(www.vknews.com) : ಕನಾ೯ಟಕ ಏಕಿಕರಣಕ್ಕಾಗಿ ಹಿರಿಯರು ಮಾಡಿದ ಹೋರಾಟದಿಂದ ಕರುನಾಡು ಒಂದು ಸುಸ್ಪಷ್ಟ ಸುಂದರ ರಾಜ್ಯವಾಗಿದೆ ಆದರೂ ಆ ಹೋರಾಟ ಇಂದಿಗೂ ನಿಂತಿಲ್ಲ. ಕನ್ನಡದ ಏಳ್ಗೆಗಾಗಿ, ಭಾಷೆ-ಭೂಮಿಯ ಉನ್ನತಿಗಾಗಿ, ಕನ್ನಡಿಗರ ಉಳಿವಿಗಾಗಿ ನಮ್ಮ ನಾಡಿನ ಹಿರಿಯರು, ಕವಿ- ಸಾಹಿತಿಗಳು, ನಾಡಿನ ರಾಜಕೀಯ ಮುಖಂಡರು, ಚಿತ್ರನಟರು, ಕಲಾವಿದರು, ಶಿಕ್ಷಣಾಭಿಮಾನಿಗಳು, ಹಿರಿಕಿರಿಯರೆಲ್ಲರು ಒಂದಾಗಿ ಇಂದಿಗೂ ನಾಡಿಗಾಗಿ ಹೋರಾಡಲು ಸಿದ್ದರಿದ್ದು ನಾಡಧ್ವಜ ಎತ್ತಿ ಹಿಡಿದಿದ್ದಾರೆ. ನಾಡ ರಕ್ಷಣೆಗಾಗಿ ಸದಾ ಮುಂದಾಗಿ ಎಲ್ಲರಿಗೂ ಕರೆ ಕೊಡುತಿದ್ದಾರೆ.
ಆತ್ಮಿಯರೆ ನಮ್ಮ ಇಂದಿನ ಅಭಿಮಾನದ ಸಾಧಕರು, ಅತಿಥಿಗಳಾದ ಕಲಬುರಗಿಯ ಡಾ.ನಾನಾಸಾಹೇಬ ಹಚ್ಚಡದ ರವರು. ಸದ್ಯ ಕಲಬುರಗಿಯ ಶರಣ ಬಸವ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ.
ಡಾ.ನಾನಾಸಾಹೇಬ ಹಚ್ಚಡದರವರು ಮೂಲತಃ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದವರು. ಬಡತನದ ಹಾಗೂ ಸುಶಿಕ್ಷಿತ ಕುಟುಂಬದಲ್ಲಿ ಹುಟ್ಟಿ ಬೆಳೆದು ಅಲ್ಲೆ ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದು ನಂತರ ತಮ್ಮ ಪದವಿಪೂರ್ವ ಕಾಲೇಜಿನ ಶಿಕ್ಷಣವನ್ನು ತೇರದಾಳದಲ್ಲಿ ಹಾಗೂ ಅಥಣಿಯ ಎಸ್.ಎಮ್. ಎಸ್ ಪದವಿ ಕಾಲೇಜಿನಲ್ಲಿ ತಮ್ಮ ಪದವಿ ಶಿಕ್ಷಣ ಪೂರ್ಣ ಮಾಡಿ ಮುಂದೆ ಬಿ.ಎಡ್, ಎಂ.ಎ ಗಳೊಂದಿಗೆ ಕೆ.ಸೆಟ್ ಪರೀಕ್ಷೆಯನ್ನು ಯಶಸ್ವಿಯಾಗಿ ಉತ್ತೀಣ೯ರಾಗಿ ಇಂದು ಕಲಬುರಗಿಯ ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತಿದ್ದಾರೆ. ಕೇವಲ ವಿಶ್ವವಿದ್ಯಾಲಯದ ತಮ್ಮ ವಿಷಯದ ಬೋಧನೆ , ತಮ್ಮ ಓದು , ತಮ್ಮ ಮನೆ ಅಂತೆಲ್ಲಾ ಇದ್ದುಕೊಂಡಿದ್ದರೆ ಈ ಸೃಜನಶೀಲರು ಇಂದು ನಮ್ಮ ಮುಂದೆ ಇರುತ್ತಿರಲಿಲ್ಲವೇನೊ, ಸರಳ ಸಜ್ಜನಿಕೆಯ ವ್ಯಕ್ತಿತ್ವ ವಿದ್ಯಾರ್ಥಿಗಳ ಹೆಮ್ಮೆಯ ಪ್ರಾಧ್ಯಾಪಕರಾಗಿದ್ದು ಇವರು ಎಂದೂ ಲೇಝಿ ಆಗದೆ ಸದಾ ಬ್ಯೂಜಿಯಿಗಿದ್ದು ನಿತ್ಯ ಚಟುವಟಿಕೆಗಳಿಂದ ಇದ್ದು ಏನಾದರೊಂದು ಕೆಲಸ ಮಾಡುತ್ತಿರುತ್ತಾರೆ. ಹೌದು ಡಾ.ನಾನಾಸಾಹೇಬ ಹಚ್ಚಡದರವರು ಒಂಥರಾ ಬಹುಮುಖ ಪ್ರತಿಭೆಯ ವ್ಯಕ್ತಿ ಹಾಗೂ ಸಮಾಜದ ಎಲ್ಲ ಆಗು ಹೋಗುಗಳಿಗೆ ಮರಗುವ ಪ್ರಾದ್ಯಾಪಕರು. ಸಮಾಜದ ಸಮಸ್ಯೆಗಳು ತಮ್ಮ ಸ್ವಂತ ಸಮಸ್ಯೆಗಳು ಎಂದು ಸ್ಪಂದಿಸುವ ಸಹೃದಯದ ಪ್ರಾದ್ಯಾಪಕರು. ಡಾ.ನಾನಾಸಾಹೇಬ ಹಚ್ಚಡದರವರು ತಮ್ಮ ಬಾಲ್ಯದ ಶೈಕ್ಷಣಿಕ ಜೀವನದಿಂದ ಇಂದಿಗೂ ತಮ್ಮ ಪ್ರಾಧ್ಯಾಪಕ ವೃತ್ತಿಯಲ್ಲೂ ಸದಾ ಚಟುವಟಿಕೆಯಿಂದ ಕಾಯ೯ನಿವ೯ಹಿಸುವದನ್ನು ಕಂಡು ಇವರ ಶಿಷ್ಯ ಕೋಟಿ ಇವರೊಂದಿಗೆ ಟೊಂಕ ಕಟ್ಟಿ ನಿಲ್ಲುತ್ತದೆ. ಶ್ರೀಯುತರ ಎಲ್ಲಾ ಕಾಯ೯ಗಳಿಗೂ ಗುರುಗಳಾದ ಶ್ರೀ ಡಾ.ಶರಣ ಬಸಪ್ಪ ಅಪ್ಪನವರ ಆಶಿವಾ೯ದ ಸಹಕಾರ ಸದಾ ಇರುತ್ತದೆ ಎಂದು ಡಾ.ನಾನಾಸಾಹೇಬರು ಹುಮ್ಮಸ್ಸಿನಿಂದ ಮುಂದೆ ಸಾಗುತ್ತಾರೆ.
ಶ್ರೀಯುತರ ಸಮಾಜಪರ ಹತ್ತಾರು ಕಾಯ೯ಗಳನ್ನು ಇಲ್ಲಿ ಪ್ರಸ್ತುತಪಡಿಸಿದರು ಅವು ಕಡಿಮೆಯೆ, ೨೦೧೯ರ ಸಪ್ಟೆಂಬರ ನಲ್ಲಿ ಕೃಷ್ಣಾ ನದಿಗೆ ಮಹಾಪೂರ ಬಂದಾಗ ಇವರು ಕಲಬುರಗಿಯಲ್ಲಿದ್ದರು. ಪ್ರವಾಹ ಇಳಿಯುತಿದ್ದಂತೆ ಇವರು ತಮ್ಮ ಬಸವ ದಳದ ಗೆಳೆಯರ ಬಳಗವನ್ನು ಕರೆದುಕೊಂಡು ಅಂದಾಜು ಹತ್ತು ಹಳ್ಳಿಗಳಿಗೆ ಹೋಗಿ ಅಲ್ಲಿನ ಶಾಲೆ, ಪಂಚಾಯಿತಿ, ಗ್ರಂಥಾಲಯ ಹಾಗೂ ಬಡವರ ಮನೆ, ಪರಿಸರವನ್ನು ಸ್ವಚ್ಛ ಮಾಡುವ ಕಾಯ೯ ನಿವ೯ಹಿಸಿ ಅಲ್ಲಿನ ಜನರಿಗೆ ಮರುಜೀವನ ಪ್ರಾರಂಬಿಸಲು ಸಹಕರಿಸಿ ಮಾನವ ಕುಲ ಮೆಚ್ಚಿ ಅಹುದಹುದು ಎನ್ನುವ ಕಾಯ೯ ಮಾಡಿದ್ದಾರೆ. ಶ್ರೀಯುತರ ಈ ಕಾಯ೯ ಅನೇಕ ಪತ್ರಿಕೆಗಳಲ್ಲೂ ವರದಿಯಾಗಿತ್ತು. ಅದೇರೀತಿಯಾಗಿ ೨೦೨೦ ಮಾಚ೯ನಲ್ಲಿ ಕರೋನಾ ಮಹಾಮಾರಕ ರೋಗ ಭಾರತದಲ್ಲಿ ಹರಡುತಿದ್ದಂತೆ ಡಾ.ನಾನಾಸಾಹೇಬ ಹಚ್ಚಡದರವರು ತಮ್ಮ ದ್ವಿಚಕ್ರ ವಾಹನಕ್ಕೊಂದು ಧ್ವನಿವದ೯ಕ ಪೆಟ್ಟಿಗೆಯೊಂದನ್ನು ಕಟ್ಟಿ ಕೈಯಲ್ಲೊಂದು ಮೈಕ್ ಹಿಡಿದು ಕಲಬುರಗಿ ಯಿಂದ ತಮ್ಮೂರಿನತ್ತ ಹೋರಟು ಮಾಗ೯ಮದ್ಯದ ಹಳ್ಳಿಗಳಲ್ಲಿ ಕರೋನಾ ರೋಗದ ಜನಜಾಗೃತಿ ಮೂಡಿಸುವ ಕಾಯ೯ ಮಾಡಿದರು. ಇವರು ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ೧೨೮ ಹಳ್ಳಿಗಳಲ್ಲಿ ಒಟ್ಟು ೪೦೫ ಕಿ.ಮಿ ನಷ್ಟು ಸುತ್ತಾಡಿ ಸಮಾಜಪರ ಕಳಕಳಿಯ ಕೆಲಸ ಮಾಡಿದರು. ಈ ವಿಷಯ ಪತ್ರಿಕೆ, ಟಿ.ವಿ ಮಾದ್ಯಮ, ಹಾಗೂ ರೇಡಿಯೋ ಗಳಲ್ಲೂ ಪ್ರಸಾರವಾಗಿ ವರದಿಯಾಗಿತ್ತು. ಈ ವಿಷಯ ಕನಾ೯ಟಕದ ಶಿಕ್ಷಣ ಮಂತ್ರಿಗಳಾದ ಮಾನ್ಯ ಶ್ರೀ ಎಸ್. ಸುರೇಶಕುಮಾರರವರಿಗೂ ಗೊತ್ತಾಗಿ ಅವರು ಕೂಡಾ ಡಾ.ನಾನಾಸಾಹೇಬರಿಗೆ ವ್ಯಾಟ್ಸಪ್ ಮೂಲಕ ಧನ್ಯವಾದಗಳೊಂದಿಗೆ ಮೆಚ್ಚುಗೆಯನ್ನು ವ್ಯಕ್ತಿ ಪಡಿಸಿದ್ದಾರೆ.
ಇಂಥ ಸಮಾಜಪರ ಕಾಯ೯ಗಳೊಂದಿಗೆ ಶೈಕ್ಷಣಿಕವಾಗಿ, ಪರಿಸರಾತ್ಮಕವಾಗಿ, ವಿದ್ಯಾರ್ಥಿ ಕಲ್ಯಾಣಕ್ಕಾಗಿ ಸದಾ ನಿಸ್ವಾರ್ಥ ಸೇವೆಯ ತವಕದಲ್ಲಿರುತ್ತಾರೆ. ಇದರೊಂದಿಗೆ ದೇಹದಾನ, ನೇತ್ರದಾನ, ಅಂಗಾಂಗದಾನಗಳ ಜಾಗೃತಿ ಕಾಯ೯ಕ್ರಮ ನೀಡುತ್ತಾರೆ. ಅದಲ್ಲದೆ ಇವರು ಹಾಗೂ ಇವರ ಕುಟುಂಬದ ಎಲ್ಲ ಸದಸ್ಯರು ಮರಣದ ನಂತರ ದೇಹದಾನ ಮಾಡುವದಾಗಿ ಒಪ್ಪಿ ಬರೆದು ಕೊಟ್ಟಿದ್ದಾರೆ.
ಸಂಘಟಕರಾಗಿ ಡಾ.ನಾನಾಸಾಹೇಬ ಹಚಡದರವರು.
* ರಾಜ್ಯ ಯುವ ಬರಹಗಾರರ ಒಕ್ಕೂಟ ಉತ್ತರ ಕರ್ನಾಟಕ ವಿಭಾಗದ ಕಾಯಾ೯ದ್ಯಕ್ಷರು. * ಶ್ರೀ ಶರಣ ಬಸವ ವಿಶ್ವವಿದ್ಯಾಲಯದ ಅಭ್ಯಾಸ ಮಂಡಳಿ ಹಾಗೂ ಪರೀಕ್ಷಾ ಮಂಡಳಿ ಸದಸ್ಯರು. * ಕನಾ೯ಟಕ ಪರಿಸರ ವೇದಿಕೆ ಕಲಬುರಗಿ ಜಿಲ್ಲಾ ಘಟಕದ ಅದ್ಯಕ್ಷರು. * ಶ್ರೀ ಶರಣ ಬಸವ ವಿಶ್ವವಿದ್ಯಾಲಯದ ಎನ್.ಎಸ್.ಎಸ್ ಸಂಯೋಜಕರು.
ಇನ್ನೂ ಹತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ನಿದೇ೯ಶಕ, ಸದಸ್ಯರಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ನ್ಯಾಯಪರವಾದ ದಕ್ಷ ಕಾಯ೯ ನಿವ೯ಹಿಸುತಿದ್ದಾರೆ. ಇದಲ್ಲದೆ ಶ್ರೀಯುತರು ಉತ್ತಮ ನಿರುಪಣಾ ಕೌಶಲ್ಯ ಹೊಂದಿದ್ದು ಅನೇಕ ರಾಜ್ಯ ಮಟ್ಟದ ಕಾಯ೯ಕ್ರಮಗಳಲ್ಲಿ ಭಾಗಿಯಾಗುವದಲ್ಲದೆ, ಟಿ.ವಿ, ರೇಡಿಯೋ ಕಾಯ೯ಕ್ರಮಗಳನ್ನು ನೀಡಿರುತ್ತಾರೆ. ಹಾಗೂ ರಾಜ್ಯಾದ್ಯಂತ ವ್ಯಕ್ತಿತ್ವ ವಿಕಸನದ ಬಗ್ಗೆ ೩೫ ಕ್ಕೂ ಹೆಚ್ಚು ಕಾಯಾ೯ಗಾರಗಳನ್ನು ನಡೆಸಿದ್ದಾರೆ. ಮತ್ತು ೧೫ಕ್ಕೂ ಹೆಚ್ಚು ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪತ್ರಿಕೆ ಮಂಡಿಸಿದ್ದಾರೆ. ಕೊರೋನಾದ ಲಾಕ್ಡೌನ ಸಂದರ್ಭದಲ್ಲಿ ಶ್ರೀಯುತರು ಪ್ರಾರಂಭಿಸಿದ ಆನ್ಲೈನ್ ಸ್ಪಧಾ೯ತ್ಮಕ ಪರೀಕ್ಷೆ K.A.S, I.A.S, P.S.I, S.D.A, F.D.A, P.D.O ಗಳಿಗೆ ತರಬೇತಿ ನೀಡಿ ಪರೀಕ್ಷೆ ಎದುರಿಸುವ ಸೂಕ್ತ ಮಾಗ೯ದಶ೯ನ ಹಾಗೂ ಉಪಯುಕ್ತತೆಯನ್ನು ನಡೆಸುತಿದ್ದಾರೆ. ಪರಿಸರ ಜಾಗ್ರತಿಯ ಸಂದರ್ಭದಲ್ಲಿ ಹಳ್ಳಿಗಳಲ್ಲಿ ಮರ ನೆಡುವ ಕಾಯ೯ಕ್ರಮ ಹಮ್ಮಿಕೊಂಡು ನೂರಾರು ಮರಗಳನ್ನು ನೆಟ್ಟಿದ್ದಾರೆ. ಆನ್ಲೈನ್ ನಲ್ಲಿ ರಾಜ್ಯ ಹಾಗೂ ರಾಷ್ಪ್ರ ಮಟ್ಟದ ಸೆಮಿನಾರ್ (ವೆಬಿನಾರ್) ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಮತ್ತು ವಿವಿಧ ಮಹಾವಿದ್ಯಾಲಯಗಳು ನಡೆಸಿರುವ ಇ-ಕ್ವೀಜ್ ಗಳಲ್ಲಿ ಭಾಗವಹಿಸಿ 30ಕ್ಕೂ ಹೆಚ್ಚು ಇ-ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಅಲ್ಲದೆ ಅನೇಕ ಸಾಹಿತ್ಯ ಸಮ್ಮೇಳನ, ಕವನ ರಚನೆ, ಕವನ ವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಾಹಿತ್ಯಿಕವಾಗಿ ಯಶಸ್ಸು ಪಡೆದಿದ್ದಾರೆ.
ಸಾಹಿತಿಗಳಾಗಿ ಡಾ.ನಾನಾಸಾಹೇಬ ಹಚಡದರವರು.
ಶ್ರೀಯುತರು ಇಲ್ಲಿಯವರೆಗೆ ಸ್ವತಃ ರಚನೆಯ ಕೃತಿಗಳನ್ನು ಬರೆದು, ಸಂಪಾದಕರಾಗಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.
* ಸುಂದರ ಬದುಕಿನ ಸರಳ ಸೂತ್ರಗಳು. * ಸಮಗ್ರ ಕನ್ನಡ ಪ್ರಶ್ನೋತ್ತರ ಕೈಪಿಡಿ. * SDA, FDA, PDO ಪ್ರಶ್ನೋತ್ತರ ಕೈಪಿಡಿ. * PU ಉಪನ್ಯಾಸಕರ ನೇಮಕಾತಿ ಕೈಪಿಡಿ. * ಮಹಾದಾಸೋಹಿ ಸೂತ್ರಗಳು ಸಂಪದ (ಸಂಪಾದನೆ) * ಸವ೯ಜ್ಞ ಹಾಗೂ ಸಿದ್ದರಾಮ. * ಹರಿಹರ ರಗಳೆ (ಪಠ್ಯಪುಸ್ತಕ) * ಕನ್ನಡ ಮನಸ್ಸು (ಪಠ್ಯಪುಸ್ತಕ) * ಮಹಾದಾಸೋಹಿ ಸಂಪದ. * ಬಸವರಾಜ ದೇವರ ರಗಳೆ. ಮುಂತಾದವುಗಳು ೨೦೧೬ ರಲ್ಲಿ “ಸಮಗ್ರ ಕನ್ನಡ ಪ್ರಶ್ನೋತ್ತರ ಕೈಪಿಡಿಯು” ಕನಾ೯ಟಕ ಸಾವ೯ಜನಿಕ ಪುಸ್ತಕ ಗ್ರಂಥಾಲಯಕ್ಕೆ ಆಯ್ಕೆ ಆಗಿದೆ . ಡಾ.ನಾನಾಸಾಹೇಬ ಹಚ್ಚಡದ ರವರಿಗೆ ಬಂದ ಸನ್ಮಾನ ಪ್ರಶಸ್ತಿಗಳು * ಕರುನಾಡ ಸೇವಾ ರತ್ನ ಪ್ರಶಸ್ತಿ. * ಗೌರವ ಡಾಕ್ಟರೇಟ್. * ಬೆಸ್ಟ್ ಕನ್ನಡ ಲಕ್ಚರರ್ ಆಫ್ ಇಯರ್ 2019. * ಕುದ್ಮಲ್ ರಂಗರಾವ್ ರಾಜ್ಯ ಪ್ರಶಸ್ತಿ. * ಅಂತರಾಷ್ಟ್ರೀಯ ಕವಿ ಸಮ್ಮೇಳನ ಅಬುಧಾಬಿಯ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ತಮ್ಮ ವಿಶ್ವವಿದ್ಯಾಲಯಕ್ಕೆ ಹೆಮ್ಮೆ ಎನಿಸಿದ್ದಾರೆ. ಇನ್ನೂ ಹತ್ತು ಹಲವಾರು ಸಂಘಟನೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.
ಕವನ, ಕಥೆ, ಕಾದಂಬರಿಗಳ ಓದು ಬರಹದ ಹವ್ಯಾಸದೊಂದಿಗೆ ಕೋಷ ಓದುತ್ತ ದೇಶ ಸುತ್ತುವ ಪ್ರವಾಸದ ಹವ್ಯಾಸವು ಶ್ರೀಯುತರಿಗೆ ತುಂಬಾ ಇದೆ. ಹಾಗಾಗಿ ಒಬ್ಬ ಕವಿ, ಸಾಹಿತಿ, ನಿರುಪಕರಾಗಿ, ಉಪನ್ಯಾಸಕರಾಗಿ, ಶಿಕ್ಷಣ ತಜ್ಞರಾಗಿ, ಸಮಾಜ ಸುಧಾರಕರಾಗಿ, ಪರಿಸರ ಪ್ರೇಮಿಗಳಾಗಿ , ವಿದ್ಯಾರ್ಥಿಗಳ ನೆಚ್ಚಿನ ಪ್ರಾದ್ಯಾಪಕರಾಗಿರುವ ಡಾ. ನಾನಾಸಾಹೇಬ ಹಚ್ಚಡದ ರವರಿಂದ ಇನ್ನೂ ಹತ್ತು ಹಲವಾರು ಸಮಾಜಪರ, ಶಿಕ್ಷಣ ಪರ, ವಿದ್ಯಾರ್ಥಿ ಕಲ್ಯಾಣದ, ಪರಿಸರ ಕಳಕಳಿಯ ಕಾಯ೯ಗಳು ನಡೆಯಲಿ ಇವರಿಗೆ ಆ ಶಕ್ತಿಯನ್ನು ದೇವರು ಶತಮಾನಗಳುದ್ದಕ್ಕು ನೀಡಲಿ ಇವರು ಶರಣ ನಾಡಿನ ಹೆಮ್ಮೆಯ ಆಧುನಿಕ ಶರಣರಾಗಲಿ, ಇವರಿಂದ ಇನ್ನೂ ಹೆಚ್ಚು ಕೃತಿಗಳು ಪ್ರಕಟಗೊಂಡು ಕನ್ನಡ ನಾಡಿಗೆ ಇವರಿಂದ ಮಹಾಕಾಣಿಕೆಗಳು ಸಿಗಲೆಂದು ಏಳು ಕೋಟಿ ಕನ್ನಡಿಗರು ಒಂದಾಗಿ ಶುಭ ಹಾರೈಸೋಣ.
ಎಂ.ಕೆ.ಶೇಖ್. ಶಿಕ್ಷಕರು/ಸಾಹಿತಿಗಳು. ದೇವರ ನಿಂಬರಗಿ, ಚಡಚಣ, ವಿಜಯಪುರ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.