ಬಂಟ್ವಾಳ (www.vknews.com) : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇರ್ವತ್ತೂರು ಗ್ರಾಮ ಸಮಿತಿ ವತಿಯಿಂದ ಕೇಂದ್ರ ಸರಕಾರದ ಆರೋಗ್ಯ ಯೋಜನೆಯ “ಆಯುಷ್ಮಾನ್ ಭಾರತ್” ನೊಂದಾವಣಿ ಅಭಿಯಾನ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೂಡುಪಡುಕೋಡಿ ಇರ್ವತ್ತೂರುನಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕಾವಳ ಮೂಡುರು – ಪಡುರು ವಲಯ ಅಧ್ಯಕ್ಷರಾದ ಅಬೂಬಕ್ಕರ್ ಮದ್ವ ಉದ್ಘಾಟಿಸಿ, ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಎಸ್.ಡಿ.ಪಿ.ಐ ಮೂರ್ಜೆ ಬ್ರಾಂಚ್ ಅಧ್ಯಕ್ಷರಾದ ಹಫೀಜ್ ಮೂರ್ಜೆ, ಪಿ ಎಫ್ ಐ ಕಾವಲ್ಕಟ್ಟೆ ಏರಿಯಾ ಅಧ್ಯಕ್ಷರಾದ ರಶೀದ್ ಮೂರ್ಜೆ ಉಪಸ್ಥಿತರಿದ್ದರು. ರಿಯಾಜ್ ಬಸ್ತಿಕೋಡಿ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು
ಅಭಿಯಾನದಲ್ಲಿ ಸುಮಾರು 234 ಮಂದಿ ಸಾರ್ವಜನಿಕರು ಪ್ರಯೋಜನ ಪಡೆದುಕೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.