ಮಾಡನ್ನೂರ್ (www.vknews.com) : ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡನ್ನೂರು ಶಹೀದಿಯ ನಗರದಲ್ಲಿ ಜಮಾಅತ್ ಸಮಿತಿ ಹಾಗೂ ಎಸ್. ಕೆ .ಎಸ್ .ಎಸ್ .ಎಫ್. ಸಹಯೋಗದಲ್ಲಿ ಆಚರಿಸಲಾಯಿತು. ಜಮಾತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಧ್ವಜಾರೋಹಣ ನೆರವೇರಿಸಿದರು.
ಮಖಾಂ ಝಿಯಾರತ್ ನೇತೃತ್ವವಹಿಸಿ, ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದ ಸ್ಥಳೀಯ ಖತೀಬರಾದ ಸಿರಾಜುದ್ದೀನ್ ಫೈಝಿ ಯವರು ಮಾತನಾಡಿ ಬ್ರಿಟಿಷರು ಬರುವ ಮೊದಲು ಆಂತರಿಕವಾಗಿ ಭಾರತದಲ್ಲಿ ವಿಜೃಂಭಿಸುತ್ತಿದ್ದ ಶಕ್ತಿಗಳು ಜಾಗೃತವಾಗುತ್ತಿದ್ದು ಧರ್ಮಾಧಾರಿತ ಕಾನೂನು, ಬಹುಸಂಖ್ಯಾತ ಆಧಾರಿತ ತೀರ್ಪು, ಅಲ್ಪಸಂಖ್ಯಾತರ ಹಕ್ಕುಗಳ ನಿರ್ಮೂಲನೆ, ದಲಿತರ ದಮನ, ಶಿಕ್ಷಿಸಲ್ಪಡಬೇಕಾದವರು ರಕ್ಷಿಸಲ್ಪಟ್ಟು, ರಕ್ಷಿಸಲ್ಪಡಬೇಕಾದವರು ಶಿಕ್ಷಿಸಲ್ಪಡುತ್ತಿದ್ದು ಭಾರತೀಯರಲ್ಲಿ ಅಸಮಾನತೆಯು ಬೆಳೆಯುತ್ತಿದೆ. ಎಲ್ಲರೂ ಸಮಾನರೆಂಬ ಸಮಾನತೆಯ ಸಂಕಲ್ಪದಿಂದ ನಮ್ಮ ಪೂರ್ವಿಕ ಹೋರಾಟಗಾರರು ಅವಿರತ ಶ್ರಮದಿಂದ ದೊರಕಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಲು ಪ್ರತಿಯೊಬ್ಬ ಭಾರತೀಯರು ಕಂಕಣಬದ್ಧರಾಗ ಬೇಕೆಂದರು.
ದೇಶದಲ್ಲಿ ಕೋಮು ದ್ವೇಷಗಳು ಎಷ್ಟೇ ಪ್ರಬಲವಾಗಿದ್ದರೂ ಅದರ ವಿರುದ್ಧ ಸಾಮರಸ್ಯ ಸಹಬಾಳ್ವೆ ಗಳನ್ನು ಪ್ರತಿಪಾದಿಸುವ ಶಕ್ತಿಯಾಗಿ ಎಸ್ಕೆಎಸ್ಸೆಸ್ಸೆಫ್ ಬೆಳೆಯುತ್ತಿದ್ದು ಎಲ್ಲರೂ ಒಂದೇ ರಾಷ್ಟ್ರೀಯತೆಯ ಬೆಸುಗೆಯಿಂದ ಒಟ್ಟಾಗಿ ಕೋಮುವಾದ, ಉಗ್ರವಾದ,ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಮೊದಲಾದ ಪ್ರಗತಿ ಕಂಟಕ ಶಕ್ತಿಗಳನ್ನು ಕಟ್ಟಿಹಾಕಿ ಸ್ವತಂತ್ರ ಭಾರತ ಪ್ರತಿಪಾದಿಸುವ ಮೌಲ್ಯಗಳನ್ನು ಉಳಿಸಲು ನಮಗೆ ಸಾಧ್ಯವಾಗಬೇಕೆಂದರು. ಸಮಾನತೆಯ ಭಾರತದಲ್ಲಿ ಅಸಮಾನತೆಯು ಗೋಚರವಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಭಾರತೀಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ,,’ಸ್ವಾತಂತ್ರ್ಯ ಸರ್ವರಿಗೂ ಸಮಾನವಾಗಿರಲಿ’ ಎಂಬ ಧ್ಯೇಯ ವಾಕ್ಯದಡಿ ಪ್ರತಿಷ್ಠಿತ ಉಲಮಾ ಸಂಘಟನೆಯಾದ ಸಮಸ್ತ ಉಲಮಾ ಒಕ್ಕೂಟದ ಪೋಷಕ ವಿದ್ಯಾರ್ಥಿ ಸಂಘಟನೆಯಾದ ಎಸ್ ಕೆ ಎಸ್ ಎಸ್ ಎಫ್ ಶಾಖಾ ಮಟ್ಟದಲ್ಲಿ ಫ್ರೀಡಂ ಸ್ಕ್ವೇರ್ ನಿರ್ಮಿಸುತ್ತಿದೆ ಎಂದರು.
ಮಾಡನ್ನೂರಿನ ಪ್ರಸಿದ್ಧ ಗಾಯಕ ಶಾಹುಲ್ ಹಮೀದ್ ಫೈಝಿ ಮತ್ತು ಬಳಗದ ನೇತೃತ್ವದಲ್ಲಿ ರಾಷ್ಟ್ರಗೀತೆ ಹಾಡಲಾಯಿತು. ಝಕರಿಯ ಮಾಡನ್ನೂರ್ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಮಸೀದಿ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸಿಎಚ್, ಕೋಶಾಧಿಕಾರಿ ಮೊಹಿದಿನ್ ಎಂ ಡಿ, ಸಮಿತಿ ಪ್ರಮುಖರಾದ ನಿವೃತ್ತ ಎಎಸ್ಐ ಹಸೈನಾರ್ ಎಂ.ಡಿ., ಸಿಕೆ ಹಸೈನಾರ್, ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಅಧ್ಯಕ್ಷ ಖಾಲಿದ್ ಬಿ.ಎಮ್., ದಫ್ ಸಮಿತಿ ಅಧ್ಯಕ್ಷ ಮೂಸಾ ಎಂ.ಪಿ. ,ಇಬ್ರಾಹಿಂ ದಾರಿಮಿ ಮಾಡನ್ನೂರ್,ಮದ್ರಸ ಅಧ್ಯಾಪಕರುಗಳಾದ ಮಹ್ಮೂದ್ ಮುಸ್ಲಿಯಾರ್, ಇಬ್ರಾಹಿಂ ಸಅದಿ, ಅಲ್ಲದೆ ಜಮಾಅತ್ ಬಾಂಧವರು ಉಪಸ್ಥಿತರಿದ್ದರು. ಎಸ್ಕೆಎಸ್ಸೆಸ್ಸೆಫ್ ಕಾರ್ಯದರ್ಶಿ ಅಬ್ದುಲ್ ಜಬ್ಬಾರ್ ಯಮಾನಿ ಸ್ವಾಗತಿಸಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.