ದಮ್ಮಾಮ್(ವಿಶ್ವ ಕನ್ನಡಿಗ ನ್ಯೂಸ್): ಅ.29: ಎಜಿಟಿ(ಅಲ್ ಗಾಮ್ದಿ ಟ್ರೇಡಿಂಗ್ ಕಂ.) ,ಎಜಿಟಿ ಮಿನರಲ್ಸ್ ಇಂಡಿಯಾ ಇದರ ವತಿಯಿಂದ ಇಂಡಿಗೋ ವಿಶೇಷ ಚಾರ್ಟರ್ ವಿಮಾನ ವ್ಯವಸ್ಥೆಯನ್ನು ಮಾಡಲಾಗಿತ್ತು.174 ಪ್ರಯಾಣಿಕರನ್ನು ಹೊತ್ತು ಇಂದು ಸೌದಿ ಕಾಲಮಾನ ಬೆಳಿಗ್ಗೆ 11 ಕ್ಕೆ ಹೊರಟು ಭಾರತೀಯ ಕಾಲಮಾನ ಸಂಜೆ 6:00 ಕ್ಕೆ ಘಂಟೆಗೆ ತಲುಪಿದೆ.
ವಿಶೇಷ ವಿಮಾನದಲ್ಲಿ ಇತ್ತೀಚೆಗೆ ನಿಧನರಾದ ಉಡುಪಿಯ ದಿ.ಶಕೀಲ್ ರವರ ಮಡದಿ ಹಾಗು ಮಗಳನ್ನು ಕಂಪೆನಿ ಉಚಿತವಾಗಿ ಕರೆದುಕೊಂಡು ಹೋಗುವ ವಿಶಾಲ ಹೃದಯ ಮೆರೆದಿರುವುದು ಪ್ರಶಂಸಾರ್ಹ. ಅಂತೆಯೇ ವಿಮಾನದಲ್ಲಿ ಗರ್ಭಿಣಿ ಮಹಿಳೆಯರು, ಅನಾರೋಗ್ಯದಿಂದ ಬಳಲುತ್ತಿರುವವರು ಹಾಗೂ ಕೆಲಸ ಕಳೆದುಕೊಂಡವರಿಗೆ ಮೊದಲ ಆದ್ಯತೆ ನೀಡಲಾಗಿತ್ತು.ಪ್ರಯಾಣ ಮಾಡುವವರಿಗೆ ಬೇಕಾದ ಉತ್ತಮ ಗುಣಮಟ್ಟದ ರಕ್ಷಾ ಕವಚವನ್ನು ಎಜಿಟಿ ಕಂಪನಿಯ ವತಿಯಿಂದ ನೀಡಲಾಗಿದೆ. ಅನುಮತಿ ದೊರಕಿಸಿ ಕೊಡಲು ವಿಶೇಷ ಸಹಕಾರ ನೀಡಿರುವ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀ ಶ್ರೀನಿವಾಸ್ ಕೋಟಾ ಹಾಗು ಡಾ.ಆರತಿ ಕೃಷ್ಣರವರಿಗೆ ಸಂಘಟಕರು ಕೃತಜ್ಞತೆ ಸಲ್ಲಿಸಿದ್ದಾರೆ.ಎಜಿಟಿ ಕಂಪೆನಿಯ ಅನ್ವರ್ ಸಾದಾತ್, ಸಂಶುದ್ದೀನ್ ಬೈರಿಕಟ್ಟೆ, ಅಝರ್ ಕೊಡಿಜಲ್, ಅನ್ಸಾರ್ ಕೊಡಿಜಲ್, ರಿಯಾಝ್ ಕೊಡಿಜಲ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ರಿಯಲ್ ಟೆಕ್ ಕಂಪೆನಿ ಮುಖ್ಯಸ್ಥ ಇಸ್ಮಾಯಿಲ್ ಉಲ್ಲಾಳ,ಸಮಾಜ ಸೇವಕರಾದ ಫಾರೂಕ್ ಪೋರ್ಟ್ ಫೋಲಿಯೋ ಜುಬೈಲ್ ಮೊದಲಾದವರು ಉಪಸ್ಥಿತಿಯಲ್ಲಿದ್ದು ಪ್ರಯಾಣಿಕರಿಗೆ ಶುಭ ಹಾರೈಸಿದರು.ಪ್ರಯಾಣಿಕರನ್ನು ಸ್ವಾಗತಿಸಲು ಹಾಗು ಅಗತ್ಯ ನೆರವಿಗಾಗಿ ಬ್ಲಡ್ ಡೋನರ್ಸ್ ತಂಡದ ಸದಸ್ಯರು ಹಾಜರಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.