ಬೆಳ್ತಂಗಡಿ-ಬಳ್ಳಮಂಜ(ವಿಶ್ವಕನ್ನಡಿಗ ನ್ಯೂಸ್): ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಳ್ಳಮಂಜ ಏರಿಯಾ ವತಿಯಿಂದ 74 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ಕಲ್ಲೇರಿ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು.
ಪಿ ಎಫ್ ಐ ಬಳ್ಳಮಂಜ ಏರಿಯಾ ಅಧ್ಯಕ್ಷರು ವಝೀರ್ ಬಂಗೇರಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಪಿ ಎಫ್ ಐ ಝೋನಲ್ ಅಧ್ಯಕ್ಷ ಇಕ್ಬಾಲ್ ಧ್ವಜಾರೋಹಣಗೈದರು. ಫಿ ಎಫ್ ಐ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯ ಟಿ.ಎಸ್ ಹನೀಫ್ “ಸ್ವಾತಂತ್ರ್ಯ ಹೋರಾಟದಲ್ಲಿ ಮುಸ್ಲಿಂರ ಕೊಡುಗೆಗಳು ಅಪಾರವಾದದ್ದು, ಮತ್ತು ಹೋರಾಟದ ಸಂದರ್ಭದಲ್ಲಿ ಜಾತಿ ಮತ ಧರ್ಮಗಳನ್ನು ನೋಡದೆ ಹಲವಾರು ಮಂದಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ್ದಾರೆ, ಅವರನ್ನು ಈ ಸಂದರ್ಭದಲ್ಲಿ ನೆನಸುವುದು ಅಗತ್ಯವಾಗಿದೆ.” ಎಂದು ಸಂದೇಶ ಭಾಷಣ ನೀಡಿದರು.
ಈ ಸಂದರ್ಭದಲ್ಲಿ ಪಿ ಎಫ್ ಐ ಬೆಳ್ತಂಗಡಿ ಜಿಲ್ಲಾ ಸಮಿತಿ ಸದಸ್ಯ ನಿಸಾರ್ ಕುದ್ರಡ್ಕ, ಎಸ್ ಡಿ ಪಿ ಐ ಪಾರೆಂಕಿ ಬ್ರಾಂಚ್ ಅಧ್ಯಕ್ಷ ಇಕ್ಬಾಲ್ ಸಾಲ್ಮರ, ಎಸ್ ಡಿ ಪಿ ಐ ಮಚ್ಚಿನ ಬ್ರಾಂಚ್ ಅಧ್ಯಕ್ಷ ಕಾಸಿಂ ಬಳ್ಳಮಂಜ, ಎಸ್ ಡಿ ಪಿ ಐ ಬಾರ್ಯ ಬ್ರಾಂಚ್ ಅಧ್ಯಕ್ಷ ಪೈಝಲ್ ಮುರುಗೋಳಿ ಉಪಸ್ಥಿತರಿದ್ದರು.
ಯಾಸೀನ್ ಬಂಗೇರಕಟ್ಟೆ ಕಾರ್ಯಕ್ರಮವನ್ನು ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರವನ್ನು ನೀಡಲಾಯಿತು.
ಕ್ರೀಡಾಸಮ್ಮಿಲನ: ಧ್ವಜಾರೋಹಣ ಕಾರ್ಯಕ್ರಮ ಮಾಡುವುದರೊಂದಿಗೆ ಸಹೋದರರ ಕ್ರೀಡಾ ಸಮ್ಮಿಲನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವು ಯೋಗಾಸನ, ವ್ಯಾಯಾಮ ಹಾಗೂ ಹಲವಾರು ಕ್ರೀಡೆಗಳನ್ನು ಆಡುವ ಮೂಲಕ ಯಶಸ್ವಿಯಾಗಿ ಮೂಡಿತು. ಕ್ರೀಡಕೂಟವನ್ನು ವಝೀರ್ ಬಂಗೇರಕಟ್ಟೆ ಮತ್ತು ನವಾಝ್ ಕುದ್ರಡ್ಕ ನೆರವೇರಿಸಿ ಕೊಟ್ಟರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.