(ವಿಶ್ವ ಕನ್ನಡಿಗ ನ್ಯೂಸ್) : ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಅಂತನೇ ಖ್ಯಾತಿಗಳಿಸಿರುವ “ಮೀಟೂ ವಿಥ್ ಫೈಟೂ” ಚಿತ್ರದ ನಿರ್ದೇಶಕ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ಸಿನಿಮಾ ವಿಚಾರಕ್ಕಿಂತ ವಿವಾದಾತ್ಮಕ ಹೇಳಿಕೆಯಿಂದಲೇ ಸುದ್ದಿಯಾದವರು.
ಇದೇ ಕೀರ್ತನ್ ಶೆಟ್ಟಿ ಇದೀಗ ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರಿಗೆ ಜಯಕರ್ನಾಟಕ ಸಂಘಟನೆಯ ಸ್ಥಾಪಕ ಹಾಗೂ ಭೂಗತ ದೊರೆ ದಿವಂಗತ ಮುತ್ತಪ್ಪ ರೈಯವರ ವಿಷಯವಾಗಿ ಟ್ವಿಟರ್ ನಲ್ಲಿ ಟ್ವೀಟ್ ಮಾಡುವ ಮೂಲಕ ಇನ್ನೊಮ್ಮೆ ಸುದ್ದಿಯಾಗಿದ್ದರೆ.
ಯಡಿಯೂರಪ್ಪ ಸರ್ ರವರೇ ನಮ್ಮ ಜಯಕರ್ನಾಟಕ ಸಂಘಟನೆಯ ಸ್ಥಾಪಕರಾದ ಶ್ರೀಯುತ ಮುತ್ತಪ್ಪ ರೈಯವರು ನಮ್ಮನಗಲಿ ಇದೀಗ ಇಪ್ಪತ್ತು ದಿನಗಳಗ್ತಾ ಬಂತು ಅವರು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದವರು ಅದಕ್ಕಾಗಿ ಅವರ ನೆನಪಿಗಾಗಿ ಬೆಂಗಳೂರಿನ ಯಾವುದಾದರೂ ಒಂದು ರಸ್ತೆಗೆ “ಮುತ್ತಪ್ಪ ರೈ ರಸ್ತೆ” ಅಂತ ನಾಮಕರಣ ಮಾಡಬೇಕಾಗಿ ನಿಮ್ಮಲ್ಲಿ ವಿನಂತಿಸುತ್ತಿನಿ ಅಂತ ಟ್ವಿಟರ್ ನಲ್ಲಿ ಟ್ವೀಟ್ ಮಾಡಿ ರಾಜಕೀಯದ ಕೆಲವು ದೊಡ್ಡ ವ್ಯಕ್ತಿಗಳಿಗೂ ಕೂಡ ಈ ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ಟ್ಯಾಗ್ ಮಾಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.