ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ದಿನಾಂಕ 29/08/2020 ನೇ ಶನಿವಾರ ಅಪರಾಹ್ನ ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯ ದಲ್ಲಿ ಸರಕಾರಿ ಪ್ರೌಢಶಾಲೆ ಎಲಿಮಲೆಯ ವಿದ್ಯಾರ್ಥಿನಿ – ಶ್ರೀ ಧನಂಜಯ ಶ್ರೀಮತಿ ದಮಯಂತಿ ಗಳ ಸುಪುತ್ರಿ ಹಿತಾಶ್ರಿ. ಪಟ್ಟೆ ಮನೆ, ಹರ್ಲಡ್ಕ, ದೇವಚಳ್ಳ ಗ್ರಾಮ, ಇವಳಿಗೆ ದಕ್ಷಿಣ ಕನ್ನಡ ಹಾಗೂ ಮಡಿಕೇರಿ ಘಟಕದ ಬೆಂಗಳೂರು ಗೌಡ ಸಂಘದ ವತಿಯಿಂದ ಮತ್ತು ಕೆ.ವಿ.ಜಿ ಸುಳ್ಯ ಹಬ್ಬದ ಸಮಿತಿಯಿಂದ ಸನ್ಮಾನ ಸಮಾರಂಭ ನಡೆಯಿತು.
ತಾಲೂಕಿನ ಸರಕಾರಿ ಪ್ರೌಢಶಾಲೆಗಳಲ್ಲಿ ಅತೀ ಹೆಚ್ಚು ಅಂಕ 625 ರಲ್ಲಿ 605 ಗಳಿಸಿದ ಕೀರ್ತಿಗೆ ಭಾಜನಳಾಗಿದ್ದಾಳೆ. ಹಳ್ಳಿ ಪ್ರದೇಶದಲ್ಲಿ ಅಂದರೆ ಸೇವಾಜೆ ಕಿರಿಯ ಪ್ರಾಥಮಿಕ ಶಾಲೆ , ದೇವಚಳ್ಳ ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಪ್ರೌಢಶಾಲೆ ಎಲಿಮಲೆಯಲ್ಲಿ ವ್ಯಾಸಂಗ ಮಾಡಿ ಊರಿನ, ಗ್ರಾಮದ,ತಾಲೂಕಿನ ವಿದ್ಯಾಭಿಮಾನಿಗಳ ಪ್ರಶಂಸೆ ಗೆ ಪಾತ್ರಳಾಗಿದ್ದಾಳೆ.
ಪಾಠದ ಜೊತೆಗೆ ಕ್ರೀಡೆ, ಪ್ರತಿಭಾ ಕಾರಂಜಿ ,ನಾಟಕ, ನೃತ್ಯ ಮುಂತಾದ ಚಟುವಟಿಕೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗೆ ಸೈ ಎನಿಸಿರುವಳು.
ಕಾರ್ಯ ಕ್ರಮದಲ್ಲಿ ಕುರುಂಜಿ ವೆಂಕಟ್ರಮಣ ಗೌಡ ಇವರ ಸುಪುತ್ರ ಡಾ. ಕೆ.ವಿ. ಚಿದಾನಂದ, ದ.ಕ ಹಾಗೂ ಮಡಿಕೇರಿ ಘಟಕದ ಬೆಂಗಳೂರು ಗೌಡ ಸಂಘದ ಪದಾದಿಕಾರಿಗಳು,ಸುಳ್ಯ ಕೆ.ವಿ.ಜಿ ಹಬ್ಬದ ಅಧ್ಯಕ್ಷರು ಸದಸ್ಯರು, ಎಲಿಮಲೆ ಪ್ರೌಢಶಾಲೆಯ ಮುಖ್ಯೋಪಾಧ್ಯಾರು,ಶಿಕ್ಷಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.