(www.vknews.com) : ಶ್ರೀನಿವಾಸ್ ಯೂನಿವರ್ಸಿಟಿ ಕಾಲೇಜ್ ಆಫ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಮುಕ್ಕ ಹಾಗೂ ಹೊಲೊಸೂಟ್ ಸಿಂಗಪೂರರವರ ಸಹಯೋಗಗದೊಂದಿಗೆ ದ್ವಿತೀಯ ಪಿಯುಸಿ ವಿಜ್ಞಾನದಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಮೂರು ನೂತನ ಬಿ. ಟೆಕ್ ಹಾನರ್ಸ್ ಪದವಿಯನ್ನು ಆರಂಭಿಸುತ್ತಿದೆ.
ಬಿ.ಟೆಕ್ ಇನ್ರೊಬೊಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್& ಮಿಷನ್ ಲರ್ನಿಂಗ್, ಬಿ.ಟೆಕ್ಇನ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್& ವರ್ಚುವಲ್ ರಿಯಾಲಿಂಟಿ ಮತ್ತು ಬಿ.ಟೆಕ್ ಇನ್ ಐಓಟಿ ರೊಬೊಟಿಕ್ಸ್& ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಪ್ರಾರಂಭಿಸುತ್ತಿದೆ.
ಭಾರತದಲ್ಲಿ ರೋಬೊಟಿಕ್ ತಂತ್ರಜ್ಞಾನವನ್ನು ಹಲವಾರು ಕ್ಷೇತ್ರದಲ್ಲಿ ಬಳಕೆ ಮಾಡಲಾಗುತ್ತಿದೆ. ಸ್ವಯಂಚಾಲಿತ ಕೈಗಾರಿಕಾ ವಲಯಗಳು ಮಾತ್ರವಲ್ಲದೆ, ಏರೋಸ್ಪೇಸ್, ಕೃಷಿ, ಆರೋಗ್ಯ ಕ್ಷೇತ್ರ ಹಾಗೂ ರಕ್ಷಣಾ ವಲಯಗಳಲ್ಲಿ ರೋಬೊಟಿಕ್ ತಂತ್ರಜ್ಞಾನದ ಬೇಡಿಕೆ ಹೆಚ್ಚುತ್ತಿದೆ.
ವಿದ್ಯಾರ್ಥಿಗಳು ವಿವಿಧ ವಲಯಗಳಾದ ಎಂಜಿನಿಯರಿಂಗ್ ರೊಬೊಟಿಕ್ಸ್ ಸಂಶೋಧನೆ ಮತ್ತು ಅಭಿವೃದ್ಧಿ, ರೊಬೊಟಿಕ್ಸ್ ನಲ್ಲಿ ಪ್ರಾಡಕ್ಟ್ ಡೆವಲಪರ್ ಹೀಗೆ ರೋಬೊಟಿಕ್ಸ್ನ ಹಲವಾರು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಲು ಅರ್ಹರಾಗಿದ್ದಾರೆ.
ಬಿ.ಟೆಕ್ನ ಕೊನೆಯ ಸೆಮಿಸ್ಟರ್ ಸೆಮಿಸ್ಟರ್ನಲ್ಲಿ ವಿದ್ಯಾರ್ಥಿಗಳಿಗೆ ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್ ನೀಡುವುದರ ಜೊತೆಗೆ ಉನ್ನತ ಕೈಗಾರಿಕೆಗಳಲ್ಲಿ ಇಂಟರ್ನ್ಶಿಪ್ ಮಾಡಲು ಅವಕಾಶವಿದೆ.
ವಿಶ್ವವಿದ್ಯಾಲಯವು ಕ್ಯಾಂಪಸ್ನಿಂದ ಬ್ಯಾಂಕ್ ಶಿಕ್ಷಣ ಸಾಲ ವ್ಯವಸ್ಥೆಯನ್ನು ನೀಡುವುದರೊಂದಿಗೆ, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳ ತಾಲ್ಲೂಕು ಕೇಂದ್ರಗಳಿಂದ ಕಾಲೇಜು ಬಸ್ ಸೌಲಭ್ಯವನ್ನುಒದಗಿಸುತ್ತದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.