(www.vknews.com) : ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆ ವತಿಯಿಂದ ಇತ್ತೀಚೆಗೆ ಮರಣ ಹೊಂದಿದ ಹಿರಿಯ ವಿದ್ವಾಂಸ ಕನಕಮಜಲು ಉಸ್ತಾದ್ ಎಂದೇ ಖ್ಯಾತಿ ಪಡೆದ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ ಮತ್ತು ಪೇರಡ್ಕ ಮಸೀದಿಯಲ್ಲಿ ಸೇವೆಗೈದು ಮರಣ ಹೊಂದಿದ ಬಹು ಅಶ್ರಫ್ ಫೈಝಿ ಕಂಬಿಬಾಣೆ ಉಸ್ತಾದರ ಹೆಸರಿನಲ್ಲಿ ತಹ್ಲೀಲ್ ಸಮರ್ಪಣೆ ಕಾರ್ಯಕ್ರಮ ಅ.27 ರಂದು ಪೇರಡ್ಕ ಮಸೀದಿಯಲ್ಲಿ ನಡೆಯಿತು .
ಕಾರ್ಯಕ್ರಮವು ಎಮ್.ಜೆ.ಎಮ್ ಖತೀಬರಾದ ಸುಹೇಲ್ ದಾರಿಮಿ ಯವರು ನೇತೃತ್ವ ವಹಿಸಿದರು.ಟಿ.ಎಮ್.ಶಹೀದ್,ಸದರ್ ಉಸ್ತಾದ್ ಝಖರಿಯಾ ದಾರಿಮಿ ಆರ್ಕಾನ,ಮುನೀರ್ ದಾರಿಮಿ,ಎಸ್ ಕೆ ಎಸ್ ಎಸ್ ಎಫ್ ಗೂನಡ್ಕ ಶಾಖೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟಂಗಾರ್,ಎಮ್.ಜೆ.ಎಮ್ ಕಾರ್ಯದರ್ಶಿ ಇಬ್ರಾಹಿಂ ಶೇಟ್ಟಿಯಡ್ಕ , ಎಮ್.ಆರ್.ಡಿ.ಎ.ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ, ಕೆ.ಎಮ್.ಮೂಸಾನ್,ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ಅಧ್ಯಕ್ಷ ತಾಜುದ್ದೀನ್ ಅರಂತೋಡು,ಆಶೀಕ್ ಕುಕ್ಕುಂಬಳ ಮುಂತಾದವರು ಉಪಸ್ಥಿತರಿದ್ದರು .ಮುನೀರ್ ದಾರಿಮಿ ಸ್ವಾಗತಿಸಿ ಸದರ್ ಮುಅಲ್ಲಿಂ ಝಖರಿಯಾ ದಾರಿಮಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.