(www.vknews.com) : SDPI ಪಕ್ಷವು ಉದಯವಾಗಿ 11 ವರುಷ ಕಳೆದು ತನ್ನ 12ನೇ ವರ್ಷಕ್ಕೆ ಕಾಲಿಟ್ಟ ಈ ಸಂದರ್ಭದಲ್ಲಿ ತನ್ನ ಸಂಸ್ಥಾಪನಾ ದಿನವನ್ನು ಅಜ್ಜಿನಡ್ಕ ಜಂಕ್ಷನ್ ನಲ್ಲಿ ಆಚರಿಸಲಾಯಿತು.
ಹಯಾತುಲ್ ಇಸ್ಲಾಂ ಮದ್ರಸ ಅಜ್ಜಿನಡ್ಕ ಸದರ್ ಮುಅಲ್ಲಿಂ ಅಬ್ದುಲ್ ಸತ್ತಾರ್ ಮದನಿ ಇವರ ದುವಾದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. SDPI ಆಜ್ಜಿನಡ್ಕ ಕೋಶಾಧಿಕಾರಿಯಾದ ಇಬ್ರಾಹಿಂ ಉಚ್ಚಿಲ್ ಅತಿಥಿ ಗಣ್ಯರನ್ನು ನೆರೆದವರನ್ನು ಸ್ವಾಗತಿಸಿದರು.
SDPI ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು, SDPI ಅಜ್ಜಿನಡ್ಕ ಅಧ್ಯಕ್ಷರಾದ ಇರ್ಶಾದ್ ಅಜ್ಜಿನಡ್ಕ ಧ್ವಜಾರೋಹಣ ನೆರವೇರಿಸಿದರು. ನಂತರ ಮಾತನಾಡಿದ ಇವರು SDPI ಪಕ್ಷದ ದ್ಯೇಯ, ದೇಶದ ರಾಜಕೀಯದಲ್ಲಿ SDPI ಪಕ್ಷದ ಪಾತ್ರ ಇವುಗಳನ್ನು ವಿವರಿಸಿದರು. ಸಾಮಾಜಿಕ ನ್ಯಾಯಕ್ಕಾಗಿ SDPI ಪಕ್ಷವು ಕಟಿಬದ್ದವಾಗಿದ್ದು, ದೇಶದ ಪ್ರಜೆಗಳು ಅನುಭವಿಸುತ್ತಿರುವ ಯಾತನೆಗಳ ವಿರುದ್ಧ ಹೋರಾಡಲು ಮುಂಚೂಣಿಯಲ್ಲಿದ್ದು, ಐಕ್ಯತೆಯಲ್ಲಿ ಮುಂದೆ ಸಾಗೋಣ ಎಂಬ ಸಂದೇಶವನ್ನು ನೀಡಿದರು.
ದಿಕ್ಸೂಚಿ ಭಾಷಣ ಮಾಡಿದ SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಪಕ್ಷವು ಬೆಳೆದು ಬಂದ ಹಾದಿ, ಪಕ್ಷದ ಸಿದ್ದಾಂತಗಳನ್ನು ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ SKSSF ಉಚ್ಚಿಲ ಕೆ.ಸಿ ರೋಡ್ ಅಜ್ಜಿನಡ್ಕ ಅಧ್ಯಕ್ಷರಾದ ಹಿದಾಯತ್ ಮಾರಿಪಳ್ಳ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸುಲೇಮಾನ್ ಹಾಜಿ (ಅಧ್ಯಕ್ಷರು ಬದ್ರಿಯಾ ಜುಮಾ ಮಸ್ಜಿದ್ ಅಜ್ಜಿನಡ್ಕ, ಮೊಯಿದಿನ್ ಕುಟ್ಟಿ (ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ), ಯು.ಮೊಯಿದಿನ್ (ಉಪಾಧ್ಯಕ್ಷರು ಬೈತುಲ್ಲಾ ಮಸ್ಜಿದ್ ಅಜ್ಜಿನಡ್ಕ) ಮೊ ಹಮ್ಮದ್ ಹನೀಫ್ S.B ಅದ್ಯಕ್ಷರು (ಬದ್ರಿಯಾ ವೆಲ್ಫೇರ್ ಸೊಸೈಟಿ ಮಸ್ಜಿದ್ ಅಜ್ಜಿನಡ್ಕ) ಅತಿಥಿಗಳಾಗಿ ಭಾಗವಹಿಸಿದರು.
SDPI ಅಜ್ಜಿನಡ್ಕ ಸದಸ್ಯರಾದ ಮೊಯಿದಿನ್ S.B ಆಜ್ಜಿನಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಅಜ್ಜಿನಡ್ಕ ಹಿದಾಯತ್ ನಗರ ಪರಿಸರದಲ್ಲಿ ಹಸಿರು ಗಿಡಗಳನ್ನು ನೆಡಲಾಯಿತು. ಹಾಗೂ ಸುಮಾರು 100 ಮನೆಗಳಿಗೆ ತಲಾ 5ಕೆಜಿ ಅಕ್ಕಿ ಮತ್ತು ಬೇಳೆಯನ್ನು ವಿತರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.