಝಾಹಿದ್ ಆರಿಫ್ ಹೈವೇ , ಮುಖ್ತಾರ್ ಮತ್ತು ತೌಸೀಫ್ ರವರಿಗೆ “ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ” ಅಭಿನಂದನೆ ಸಲ್ಲಿಸುತ್ತದೆ.
ಮುಸಲ್ಮಾನರು ಎಂದೂ ಯಾವುದೇ ಧರ್ಮ ಮತ್ತು ಜನಾಂಗದ ವಿರೋಧಿಗಳಲ್ಲ ಸಹಾಯ ಮಾಡುವಾಗ ಇದಾವುದೂ ಅಡ್ಡಿ ಬರುವುದಿಲ್ಲ ಎಂಬ ಸಂದೇಶವನ್ನು ಸಾರಿದ್ದಾರೆ .
ಕೊರೋಣ ಎಂಬ ಮಹಾ ಮಾರಿಯು ಅತ್ಯಂತ ವೇಗದಲ್ಲಿ ಜಗತ್ತಿನಾದ್ಯಂತ ಹಬ್ಬುತ್ತಿರುವುದರಿಂದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕಾದ ಈ ಸಂದರ್ಭದಲ್ಲೂ ನಿಶಾಂತ್ ಎಂಬ ಹಿಂದೂ ಸಹೋದರನ ತುಟಿಗೆ ತುಟಿಯನ್ನು ಸೇರಿಸಿ ಉಸಿರನ್ನು ತುಂಬಲು ಪ್ರಯತ್ನವನ್ನು ಪಡುತ್ತಿದ್ದ ಸಹೋದರ ಆರೀಫ್ ನ ಆ ದೃಶ್ಯವು ಮಾನವೀಯತೆಯನ್ನು ಸಾರುವಂತಿತ್ತು.
ಅದೇ ರೀತಿ ಶಾಂತಿಯ ಸಂದೇಶ ಸಾರುವ ಹಬ್ಬ ಆಚರಿಸುವ ಸಂಭ್ರಮದ ಮಧ್ಯೆಯೂ ಸಾಮರಸ್ಯದ ಸಂದೇಶವನ್ನು ನೀಡಿದ್ದಾರೆ ಎಂದು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ರಾಜ್ಯ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.