(www.vknews.com) : “ಹರಿನಾಮ ಚಂದ ಅದ ನಂಬಿಕೊ ಕಂದ” ಎಂಬ ಆ ದಾಸವಾಣಿಯಂತೆ ಈ ಎಷ್ಟು ಜನ್ಮವನ್ನು ಕಳೆದು ಈ ನರ ಜನ್ಮಕ್ಕೆ ಬಂದಾಗ ಆ ಹರಿ ನಾಮಾಮೃತವನ್ನು ಉಚ್ಚರಿಸಿ ಕಳೆದ ಎಲ್ಲ ಜನ್ಮದಲ್ಲಿ ಮಾಡಿದ ಪಾಪವನ್ನು ನಾವು ಕಳೆಯಬೇಕು. ಹಾಗೆ “ಹರಿ ಕುಣಿದ ನಮ್ಮ ಹರಿ ಕುಣಿದ ” ಎಂದು ಅಂದು ಗೋಪಿಕೆಯರು ಕೃಷ್ಣನ ಮನಸ್ಸನ್ನು ಆ ಯಮುನಾ ನದಿಯಲ್ಲಿ ದುಷ್ಟ ಕಾಳಾಂಧಿ ಎಂಬ ಕಾಳಿಂಗ ಹಾವಿನ ರೂಪದಲ್ಲಿ ಬಂದ ಅಸುರನ್ನು ಕಾಳಿಂಗ ಮರ್ಧನನಾಗಿ ಗೋಪಿಕೆಯರ ಮನದಲ್ಲಿ ಹರಿ ಕುಣಿದ ಎಂದು ಹರಿದಾಸರು ಹಿಂದೆ ಹೇಳಿದ್ದಾರೆ. ಅಂತಹ ದಾಸ ಪರೆಂಪರೆಯು ಉಳಿಯಲು ಇಂದು ಹರಿ ಕಥೆ, ಭಜನೆ, ಭಕ್ತಿಸಂಗೀತ ಮುಂತಾದವು ಇಂದು ಇವೆ.
ಈ ಹರಿದಾಸರು ಹಿಂದೆ “ದಾಸ ದಾಸರ ಮನೆಯ ದಾಸನು ದಾಸ ನಾನು” ಎಂಬ ಸಂಕೀರ್ತನೆಯನ್ನು ದಾಸ ಶ್ರೇಷ್ಠರು ಶ್ರೀಹರಿಯನ್ನು ಹಾಡಿ ಹೊಗಳಿದ್ದಾರೆ. ಹಿಂದೆ ಕೃತಯುಗದಲ್ಲಿ ದಾನ ಧರ್ಮ ಸತ್ಯದಿಂದ ದೇವರನ್ನು ಒಲಿಸುತ್ತಿದ್ದರಂತೆ, ತೇತ್ರಾಯುಗದಲ್ಲಿ ಬಾಹು ಬಲ ಯಜ್ಞ ಯಾಗಾದಿಗಳಿಂದ ದೇವರನ್ನು ಒಲಿಸುತ್ತಿದ್ದರಂತೆ, ಕಲಿಯುಗದಲ್ಲಿ ಸಂಕೀರ್ತನೆಯಿಂದ, ದೇವರ ನಾಮವನ್ನು ಕೇಳುವುದರಲ್ಲಿ ನಾವು ದೇವರನ್ನು ಒಲಿಸಿಕೊಳ್ಳಬಹುದು. ಅದೇ ಪರಂಪರೆಯಲ್ಲಿ ಗೆದ್ದವರು ದಾಸ ಶ್ರೇಷ್ಟರಾದ ಕನಕ, ಪುರಂದರದಾಸರಾದರು. ಹೀಗೆ ಅಂತಹ ಸಂಕೀರ್ತನೆಯ ಒಂದು ಭಾಗ ಹರಿಕಥೆಯನ್ನು ಜನರು ಮಾಡುತ್ತಾರೆ. ಆ ಹರಿಕಥೆಯನ್ನು ಶ್ರವಣ ಮಾಡುವುದರಿಂದ ಹಾಗು ಹರಿಕಥೆಯನ್ನು ಮಾಡುವುದರಿಂದ ನಮ್ಮ ಕನ್ನಡ ಸಂಕೃತಿಯನ್ನು ಎತ್ತಿ ಹಿಡಿಯುತ್ತದೆ. ಈ ಸಂಕೃತಿಯನ್ನು ಬೆಳೆಸುವಲ್ಲಿ ಯಕ್ಷಗಾನ, ಹರಿಕಥಾ ಕಾಲಕ್ಷೇಪ, ಭಜನೆ ಮುಂತಾದವುಗಳು ಒಳಗೊಂಡಿದೆ.
ಈ ಹರಿದಾಸ ಪರಂಪರೆಯನ್ನು ಉಳಿಸಿ ಬೆಳೆಸಿದವರು, ಸುಮಾರು ಐದು ಸಾವಿರಕ್ಕೂ ಹೆಚ್ಚು ಹರಿಕಥೆಯನ್ನು ಮಾಡಿದ ಉಭಯ ಜಿಲ್ಲೆಯಾದ ಕರಾವಳಿ ಜಿಲ್ಲೆಯ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಶಿವಪುರ ಪಾಂಡುಕಲ್ಲು ಹರಿದಾಸ ಬಿ.ಸಿ. ರಾವ್ ಶಿವಪುರ ಎಂದು ಕರ್ನಾಟಕ ನಾಡಿನಾದ್ಯಂತ ಮನೆ ಮಾತಾದರು. ಶ್ರೀಯುತ ಹರಿದಾಸರು ಬ್ರಾಹ್ಮಣ ಕುಟುಂಬದ ತಂದೆ ಪಠೇಲ್ ಬಿ. ಸದಾಶಿವ ರಾವ್ ಮತ್ತು ತಾಯಿ ಸರಸ್ವತಿ ರಾವ್ ಅವರ ದಂಪತಿಯ ಗರ್ಭಸಂಜಾತನಾಗಿ ಏಪ್ರಿಲ್ ೧೨, ೧೯೪೯ರಲ್ಲಿ ಭಡ್ಕಿಲಾಯ ಚಂದ್ರಶೇಖರ ರಾವ್ ಅವರ ಜನನವಾಯಿತು. ಬಾಲ್ಯದಿಂದಲೇ ಹವ್ಯಾಸ ಭಜನೆ, ಹರಿಕೀರ್ತನೆ, ಭಾಷಣ, ಬೋಧನೆ ಮುಂತಾದ ಸ್ಪರ್ಧೆಯಲ್ಲಿ ಭಾಲಕ ಚಂದ್ರಶೇಖರ ಮೊದಲು ಬಂದರು. ಅಂತಹ ವಿದ್ಯಾರ್ಥಿ ಇಂದು ವಾಗ್ಮಿ, ಮಾನವೀಯತೆಯ ಸಂಬಂಧದ ಮೌಲ್ಯವನ್ನು ಜನರಿಗೆ ಚರ್ಚೆ, ಉಪನ್ಯಾಸ, ಭಾಷಣಕಾರರಾಗಿ ಜನರಿಗೆ ಬೋದಿಸಿದರು. ಹೀಗೆ ಉತ್ತಮ ಹರಿಕಾರನಾಗಿ ಸಂಕೀರ್ತನೆಯನ್ನು ಅರ್ಥದ ಮೂಲಕ ಉಣಿಸಿದ ಹರಿದಾಸರಾಗಿ ಇಂದು ಜನ ಮಾನಸದಲ್ಲಿ ಹರಿದಾಸ ಬಿ. ಸಿ. ರಾವ್ ಎಂದು ಪ್ರಸಿದ್ಧಿ ಪಡೆದು ಜನಾನುರಾಗಿದ್ದರೆ.
ಶ್ರೀಯುತರು ಉತ್ತಮ ಹರಿಕಥೆ ಮಾಡಿ ಹರಿದಾಸರಲ್ಲದೆ, ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡಲ್ಲಿ ಎಂ ಎ ಸ್ನಾತಕೋತ್ತರ ಪದವಿಯನ್ನು ಪಡೆದು ಪತ್ರಕರ್ತರಾಗಿ ಹಲವಾರು ಮೌಲ್ಯಾಧಾರಿತ ಲೇಖನಗಳನ್ನು ಬರೆದಿದ್ದಾರೆ. ಅಲ್ಲದೇ ಮೌಲ್ಯಾಧಾರಿತ ಶಿಕ್ಷಕರಿಗೆ ತರಬೇತುದಾರರಾಗಿ, ನಾನಾ ಇಲಾಖೆಯ ಸಿಬ್ಬಂದಿಯರಿಗೆ ತರಬೇತಿ ನೀಡಿದ್ದಾರೆ. ಲೇಖಕರಾಗಿ ದುಡಿಯುತ್ತಿರುವ ಇವರನ್ನು ಕಾರ್ಕಳ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿದ್ದಾರೆ. ಮುಂದೆ ಹೆಬ್ರಿ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತ್ಯ ಸಮ್ಮೇಳನವನ್ನು ೨೦೧೯ರಲ್ಲಿ ನಡೆಸಿಕೊಟ್ಟರು. ಹೀಗೆ ಇವರ ಸಾಧನೆಗೆ ಹಲವಾರು ಸಂಘ ಸಂಸ್ಥೆಗಳು ಗೌರವಿಸಿದೆ.
ಶ್ರೀಯುತರ ತಮ್ಮ ಅನುಭವ ಮತ್ತು ಕಾರ್ಯ ಸಾಧನೆಗೆ ಹಲವಾರು ಸಾವಿರಾರು ಸನ್ಮಾನಗಳು ಬಂದಿವೆ. ಶ್ರೀಯುತರ ಹರಿಕಥೆ ಕಾಲಕ್ಷೇಪಕ್ಕೆ ಮಂಗಳೂರು ವಿಶ್ವವಿದ್ಯಾನಿಯದಿಂದ ೧೯೯೩ರಲ್ಲಿ ಹರಿಕಥಾ ಪ್ರಶಸ್ತಿ, ೨೦೦೩ರಲ್ಲಿ ರಾಜ್ಯ ಅತ್ಯುತ್ತಮ ಹರಿದಾಸ ಪ್ರಶಸ್ತಿ [ಉಪಾಧ್ಯಾಯ ಸಂಮಾನ], ೨೦೧೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಹರಿಕಥಾ ಪ್ರಶಸ್ತಿ, ೨೦೧೮ರಲ್ಲಿ ರಾಜ್ಯ ಕನ್ನಡ ಸಾಹಿತ್ಯ ಪರಷತ್ತು ಹರಿದಾಸ ಪ್ರಶಸ್ತಿ, ಪೇಜಾವರ ಶ್ರೀ ಪ್ರಶಸ್ತಿ, ಪುತ್ತಿಗೆ ಶ್ರೀ ಪ್ರಶಸ್ತಿ, ಪಲಿಮಾರು ಶ್ರೀ ಪ್ರಶಸ್ತಿ, ಶ್ರೀ ವಿದ್ಯಾಮಾನ್ಯ ಪ್ರಶಸ್ತಿ, ಸೋದೆ ಶ್ರೀ ವಾದಿರಾಜಸ್ವಾಮಿ ಗೌರವ ಪ್ರಶಸ್ತಿ, ಹೆರ್ಗ ಶ್ರೀ ದುರ್ಗಾಪರಮೇಶ್ವರೀ ದೇವಾಲಯ ಪ್ರಶಸ್ತಿ, ಪಾಂಡುಕಲ್ಲು ಸ್ವಯಂಭೂ ಶ್ರೀ ಕೋಟಿನಾಥೇಶ್ವರ ಪ್ರಶಸ್ತಿ, ಶಿವಪುರ ಶ್ರೀ ಶಂಕರದೇವ ಪ್ರಶಸ್ತಿ, ಮುದ್ರಾಡಿ ಆದಿಶಕ್ತಿ ದೇವಿ ಪ್ರಶಸ್ತಿ, ಪೆರ್ಡೂರು ರಾಮಕೃಷ್ಣ ಕಲ್ಯಾಣಿ ಪ್ರಶಸ್ತಿ, ಶರವು ರಾಮಕೃಷ್ಣ ಶಾಸ್ರ್ತಿ ಪ್ರಶಸ್ತಿ, ಗದಗದ ತೋಟದಾರ್ಯಸ್ವಾಮಿ ಪ್ರಶಸ್ತಿ, ಶ್ರೀ ಸತ್ಯಸಾಯಿಬಾಬಾ ಗೌರವ ಪ್ರಶಸ್ತಿ, ಕಟಪಾಡಿ ವಿಶ್ವನಾಥ ಪ್ರಶಸ್ತಿ, ಉಡುಪಿ ಶ್ರೀ ಅನಂತೇಶ್ವರ ದೇವಾಲಯ ಪ್ರಶಸ್ತಿ, ಇಂದ್ರಾಳಿ ಶ್ರೀ ಕಾಮಾಕ್ಷಿ ದೇವಾಲಯ ಪ್ರಶಸ್ತಿ, ಮಾತಾ ಅಮೃತಾನಂದಮಯ ಪ್ರಶಸ್ತಿ, ಹೀಗೆ ಶ್ರೀಯುತ ಧಾರ್ಮಿಕ ಪ್ರವಚನಕ್ಕೆ ದೊರೆತ ಪ್ರಶಸ್ತಿ ಹಾಗು ವಿವಿಧ ಸಂಘ ಸಂಸ್ಥೆಗಳು ಶ್ರೀಯುತರ ಸಾಧನೆ ಗುರುತಿಸಿ ಸಾಲಿಗ್ರಾಮ ಡಿವೈನ್ ಪಾರ್ಕ್ ಶ್ರೀ ಗುರೂಜಿ ಪ್ರಶಸ್ತಿ, ಪತ್ರಿಕೋದ್ಯಮ ಸೇವೆ ಸಲ್ಲಿಸಿದ್ದಕ್ಕೆ ವಿಜಯ ಕರ್ನಾಟಕ ಸತ್ಸಂಗ ಗೌರವ ಪ್ರಶಸ್ತಿ, ಪತ್ರಕರ್ತ ಗೌರವ ಪ್ರಶಸ್ತಿ, ಗೋವಾ ತುಳು ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಜಯ ಕರ್ನಾಟಕ ಪ್ರಶಸ್ತಿ, ಸಿಂಡಿಕೇಟ್ ಬ್ಯಾಂಕ್ ಪ್ರಶಸ್ತಿ, ಕಾರ್ಪೊರೇಷನ್ ಬ್ಯಾಂಕ್ ಸಿರಿಗಂಧ ಪ್ರಶಸ್ತಿ, ಬಾರತೀಯ ಜೀವ ವಿಮಾ ನಿಗಮ ಪ್ರಶಸ್ತಿ, ಪರ್ಕಳ ದುರ್ಗಾನಗರ ಬಳಕೆದಾರ ವೇದಿಕಾ ಪ್ರಶಸ್ತಿ, ಜೇಸಿರೇಟ್ ಸಂಘಟನೆಯ ಕೆಲಸ ಮಾಡಿದ್ದಕ್ಕೆ ೧೯೯೦ರಲ್ಲಿ ಜೇಸಿಐ ರಾಷ್ಟ್ರಮಟ್ಟದ ಭಾಷಣ ಪ್ರಶಸ್ತಿ , ೨೦೦೧ರಲ್ಲಿ ಎಚ್ ಜಿ ಎಫ್ ಜೇಸಿಐ ಅಂತಾರಾಷ್ಟ್ರೀಯ ಪ್ರಶಸ್ತಿ, ೨೦೦೪ರಲ್ಲಿ ಲಯನ್ಸ್ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ೨೦೦೫ರಲ್ಲಿ ರೋಟರಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ಜೇಸಿಐ ಅತ್ಯುತ್ತಮ ತರಬೇತುದಾರ ಪ್ರಶಸ್ತಿ; ದೆಹಲಿ ಕನ್ನಡಿಗ ರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ರಾಜ್ಯ ವೇದಿಕೆ ಗೌರವ ಪ್ರಶಸ್ತಿ, ಹಾಗೆ ಧರ್ಮಸ್ಥಳ ಸಂಘ ಸಂಸ್ಥೆಯಿಂದ ಧರ್ಮಸ್ಥಳ ಮದ್ಯವ್ಯಸನ ವಿಮುಕ್ತಿ ಮಾರ್ಗಧರ್ಶನ ಸಂಪನ್ಮೂಲ್ಯ ವ್ಯಕ್ತಿ ಪ್ರಶಸ್ತಿ ಇನ್ನು ಅನೇಕ ಪ್ರಶಸ್ತಿಗಳನ್ನು ಮುಡಿಗೇರಿದೆ. ಅಲ್ಲದೆ ನೂರಾರು ಸಂಘ ಸಂಸ್ಥೆಗಳು ಸಮ್ಮಾನ ಗೌರವ ಶ್ರೀಯುತರ ಅರಸಿ ಬಂದಿದೆ.
ಶ್ರೀಯುತರು ಹೀಗೆ ಬಹುಮುಖ ಪ್ರತಿಭೆಯಿಂದ ಸಮಾಜದ ಎಲ್ಲಾ ವರ್ಗದವರನ್ನು ಪ್ರೀತಿಯಿಂದ ಮಾತಾಡಿ ಎಲ್ಲರನ್ನು ಸಮಾನ ದೃಷ್ಟಿಯಿಂದ ಕಾಣುವ ಶ್ರೀಯುತರಿಗೆ ಹಮ್ಮು ಬಿಮ್ಮುಗಳಿಲ್ಲ. ಸರಳ ಸಜ್ಜನ ಮಾತುಗಾರಿಕೆಯನ್ನು ಇವರು ಹಿರಿಯರಿಗೆ ತಲೆಬಾಗಿ ಕಿರಿಯರಿಗೆ ಹುರಿದುಂಬಿಸುವ ವ್ಯಕ್ತಿತ್ವ ಶ್ರೀಯುತರದ್ದಾಗಿದೆ. ಅಲ್ಲದೆ ಸುಮಾರು ಎಪ್ಪತ್ತೆರಡರ ಆಸುಪಾಸಿನ ವಯಸ್ಸಿನಲ್ಲಿ ಲವಲವಿಕೆ ಕ್ರಿಯಾಶೀಲತೆ ಬದುಕು ಚಟುವಟಿಕೆಯು ಹರಿದಾಸರದ್ದಾಗಿದೆ. ಶ್ರೀಯುತರು ತಮ್ಮ ಧರ್ಮಪತ್ನಿ ಅಹಲ್ಯರವರೊಂದಿಗೆ ದಾಂಪತ್ಯದಿಂದ ಇಬ್ಬರು ಕನ್ಯಾ ರತ್ನರಾಗಿ ಪೂರ್ಣಿಮಾ ಉಡುಪ ಹಾಗು ಪದ್ಮ ಜನಿಸಿದರು. ಇಬ್ಬರು ಹೆಣ್ಣು ಮಕ್ಕಳನ್ನು ಕಿನ್ನಿಗೋಳಿ ಊರಿಗೆ ಮದುವೆಯನ್ನು ಮಾಡಿಕೊಟ್ಟು ಪತಿಯರೊಟ್ಟಿಗೆ ವಾಸವಾಗಿದ್ದಾರೆ. ಹೀಗೆ ತಮ್ಮ ವಿಶ್ರಾಂತಿ ಜೀವನವನ್ನು ಪಾಂಡುಕಲ್ಲಿನ ತಮ್ಮ ಮನೆಯಲ್ಲಿ ಸುಖ ಸಂತೋಷದಿಂದ ಇದ್ದಾರೆ. ಹೀಗೆ ಶ್ರೀಯುತರಿಗೆ ತನ್ನ ಮುಂದಿನ ಜೀವನ ನನ್ನ ಆರಾಧ್ಯ ದೇವಿಯಾದ ಆದಿಶಕ್ತಿ ಶ್ರೀ ಚಾರದ ದುರ್ಗಾಪರಮೇಶ್ವರಿ ಹಾಗು ನಾರಾಯಣನು ನಿವೃತ್ತ ಜೀವನ ಸುಖವಾಗಿರಲಿ ಎಂದು ನಾವೆಲ್ಲರೂ ಹಾರೈಸೋಣ.
✍️ಪ್ರಸಂಗಕರ್ತರು ಚಾರ ಪ್ರದೀಪ ಹೆಬ್ಬಾರ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.