(www.vknews.com) : ಚೇರ್ಕಾಡಿಯ ಅನ್ನಪೂರ್ಣ ನರ್ಸರಿಯ ಮಾಲೀಕ ಶ್ಯಾಮ್ ಪ್ರಸಾದ್ ಹಾಗೂ ತಾಯಿ ಪ್ರಸನ್ನಾ ಪ್ರಸಾದ್ ರ ಪುತ್ರ ಪ್ರಧೀಶ್. ಕೆ. ಭಟ್ ಕಳೆದ ನಾಲ್ಕು ವರ್ಷಗಳ ಹಿಂದೆಯೇ 60 ನಿಮಿಷಗಳಲ್ಲಿ 59 ಚಿತ್ರ ಗಳನ್ನು ದಾರದಿಂದ ಚಿತ್ರಿಸಿ , ಇಂಡಿಯಾ ಬುಕ್ ಆಫ್ ರೆಕಾರ್ಡ್ , ಅಸಿಸ್ಟ್ ವರ್ಲ್ಡ್ ರೆಕಾರ್ಡ್ , ಯೂನಿಕ್ ವರ್ಲ್ಡ್ ರೆಕಾರ್ಡ್ ಇವುಗಳಲ್ಲದೆ ಸಹೋದರ ಪೃಥ್ವೀಶ್ ಜೊತೆ ಸೇರಿ ಕಳೆದ ವರ್ಷ ರುಬಿಕ್ಸ್ ಕ್ಯೂಬ್ ಲ್ಲಿ ಗಿನ್ನೆಸ್ ದಾಖಲೆಗಳನ್ನು ಮಾಡಿ ಜನಜನಿತನಾಗಿದ್ದವರು.
ಇದೀಗ ಈ ಲಾಕ್ ಡೌನ್ ಸಂದರ್ಭದಲ್ಲಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನವರು ದಾಖಲೆಯ ಆಕಾಂಕ್ಷಿಗಳಿಗೆ ಹಲವಾರು ಅವಕಾಶಗಳನ್ನು ನೀಡಿದ್ದಾರೆ.. ಅವುಗಳಲ್ಲಿ ಒಂದಾದ 30 ನಿಮಿಷಗಳಲ್ಲಿ ಅತಿ ಹೆಚ್ಚು ಭಾವಚಿತ್ರ ಚಿತ್ರಿಸುವ ಪ್ರಯತ್ನವನ್ನು ಪ್ರಧೀಶ್ . ಕೆ ಭಟ್ ರವರು ಜೂನ್ 19 ರಂದು ಅನ್ನಪೂರ್ಣ ಮನೆಯಲ್ಲಿ ಸಾಕ್ಷಿದಾರರಾಗಿ ಕೊಕ್ಕರ್ಣೆ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶ್ರೀಯುತ ಪ್ರಕಾಶ್ ಶೆಟ್ಟಿ , ಶಾಸ್ತಾವು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ವನಿತಾ ಶೆಟ್ಟಿ ಹಾಗೂ ಸಮಯಪಾಲಕರಾಗಿ ಶಾರದಾ ಪ್ರೌಢ ಶಾಲೆಯ ಶಾರೀರಿಕ ಶಿಕ್ಷಣಭೋಧಕರಾದ ಶ್ರೀಯುತ ಪ್ರಸನ್ನ ಶೆಟ್ಟಿ , ಪೋಲ್ ವಾಲ್ಟ್ ನ ಭೋಧಕರಾದ ಶ್ರೀಯುತ ಉದಯ್ ಶೆಟ್ಟಿಯವರ ಸಮ್ಮುಖದಲ್ಲಿ 30 ನಿಮಿಷಗಳಲ್ಲಿ 30 ಭಾವಚಿತ್ರ ಗಳನ್ನು ಚಿತ್ರಿಸಿದರು. ಸ್ವಾತಂತ್ರ್ಯ ಯೋಧರ, ಜ್ಙಾನಪೀಠ ಪುರಸ್ಕೃತ ರ ಹಾಗೂ ಮಹಾನ್ ವ್ಯಕ್ತಿಗಳ ಭಾವಚಿತ್ರಗಳನ್ನು ಚಿತ್ರಿಸಿದ್ದು , ಇವುಗಳ ಫೋಟೋ ಹಾಗೂ 30 ನಿಮಿಷಗಳ ವೀಡಿಯೋ ಚಿತ್ರಣವನ್ನು ಲಿಮ್ಕಾ ಆಫೀಸ್ ಗೆ ಕಳುಹಿಸಲಾಗುವುದು. ಜೂನ್ 30 ರಂದು ಫಲಿತಾಂಶ ಬರುವ ನಿರೀಕ್ಷೆ ಇದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.