ಉಳ್ಳಾಲ (ವಿಶ್ವ ಕನ್ನಡಿಗ ನ್ಯೂಸ್) : ವಿದೇಶದ ದಮಾಮ್, ಮತ್ತು ರಿಯಾದ್ ನಲ್ಲಿ ತೀವ್ರ ಸಂಕಷ್ಟದಲ್ಲಿರುವ ಅನಿವಾಸಿಗಳಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ಬಾಡಿಗೆ ವಿಮಾನ ಮೂಲಕ ತಾಯ್ನಾಡಿಗೆ ಮರಳಲು ನೆರವಾದ ಸ್ಯಾಕೋ ಕಂಪನಿಯ ಪಾಲುದಾರರಾದ ಅಲ್ತಾಫ್ ಉಳ್ಳಾಲ್ ಮತ್ತು ಬಶೀರ್ ಸಾಗರ್ ರವರ ಮಾನವೀಯ ಸೇವೆ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಮಹಾ ವೇದಿಕೆ ದ,ಕ ಜಿಲ್ಲೆ ಜಿಲ್ಲಾಧ್ಯಕ್ಷರಾದ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ರವರು ಹೇಳಿದ್ದಾರೆ.
ಮುಝೈನ್ ,ಎಕ್ಸ್ ಪಟೈಸ್ ನ ಮಾಲಕರಾದ ಝಕರಿಯಾ ಹಾಜಿ ಜೋಕಟ್ಟೆ ಮತ್ತು ಶೈಕ್ ಕರ್ನಿರೆ ರವರು ತನ್ನ ಕಂಪನಿಯಲ್ಲಿ ಜಿಲ್ಲೆಯ ಹಲವು ಯುವಕರಿಗೆ ಉದ್ಯೋಗ ಕೊಟ್ಟು ನಾಡಿನ ಜನತೆಗೆ ಆಶಾಕೇಂದ್ರವಾಗಿದ್ದ ಮುಝೈನ್ ಕಂಪೆನಿ Covid19 ನ ಸಂಧಿಗ್ಧ ಘಟ್ಟದಲ್ಲಿ ನಾಡಿಗೆ ಹೊರಡಲು ಬಯಸಿದವರನ್ನು ಎರಡು ವಿಮಾನದ ಮೂಲಕ ಊರಿಗೆ ಬರಲು ವ್ಯವಸ್ಥೆಗೊಳಿಸಿದ ಝಕರಿಯಾ ಜೋಕಟ್ಟೆ ಮತ್ತು ಶೈಕ್ ಕರ್ನಿರೆ ರವರ ಕಾರ್ಯವು ಶ್ಲಾಘನೀಯ ಎಂದು ಇದೆ ಸಂದರ್ಭದಲ್ಲಿ ಅವರು ಹೇಳಿದರು.
ಸ್ಯಾಕೋ ಕಂಪನಿ ಮೊದಲ ವಿಮಾನದಲ್ಲಿ ಸೌದಿ ಅರೇಬಿಯಾದ ವಿವಿಧ ಭಾಗಗಳಲ್ಲಿ ತೀವ್ರ ತೊಂದರೆ ಅನುಭವಿಸುತ್ತಿದ್ದ ಅನಿವಾಸಿಗಳನ್ನು ಗುರುತಿಸಿ ಊರಿಗೆ ಮರಳಲು ನೆರವಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.