(ವಿಶ್ವ ಕನ್ನಡಿಗ ನ್ಯೂಸ್, www.vknews.in): ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ “ರಾಧಾಕೃಷ್ಣ” ಇದೀಗ ಎಲ್ಲರ ಗಮನ ಸೆಳೆಯುತ್ತಿದೆ . ಹಿಂದಿ ಯಲ್ಲಿ ಯಶಸ್ವಿಯಾದ ರಾಧಾಕೃಷ್ಣ ಕನ್ನಡಕ್ಕೆ ಬಂದಿದ್ದು ಇದರಲ್ಲಿ ಕೃಷ್ಣನ ಪಾತ್ರ ಎಲ್ಲರ ಅಚ್ಚು ಮೆಚ್ಚು ,ಈ ಕೃಷ್ಣನ ಪಾತ್ರಕ್ಕೆ ಧ್ವನಿಯಾದವರು ನಿಪುಣ್ .
ಸಾಕಷ್ಟು ಜನ ಕೃಷ್ಣನ ಜೊತೆ ಕೃಷ್ಣ ನೀಡುವ ಸಂದೇಶಗಳನ್ನು ಇಷ್ಟಪಟ್ಟು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದಾರೆ .ಈ ಧ್ವನಿ ನಮ್ಮ ನಿಪುಣ್ ರದ್ದು .ಆದರ್ಶ ಫಿಲಂ ಇನ್ಸ್ಟಿಟ್ಯೂಟ್ ನಲ್ಲಿ ನಟನ ಪರಿಣತಿ ಜೊತೆಗೆ ನಿರ್ದೇಶನ ಬಗ್ಗೆಯೂ ತಿಳಿದುಕೊಂಡಿರುವ ನಿಪುಣ್ ಸಾಕಷ್ಟು ಚಿತ್ರ ಹಾಗು ಸೀರಿಯಲ್ ಗಳಿಗೆ ತಮ್ಮ ಧ್ವನಿ ನೀಡಿ ಮಿಂಚಿದ್ದಾರೆ .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.