ಸುಲ್ತಾನ್ ಅಬ್ದುಲ್ ಹಮೀದ್ -2 ಮತ್ತು ಫ್ಯಾಲಸ್ತೈನ್ ನನ್ನ ಜೀವ. {Sign خليل سراج}
(www.vknews.com) : ಒಂದೊಂದು ರಾಜ ಮನೆತನಕ್ಕೆ ಅದರದ್ದೇ ಆದ ವೈಶಿಷ್ಟ್ಯವಿದೆ, ಹಾಗೆ ಒಟ್ಟೋಮನ್ ಸಾಮ್ರಾಜ್ಯದ ವೈಭವಕ್ಕೆ ಗಾಝೀ ಉಸ್ಮಾನರ ಖಡ್ಗ ಒಂದು ಗಾಂಭೀರ್ಯದ, ಶೌರ್ಯದ ಮೆರುಗನ್ನು ಕೊಡುತ್ತದೆ, ಈ ಖಡ್ಗ ಸುಲ್ತಾನರ ಪಟ್ಟಾಭಿಷೇಕದ ವೇಳೆ ಅಧಿಕಾರದ ಸೂಚಕವಾಗಿ ಬಳಸಲಾಗುತ್ತದೆ, ಈ ಚಾಪ್ಟರ್ ವಿಷಯ ಫ್ಯಾಲಸ್ತಿನ್ ಬಗ್ಗೆ ಆದ್ದರಿಂದ, ‘ಖಡ್ಗದ ವಿಷಯ’ ಖಂಡಿತ 7ರ ನಂತರದ ಚಾಪ್ಟರ್ ನಲ್ಲಿ ಹೇಳುವೆ. انشا الله
ಅಬ್ದುಲ್ ಹಮೀದ್ ರವರು 34 ನೇಯ ಒಟ್ಟೋಮನ್ ಸಾಮ್ರಾಜ್ಯದ ಸುಲ್ತಾನ್ ಆಗಿ ಆಗಸ್ಟ್ 1876 ರಲ್ಲಿ ಅಧಿಕಾರ ಸ್ವೀಕರಿಸುತ್ತಾರೆ, ರಾಜ್ಯದ ಖಜಾನೆ ಖಾಲಿ ಯಾದ ಒಂದು ಆರ್ಥಿಕತೆಯ ಮುಗ್ಗಟ್ಟಿನ ಕಾಲವಾಗಿರುತ್ತದೆ, ಅವರು ಸುಲ್ತಾನ್ ಆಗಿ ಕುಳಿತದ್ದು ಒಂದು ಮುಳ್ಳಿನ ಸಿಂಹಾಸನ ಎಂಬಂತೆ ಭಾಸವಾಗುತ್ತಿತ್ತು, ಚಾಪ್ಟರ್ 1 ರಲ್ಲಿ ಇವರ ಚಿಕ್ಕಪ್ಪ ಸುಲ್ತಾನ್ ಅಬ್ದುಲ್ ಅಝೀಝ್ ಬಗ್ಗೆ ಹೇಳಿದ್ದೆ, ಇವರ ಆಡಳಿತ ಕಾಲದಲ್ಲಿಯೇ ಖಜಾನೆ ಖಾಲಿಯಾಗಿದ್ದ ದಾಖಲೆ ಅರಮನೆಯ ಸಿಬ್ಬಂದಿ ಮೂಲಕ ಸುಲ್ತಾನ್ ಅಬ್ದುಲ್ ಹಮೀದ್ ತಿಳಿಯುತ್ತಾರೆ, ಅಧಿಕಾರ ಹಿಡಿದು ಮೊದಲು ಮಾಡುವ ಕೆಲಸ ಅಂದರೆ, ಒಳಗೆ ಇರುವ ರಾಜದ್ರೋಹಿ ಸರ್ಪಗಳನ್ನು 🐍 ಹಿಡಿದು ಜೈಲಿಗೆ ಅಟ್ಟೂದು.
ಒಟ್ಟೋಮನ್ ಸಾಮ್ರಾಜ್ಯದ ಅಧಿಕಾರಿಗಳಿಗೆ ಪಾಷಾ ಎನ್ನುವ ಬಿರುದು ಇತ್ತು, ಹಮೀದ್ ತನ್ನ ಎಲ್ಲಾ ವಿಶ್ವಸನೀಯ ಪಾಷಾ ರನ್ನು ಕರೆದು ದ್ರೋಹಿಗಳನ್ನು ಪತ್ತೆ ಹಚ್ಚಿ , ತನ್ನ ದರ್ಬಾರಿಗೆ ಕರೆತರಲು ಆಜ್ಞೆ ಇಟ್ಟರು, ಗುಪ್ತಚರ (spy network) ವನ್ನು ಇನ್ನಷ್ಟು ಬಲ ಗೊಳಿಸಿದರು, ನೂರಾರು ಸವಾಲುಗಳು ತನ್ನ ಮುಂದಿದೆ ಎಂಬುದು ಗೊತ್ತಿತ್ತು, ಒಟ್ಟೋಮನ್ ಗಡಿ ಭಾಗದಲ್ಲಿ ಆಕ್ರಮಣ ಜೋರಾದವು, ಯೂರೋಪ್ ಭಾಗದಲ್ಲಿದ್ದ ಸಣ್ಣ ಪುಟ್ಟ ಪ್ರದೇಶಗಳು ಆಗಲೇ ಕಳೆದು ಕೊಂಡಿತ್ತು.
ಕೆಲವು ತಿಂಗಳುಗಳು ಕಳೆದು ಹೋದವು, ಸುಲ್ತಾನ್ ಹಲವು ಕ್ಷಿಪ್ರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರು, ಸೂಕ್ತ ವ್ಯಕ್ತಿಗಳನ್ನು ಆಯಾ ಸರಕಾರಿ ಸಂಸ್ಥೆಗೆ ನಿಯೋಜಿಸಿದ್ದರು, ಲಂಚ ಕೊರರು, ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ತೆಗೆದು ಹಾಕಿದರು, ಆರ್ಥಿಕ ಸಮಸ್ಯೆ ನಿಧಾನವಾಗಿ ಚೇತರಿಸಿತು.
ಇಲ್ಲಿ ಈ ಸಂಕಲನದ ಮೊದಲ ವಿಲನ್ ಎಂಟ್ರಿ…. ಹೆಸರು ತೀಡೋರ್ ಹಝಲ್ (Theodor Herzl), ಯಹೂದಿ, ಇಸ್ರೇಲ್ ನ ರಾಷ್ಟ್ರಪಿತ, ನೀವು ಝಿಯೋನಿಸ್ಟ್ (Zionist) ಹೆಸರು ಕೇಳಿರಬೇಕು, ಈತ ಇದರ ಸ್ಥಾಪಕ ಕೂಡ, ಫ್ಯಾಲಿಸ್ತಿನ್ ಬಗ್ಗೆ ಬರೆಯುವಾಗ ಇವನ ಬಗ್ಗೆ ಹೇಳದೇ ಇದ್ದರೆ ನಿಮಗೆ ಇಸ್ರೇಲ್ ಚರಿತ್ರೆ ಅರ್ಥ ಆಗಲ್ಲ, ಒಂದು ದಿನ ಹಝಲ್ ಮಧ್ಯರಾತ್ರಿ ತಕ್ಷಣ ನಿದ್ದೆಯಿಂದ ಎದ್ದೇಳುತ್ತಾನೆ, ಖುದ್ಸ ಖುದ್s, ಅಂತ ಬೊಬ್ಬೆ ಹಾಕ್ತಾನೆ, ಹೆಂಡತಿ ಕೇಳ್ತಾಳೆ ಏನಾಯ್ತು, ಏನಿಲ್ಲ ಅಂತಾನೆ, ಹೆಂಡತಿ ದುಸ್ವಪ್ನ ಅಂತ ‘ನೀರು ತರ್ಲಾ’ ಕೇಳ್ತಾಳೆ, ಆಗ ಹಝಲ್ “ನೀರು ಬೇಡ, ನನಗೆ ಖುದ್ಸ್ (Jerusalem) ನಲ್ಲಿ ಭೂಮಿ ಬೇಕು” ಅಂತಾನೆ,. ಒಂತರಾ ಪಾಗಲ್ ಪ್ರೇಮಿ for holy land, ಆತನದ್ದು ಒಂದೇ ಧೇಯ್ಯ ,ಪುಣ್ಯ ಭೂಮಿ (holy land) ಫ್ಯಾಲಸ್ತಿನ್ ನಲ್ಲಿ ಯಹೂದಿ ಗಳಿಗೆ ಒಂದು ದೇಶ ಕಟ್ಟುದು, ಈತನ ವೃತ್ತಿ ಪತ್ರಕರ್ತ ಮತ್ತು ಲೇಖಕ.
ಈ ಇಸ್ರೇಲ್ ದ್ವಜದಲ್ಲಿ ಮೇಲೆ ಮತ್ತು ಕೆಳಗೆ ನೀಲಿ ಗೆರೆಯ ಅರ್ಥ ಗೊತ್ತಾ ನಿಮಗೆ ? ಅಂದ್ರೆ ಇರಾಕಿನಲ್ಲಿ ಹರಿವುವ ಒಂದು ನದಿ ಇದೆ ಯುಪ್ರಟಿಸ್ ಅಂತ ಈಜಿಫ್ಟ್ ನ ನೈಲ್ ನದಿ ಎಲ್ಲರಿಗೂ ಗೊತ್ತು, ದ್ವಜದ ಗೆರೆಯ ಗುಟ್ಟು ಅಂದ್ರೆ ಇಸ್ರೇಲ್ ನ್ನು ಅಷ್ಟಾಗಿ ವಿಸ್ತರಿಸಿ ಗ್ರೇಟರ್ ಇಸ್ರೇಲ್ (ಮಹಾ ಇಸ್ರೇಲ್) ಮಾಡುವುದು, ಇದರಲ್ಲಿ ಈಜಿಪ್ಟ್, ಸೌದಿ, ಇರಾಕ್, ಜೋರ್ಡಾನ್, ಸಿರಿಯಾ, ಲೆಬನಾನ್ ಒಳಗೊಂಡಿದೆ, , سبحان الله.
ಸುಲ್ತಾನ್ ಗುಪ್ತಚರ ಸಂಸ್ಥೆ (spy network) ಎಷ್ಟು ಆಕ್ಟೀವ್ ಇತ್ತು ಎಂದರೆ, ಆಗಾಗಲೇ ಝಯೋನಿಸ್ಟ್ ಹಝಲ್ ಬಗ್ಗೆ ಆತನ ಉದ್ದೇಶ, ಕುಂಡಲಿ ಸಮೇತ ಎಲ್ಲ ಮಾಹಿತಿ ಸುಲ್ತಾನ್ ಬಳಿ ತಲುಪಿಸಿದ್ದವು, ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ “know your enemy” ನಮ್ಮ ಶತ್ರುಗಳನ್ನು ಮೊದಲು ಗುರುತಿಸಿ ಕೊಳ್ಳಬೇಕು, ಹಝಲ್ ಜರ್ಮನಿಯಿಂದ ಇಸ್ತಾಂಬುಲ್ ಗೆ ಬರ್ತಾನೆ, ತನ್ನ ಪ್ರೋಪಗಂಡ ರೂಪಿಸಲು ಮತ್ತು ಇಸ್ರೇಲ್ ಬಗ್ಗೆ ಒಟ್ಟೋಮನ್ ರಾಜ್ಯದಲ್ಲಿರುವ ಅಮಾಯಕ ಯಹೂದಿಯರ ಬ್ರೈನ್ ವಾಶ್ ಮಾಡಲು.
ತನ್ನ ಪತ್ರಿಕೆ ಮೂಲಕ ಇಸ್ತಾಂಬುಲ್ ನಲ್ಲಿ ಪ್ರತಿದಿನ “ಪವಿತ್ರ ಭೂಮಿ ಇಸ್ರೇಲ್” ಎಂಬ ಶೀರ್ಷಿಕೆಯಲ್ಲಿ ಲೇಖನ ಪ್ರಕಟಿಸುತ್ತಾನೆ ತಿಯೇಡಾರ್ ಹಝಲ್, ಜೊತೆಗೆ ಅಬ್ದುಲ್ ಹಮೀದ್ ಬಗ್ಗೆ ಋಣಾತ್ಮಕಾಗಿ ಮತ್ತು ಒಟ್ಟೋಮನ್ ಸಾಮ್ರಾಜ್ಯ ವನ್ನ “ಯೂರೋಪಿನ ರೋಗಿ” ಅಂತ ವಿಶ್ಲೇಷಿಸಿ ಬರೆಯುತ್ತಾನೆ, ಆ ಕಾಲದಲ್ಲಿ ಇಷ್ಟು ಮಾದ್ಯಮ ಕ್ರಾಂತಿ ಆಗಿರಲಿಲ್ಲ, ಇದ್ದದು ಟೆಲಿಗ್ರಾಂ ಮತ್ತು ದಿನ ಪತ್ರಿಕೆ, ಟೆಲಿಫೋನ್ ಇತ್ತಾದರೂ ಒಟ್ಟೋಮನ್ ರಾಜ್ಯದೊಳಗೆ ನಿಷೇಧಿಸಲಾಗಿತ್ತು (ಭದ್ರತೆಯ ದೃಷ್ಟಿಯಿಂದ)
ಹಝಲ್ಗೆ ಸುಲ್ತಾನ್ ಅಬ್ದುಲ್ ಹಮೀದ್ ರನ್ನು ಬೇಟಿ ಮಾಡಿ ತನ್ನ ಕನಸನ್ನು ವಿವರಿಸಿ ಓಲೈಸಬೇಕು, ಸುಲ್ತಾನ್ ಒಬ್ಬರಿಂದ ಮಾತ್ರ ಅವನ ಕನಸು ನನಸಾಗಲು ಸಾಧ್ಯ ಎಂದು ಗೊತ್ತು, ಒಂದು “ಪಾಷಾ” ನನ್ನು ಬೇಟಿಮಾಡಿ ತನ್ನ ಕೋರಿಕೆ ಇಡುತ್ತಾನೆ, ತುಂಬಾ ಪ್ರಯತ್ನದ ಬಳಿಕ, ಕೊನೆಗೆ ಅಬ್ದುಲ್ ಹಮೀದ್ ಬೇಟಿಗೆ ಹಸಿರು ನಿಶಾನೆ ಕೊಡುತ್ತಾರೆ.
ಶತ್ರು ಎಷ್ಟೇ ಕ್ರೂರಿ, ಕುತಂತ್ರಿ ಆಗಿದ್ದರು ಅತಿಥಿಯಾಗಿ ಬಂದವರಿಗೆ ಗೌರವ ಕೊಡುವುದು “ಆಶಿಕಿ ರಸೂಲ್” ರಾದ ಸುಲ್ತಾನ್ ಅಬ್ದುಲ್ ಹಮೀದ್ಗೆ ಗೊತ್ತು (ಶಿಷ್ಟಾಚಾರ), ಒಮ್ಮೆ ಕಲ್ಪಿಸಿ ನೋಡಿ ಒಬ್ಬ ಕಟ್ಟಾ ಯಹೂದಿ, ಇನ್ನೊಬ್ಬ ಇಸ್ಲಾಮಿಕ್ ಸಾಮ್ರಾಜ್ಯದ ಖಲೀಫಾ, ಮುಖಾಮುಖಿಗೆ ವೇದಿಕೆ ಸಿದ್ಧವಾಗಿತ್ತು.
ಸುಲ್ತಾನ್ – ” ತೆಹ್ಸಿನ್ ಪಾಷಾ (ಸುಲ್ತಾನರ ಸಲಹೆಗಾರ) ತಿಯಾಡೋರ್ ಹಝಲ್ ಗೆ ಅರಮನೆಯ ಆತಿಥ್ಯ ಕೊಟ್ಟಾಯಿತ ? ” ತೆಹ್ಸಿನ್ ಪಾಷಾ – “ಹೌದು ಸುಲ್ತಾನ್” (ನಸು ನಗುತ್ತಾ) ಅಬ್ದುಲ್ ಹಮೀದ್ – “ಹಾಗಾದರೆ ಅವನನ್ನು ಒಟ್ಟೋಮನ್ ಸಾಮ್ರಾಜ್ಯದ ಮತ್ತು ಖುದ್ಸ್ (ಫ್ಯಾಲಾಸ್ತಿನ್) ರಾಜ ನ ದರ್ಬಾರಿಗೆ ಬರಕ್ಕೆ ಹೇಳಿ” ತೆಹ್ಸಿನ್ ಪಾಷಾ ಹೋಗಿ ಹಝಲ್ ನನ್ನು ಸುಲ್ತಾನ್ ದರ್ಬಾರಿಗೆ ಕರೆದು ಬಂದರು. ಎಷ್ಟೇ ದೊಡ್ಡ ಖಿಲಾಡಿಯಾದರೂ ಕೂಡ ಹಝಲ್ ದರ್ಬಾರು ಎಂಟ್ರಿ ಕೊಟ್ಟಂತೆ ಒಂದು ರೀತಿ ನರ್ವಸ್ ಆದಂತೆ ತೋರುತ್ತಿದ್ದ.
ವಿನಮ್ರವಾಗಿ ಹಜೆಲ್ (ಮೂಲ ಉದ್ದೇಶ ಸುಲ್ತಾನನು ಒಲೈಸುದು) – “ಸುಲ್ತಾನ್ ಶಲಮಲಿಕುಂ”(ಯಹೂದಿಗಳು ಒಬ್ಬರನ್ನೊಬ್ಬರು ಬೇಟಿ ಯಾದಾಗ ಮಾಡೋ ಸ್ವಾಗತ)
ಸುಲ್ತಾನ್ ಅಬ್ದುಲ್ ಹಮೀದ್ – (ಜೋರಾಗಿ) – “ಜೇಕಬ್ ಹಝೆಲ್ ಮಗ ತಿಯೋಡಾರ್ ಹಝೆಲ್, ಹೇಳು ಏನು ವಿಷಯ ? ” ಹಝೆಲ್ – “ಸುಲ್ತಾನ್… ಪ್ರಪಂಚದ ಯಹೂದಿಗಳು ಒಂದು ನೆಲೆ ಇಲ್ಲದೆ ಪರದಾಡುತ್ತಿದ್ದಾರೆ, ನಿಮ್ಮ ನ್ಯಾಯ, ನೀತಿ, ಕರುಣೆ ಮತ್ತು ದಯೆಯ ಕುರಿತು ಕೇಳಿದ್ದೇನೆ, ದೊಡ್ಡ ಮನಸು ಮಾಡಿ ಪವಿತ್ರ ಭೂಮಿಯಾದ ಫ್ಯಾಲಸ್ತಿನ್ ನಲ್ಲಿ ಯಹೂದಿ ಗಳಿಗೆ ವಾಸಿಸಲು ಅನುವು ಮಾಡಿಕೊಡ ಬೇಕು, ಇದೊಂದು ನನ್ನ ಕೋರಿಕೆ”
ಸುಲ್ತಾನ್ – ಒಟ್ಟೋಮನ್ ಸಾಮ್ರಾಜ್ಯ ದಲ್ಲಿ ಸಾವಿರಾರು ಯಹೂದಿಗಳು ಶಾಂತಿ ಸಹಬಾಳ್ವಯಿಂದ ಮುಸ್ಲಿಮರ ಜೊತೆ ಹಲವು ಶತಮಾನದಿಂದ ಜೀವಿಸುತ್ತಾ ಬಂದಿದ್ದಾರೆ, ಇದುವರೆಗೂ ಯಾವೊಬ್ಬ ಯಹೂದಿ ಕೂಡ ಅಪಸ್ವರ ಎತ್ತಲಿಲ್ಲ, ನಿಮ್ಮಂತಹ ಕೆಲವು ಝೂನಿಸ್ಟ್ ಕಟ್ಟರ್ ಪಂತಿಗಳು ಅಮಾಯಕ ಯಹೂದಿಯರ ದಾರಿ ತಪ್ಪಿಸಿದರೆ ಚೆನ್ನಾಗಿರಲ್ಲ
ಹಝಲ್ – ” ಸುಲ್ತಾನ್….. ಖುದ್ಸ್ (Jerusalem) ನಮಗೆ ಪುಣ್ಯ ಭೂಮಿ, ನೀವು ನಮಗೆ ಅಲ್ಲಿ ಭೂಮಿ ಕೊಡುವುದಾದರೆ 150 ಮಿಲಿಯನ್ ಪೌಂಡ್ (ಈಗಿನ ಕಾಲಕ್ಕೆ ಎಷ್ಟೋ ಬಿಲ್ಲಿಯನ್ ಬೆಲೆ ಬಾಳುತ್ತದೆ) ನೀಡಲು ರೆಡಿ ಇದ್ದೇನೆ”
ಅಬ್ದುಲ್ ಹಮೀದ್ ಮುಖ ಕೆಂಪಾಯಿತು ಕೋಪದಿಂದ ಸುಲ್ತಾನ್ -🔹ಏನೆಂದೆ ಅಬ್ದುಲ್ ಹಮೀದ್ ಈಮಾನ್ ದುಡ್ಡಿಗೆ ಕೊಂಡು ಕೊಳ್ಳೋಕೆ ಬಂದಿದ್ಯ, ನಿನಗೆ ಎಷ್ಟು ಖುದ್ಸ್ ಪುಣ್ಯ ಭೂಮಿ, ಅದಕ್ಕಿಂತ ಹೆಚ್ಚು ನಮಗೆ (ಮುಸ್ಲಿಮರಿಗೆ) ಪವಿತ್ರ ಭೂಮಿ ಅದು, ನನ್ನ ಪುಣ್ಯ ರಸೂಲ್ (ಸಲ್ಲಲ್ಲಾಹು ಅಲೈಹಿ ವಸಲ್ಲಂ) ಮಿಹ್ರಾಜ್ ನ ಸಂಕೇತದ ಭೂಮಿ, ಅಮೀರ್ ಉಲ್ ಮುಮಿನೀನ್ ಉಮರೂಲ್ ಫಾರೂಕ್ ರವರ ಖಿಲಾಫತ್ ಗೆ ಸಾಕ್ಷಿಯಾದ ಭೂಮಿ,ಸುಲ್ತಾನ್ ಸಲಾಹುದ್ದಿನ್ ವಿಜಯ ಪತಾಕೆ ಹಾರಿಸಿದ ಮಣ್ಣು, ಫ್ಯಾಲಾಸ್ತಿನ್ ಬಿಟ್ಟು ಬೇರೆ ಏನು ಬೇಕಾದರೂ ಕೇಳು
ಹಝಲ್ – “ಸುಲ್ತಾನ್….. ನಮ್ಮ ದಾವೂದ್, ಸಾಲ್ಮನ್,ಮೋಷೆ… ”
ಸುಲ್ತಾನ್ – ನಿಮಗೆ ಮೂಸಾ, ದಾವೂದ್, ಸುಲೈಮಾನ್ ಅಲೈಸ್ಸಲಾಮ್ ಎಷ್ಟು ಮುಖ್ಯ ಅದಕ್ಕಿಂತ ಮಿಗಿಲಾಗಿ ನಾವು ಅವರನ್ನು ಪ್ರೀತಿಸುತ್ತೇವೆ, ಗೌರವಿಸುತ್ತೇವೆ, ನಮಗೂ ಕೂಡ ಪ್ರವಾದಿಗಳು ಅವರು, ನಮ್ಮ ಇಮಾನ್ ಇದು, ಖುದ್ಸ್ ನಲ್ಲಿ ಒಂದು ಇಂಚ್ ಭೂಮಿ ಕೊಡಲ್ಲ, ಯಾಕಂದ್ರೆ ಈ ಭೂಮಿ ನನ್ನ ಸ್ವಂತದ್ದಲ್ಲ , ಮುಸ್ಲಿಂ ಉಮ್ಮತಿನ ಭೂಮಿ, ಅದಕ್ಕಾಗಿ ಶಹೀದ್ ಆಗಲು ಹಿಂದೆ ಮುಂದೆ ನೋಡುದಿಲ್ಲ ನಾವು ಮುಸ್ಲಿಮರು, ಫ್ಯಾಲಸ್ತಿನ್ ನಮ್ಮ ಜೀವ, ನಿನ್ನ ಕನಸನ್ನು ಬಿಟ್ಟು ಬಿಡು
ಸುಲ್ತಾನ್ ಹಮೀದ್, ಹಝಲ್ ಗೆ “ಗೆಟ್ ಔಟ್” ಎನ್ನೋ ರೀತಿಯಲ್ಲಿ..ಹೊರಗೆ ಹೋಗಲು ಕೈ ಸನ್ನೆ ಮಾಡಿದರು.
ಹತಾಶೆ ಮತ್ತು ಮುನಿಸಿಕೊಂಡ ಮುಖ ದೊಂದಿಗೆ ಅರಮನೆಯಿಂದ ನಿರ್ಗಮಿಸಿದ, ಝಿಯೋನಿಷ್ಟ್ ನಾಯಕ ಹಝಲ್.
📝ಖಲೀಲ್ ಸೆರಾಜೆ
ಮುಂದಿನ ಚಾಪ್ಟರ್ – ಸುಲ್ತಾನ್ ಅಬ್ದುಲ್ ಹಮೀದರ ಕನಸಿನ ಕೂಸಾದ ಹಿಜಾಝ್ (ಮಕ್ಕಾ ಮತ್ತು ಮದೀನಾ) ರೈಲ್ವೆ ಯೋಜನೆ ಮತ್ತು ಒಟ್ಟೋಮನ್ – ಭಾರತ ಒಡನಾಟ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.