(www.vknews.com) : ಇತ್ತೀಚೆಗೆ, ನೇತ್ರಾವತಿ ನದಿಯಲ್ಲಿ ಆತ್ಮಹತ್ಯೆಗೈದ ಕಲ್ಲಡ್ಕದ ನಿಶಾಂತ್ ಎಂಬ ಯವಕನನ್ನು ರಕ್ಷಿಸುವ ಸಲುವಾಗಿ ಆರಿಫ್ ಅಕ್ಕರಂಗಡಿ ಎಂಬ ಯುವಕ ಯಾವುದೇ ಅಳುಕಿಲ್ಲದೆ ಬಾಯಿಯ ಮೂಲಕ ಶ್ವಾಸವನ್ನು ನೀಡುವ ದೃಶ್ಯ ಧರ್ಮದ ಹೆಸರಿನಲ್ಲಿ ಹೊಂಚುಹಾಕಿ ಜೀವವನ್ನೇ ಬಲಿ ಪಡೆಯುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಈ ಘಟನೆಯು ನಿಜವಾಗಿಯೂ ಸಮಾಜದ ಕಣ್ಣು ತೆರೆಸುವ ಮೂಲಕ ಒಬ್ಬ ಮನುಷ್ಯ ಜೀವನ್ಮರಣ ಸ್ಥಿತಿಯಲ್ಲಿರುವಾಗ ನಮಗೆ ಧರ್ಮ ಮುಖ್ಯವಲ್ಲ ಮಾನವೀಯತೆ ಮುಖ್ಯ ಎಂಬ ಸಂದೇಶವನ್ನು ಸಾರಿದೆ.
ಮಾತ್ರವಲ್ಲ ಆರೀಫ್ ಅಕ್ಕರಗಂಡಿ ಹೇಳುವಂತೆ ನನಗೆ ಈ ಕೆಲಸ ಮಾಡಲು ನನಗೆ ನನ್ನ ಪರಿಶುದ್ದ ಕುರ್ ಆನ್ ಕಲಿಸಿದಂತೆ “ಯಾರಾದರು ಒಂದು ಜೀವವನ್ನು ಉಳಿಸಿದರೆ ಆತ ಇಡೀ ಮಾನವ ಕುಲವನ್ನು ಉಳಿಸಿದಂತೆ ” “ಯಾರಾದರು ಅನ್ಯಾಯವಾಗಿ ಒಬ್ಬ ಮನುಷ್ಯನನ್ನು ಕೊಂದರೆ ಆತ ಇಡೀ ಮಾನವ ಕುಲವನ್ನು ಕೊಂದಂತೆ (ಕ಼ುರಾನ್ 5 ;32 ) ಎಂಬ ಕುರ್ ಆನ್ ವಚನ ಪ್ರೇರೆಪಿಸಿದಂತೆ ಎನ್ನುತ್ತಾರೆ.
ಹೌದು ಈದ್ ದಿನದಂದು, ಕಲ್ಲಡ್ಕದ ನಿಶಾಂತ್ ಎಂಬ ಯುವಕನೊಬ್ಬ ಪಾಣೆ ಮಂಗಳೂರಿನ ನೇತ್ರಾವತಿ ಸೇತುವೆಯಿಂದ ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ್ದನು.
ಇದನ್ನು ತಿಳಿದು, ಕೂಡಲೇ ಕಾರ್ಯಪ್ರವುತ್ತರಾದ ಕಳೆದ 16 ವರ್ಷಗಳಿಂದ ತಮ್ಮ ಪ್ರಾಣವನ್ನು ಲೆಕ್ಕಿಸದೇ ಜೀವವನ್ನು ರಕ್ಷಿಸುತ್ತಿರುವ ಗೂಡಿನಬಳಿ ಹಾಗೂ ಅಕ್ಕರಂಗಡಿಯ ಯುವಕರಾದ ಮೊಹಮ್ಮದ್, ಜಾ಼ಹಿದ್, ಮುಕ್ತಾರ್, ತೌಸಿಫ್ ಮತ್ತು ಆರಿಫ್ ರವರು, ನದಿಗೆ ಹಾರಿ ಯುವಕನನ್ನು ದಡಕ್ಕೆ ತಂದು, ಅವನ ಪ್ರಾಣ ಉಳಿಸಲು ಹರಸಾಹಸಪಟ್ಟಿದ್ದಾರೆ.
ದುರಾದೃಷ್ಟವಶಾತ್, ಎಲ್ಲಾ ವೀರರ ಅವಿರತ ಪ್ರಯತ್ನದ ಹೊರತಾಗಿಯೂ ನಿಶಾಂತ್ ವಿಧಿವಶರಾಗುತ್ತಾರೆ. ಆರಿಫ್ ಅಕ್ಕರಂಗಡಿ ಕತಾರ್ ನಲ್ಲಿ ಕೆಲವು ವರ್ಷಗಳ ಹಿಂದೆ ಪ್ರವಾಸಿಯಾಗಿ ನೆಲೆಸಿದ್ದ ಮಂಗಳೂರಿನ ಜನರಿಗೆ ಚಿರಪರಿಚಿತ ವ್ಯಕ್ತಿ. ಕತಾರ್ ನಲ್ಲಿದ್ದಾಗ, ಆರಿಫ್ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ನ ಕಾರ್ಯಕರ್ತರಾಗಿ, ವಿವಿಧ ಸಮಾಜ ಸೇವೆಯ ಕಾರ್ಯಗಳಲ್ಲಿ, ಕ್ರೀಡಾ ಶಿಬಿರಗಳಲ್ಲಿ ಮುಂಚೂಣಿಯಲ್ಲಿದ್ದು ಗುರುತಿಸಿಕೊಂಡಿದ್ದ ವ್ಯಕ್ತಿ.
ಯಾವುದೇ ಸಾಮಾಜಿಕ ಸೇವೆಗೂ ಉತ್ಸಾಹದಿಂದ ಮುನ್ನುಗುತ್ತಿದ್ದ ವ್ಯಕ್ತಿಯ ಈ ಮಾನವೀಯ ಪ್ರಯತ್ನಕ್ಕೆ ಕತಾರ್ ಇಂಡಿಯನ್ ಸೋಷಿಯಲ್ ಫೋರಂ ತುಂಬು ಹೃದಯದಿಂದ ಅಭಿನಂದಿಸುತ್ತದೆ ಮತ್ತು ಎಲ್ಲರೂ ಈ ತರಹದ ಮಾನವೀಯ ಮೌಲ್ಯಗಳನ್ನು ಇನ್ನು ಮುಂದೆಯೂ ಎತ್ತಿ ಹಿಡಿದು, ಸಮಾಜ ಸೇವೆಯೇ ನಮ್ಮ ಗುರಿ ಎಂದು ಸಾಬೀತುಪಡಿಸಲಿ ಎಂದು ಹಾರೈಸುತ್ತದೆ.
ಕತಾರ್ ಇಂಡಿಯನ್ ಸೋಷಿಯಲ್ ಫೋರಂ (QISF) ದೋಹ, ಕತಾರ್.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.