ಉಪ್ಪಿನಂಗಡಿ(ವಿಶ್ವಕನ್ನಡಿಗ ನ್ಯೂಸ್): SKSSF ತ್ವಲಬಾವಿಂಗ್ ಉಪ್ಪಿನಂಗಡಿ ವಲಯ ಇದರ ವಲಯ ಸಮಿತಿ ರೂಪೀಕರಣ ಸಭೆಯು ದಿನಾಂಕ 24 ಅಗಸ್ಟ್ 2020 ಸೋಮವಾರ ಕರಾಯದ ಇಬ್ರಾಹಿಂ ದಾರಿಮಿ ನಿವಾಸದಲ್ಲಿ ನಡೆಯಿತು.
ಸಭೆಯಲ್ಲಿ ಬದ್ರುದ್ದೀನ್ ಮುಸ್ಲಿಯಾರ್ ಆತೂರು ಪ್ರಾರ್ಥನೆ ನಡೆಸಿದರು. ತ್ವಲಬಾ ಉಪ್ಪಿನಂಗಡಿ ವಲಯ ಕಾರ್ಯದರ್ಶಿ ಸಪ್ವಾನ್ ಮಾಪಾಲ್ ಸ್ವಾಗತಿಸಿದ ಬಳಿಕ SKSSF ಉಪ್ಪಿನಂಗಡಿ ವಲಯ ಸಂಘಟನಾ ಕಾರ್ಯದರ್ಶಿ ಬಹು. ಕೆ.ಎಂ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕರಾಯ ಸಭೆಯನ್ನು ಉದ್ಘಾಟಿಸಿದರು. SKSSF ಉಪ್ಪಿನಂಗಡಿ ವಲಯ ಪ್ರಧಾನ ಕಾರ್ಯದರ್ಶಿ ಬಹು. ಹಾರಿಸ್ ಕೌಸರಿ ಕೋಲ್ಪೆ ತ್ವಲಬಾವಿಂಗಿನ ಪ್ರಸಕ್ತತೆ ಹಾಗೂ ಕಾರ್ಯಯೋಜನೆಗಳ ಬಗ್ಗೆ ವಿವರಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ನಂತರದಲ್ಲಿ 2020-22ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ಚೇರ್ಮ್ಯಾನಾಗಿ ಕಮಾಲ್ ಕುಂಡಾಜೆ, ವೈಸ್ ಚೇರ್ಮ್ಯಾನ್ಸ್’ಗಳಾಗಿ ಷಮ್ಮಾಸ್ ಕರಾಯ, ಮುಸ್ತಫಾ ಕುಂಡಾಜೆ, ಉಸ್ಮಾನ್ ಬಂಡಾಡಿ, ಜ. ಕನ್ವೀನರ್ ಆಗಿ ಅಸ್ಗರ್ ಅಲಿ ತುರ್ಕಳಿಕೆ, ಜೊ.ಕನ್ವೀನರ್ಸ್’ಗಳಾಗಿ ಶಮೀ ಉಪ್ಪಿನಂಗಡಿ, ಸವಾದ್ ಕರಾಯ, ವರ್ಕಿಂಗ್ ಕನ್ವೀನರ್ ಆಗಿ ಮುನವ್ವರ್ ಕರಾಯ, ಟ್ರಶರರ್ ಆಗಿ ಇಕ್ಬಾಲ್ ಆತೂರು, ಮೀಡಿಯಾ ಉಸ್ತುವಾರಿಗಳಾಗಿ ಶರೀಫ್ ಆತೂರು, ಕೆ.ಎಚ್ ಬಿಶ್ರ್ ಕರಾಯ ಹಾಗೂ ವರ್ಕಿಂಗ್ ಸದಸ್ಯರಾಗಿ ತ್ವಾಹ ಕರಾಯ, ಅಬ್ದುಲ್ ಖಾದರ್, ರುಮೈಝ್ ಮಾಪಾಲ್, ಬಶೀರ್ ಕರಾಯ, ಸಿದ್ದೀಕ್ ಆತೂರು,ತ್ವಾಹ ಕುಂಡಾಜೆ ಇವರನ್ನು ಆಯ್ಕೆಮಾಡಲಾಯಿತು.
ಇದೇ ಸಂದರ್ಭದಲ್ಲಿ ತ್ವಲಬಾವಿಂಗ್ ದ.ಕ ಜಿಲ್ಲಾ ಸಮಿತಿ ನಡೆಸುವ *ತ್ವಲಬಾ ಸರ್ವೆ ಫಾರಂ* ಬಹು. ಹಾರಿಸ್ ಕೌಸರಿ ಕೋಲ್ಪೆ ನೂತನ ಪದಾಧಿಕಾರಿಗಳಿಗೆ ನೀಡಿದರು. ಸಭೆಯಲ್ಲಿ ಉಪ್ಪಿನಂಗಡಿ ಕ್ಲಸ್ಟರ್ ತ್ವಲಬಾ ಕಾರ್ಯದರ್ಶಿ ಬಹು. ಸಿನಾನ್ ರಹ್ಮಾನಿ ಅಡೆಕ್ಕಲ್, SKSSF ಉಪ್ಪಿನಂಗಡಿ ವಲಯ ಸಹಚಾರಿ ಕಾರ್ಯದರ್ಶಿ ಅಬ್ದುಲ್ ಲತೀಫ್ ಇ.ಕೆ. ಕರಾಯ ಉಪಸ್ಥಿತಿ ಇದ್ದರು. ಕೊನೆಯಲ್ಲಿ ಅಸ್ಗರ್ ಅಲಿ ತುರ್ಕಳಿಕೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.