ಜೆದ್ದಾ(www.Vknews.in):1992 ಡಿಸೆಂಬರ್ ಆರರಂದು ಆರ್ಎಸ್ಎಸ್ ಸಂಘಪರಿವಾರದ ಫ್ಯಾಸಿಸ್ಟ್ ಶಕ್ತಿಗಳು ಆಯೋಧ್ಯೆಯಲ್ಲಿನ ಬಾಬರಿ ಮಸೀದಿ ಧ್ವಂಸ ಪ್ರಕರಣದ ಪ್ರಮುಖ ಆರೋಪಿಗಳಾದ ಲಾಲ್ ಕೃಷ್ಣ ಅಡ್ವಾಣಿ,ಉಮಾ ಭಾರತಿ,ಮುರಳಿ ಮನೋಹರ್ ಜೋಶಿ,ವಿನಯ್ ಕಟಿಯಾರ್ ಮುಂತಾದ ಬಿಜೆಪಿ ನಾಯಕರ ಮೇಲಿನ ಬಾಬರಿ ಧ್ವಂಸ ಪ್ರಕರಣದಲ್ಲಿ ಅಯೋಧ್ಯೆಯ ಸಿ ಬಿ ಐ ಕೋರ್ಟ್ ಖುಲಾಸೆಗೊಳಿಸಿ ಆರೋಪಿಗಳನ್ನು ದೋಷಮುಕ್ತ ಮಾಡಿರುವ ತೀರ್ಪು ನಿರೀಕ್ಷಿತವಾಗಿತ್ತು.ದೇಶದ ಕಾರ್ಯಾಂಗ,ಶಾಸಕಾಂಗ ಮತ್ತು ನ್ಯಾಯಾಂಗಗಳು ಸಂಘ ಪರಿವಾರದ ಕಪಿ ಮುಷ್ಠಿಯಲ್ಲಿರುವಾಗ ನ್ಯಾಯಯುತ ತೀರ್ಪುಗಳು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಾಬರಿ ಮಸೀದಿ ಜಾಗದ ವಿವಾದದ ತೀರ್ಪು ಹೊರಬಿದ್ದಾಗಲೇ ಜಗತ್ತಿಗೆ ತಿಳಿದಿದೆ ಎಂದು ಇಂಡಿಯನ್ ಸೋಶಿಯಲ್ ಫೋರಂ ಸೌದಿ ಅರೇಬಿಯಾ ಹೇಳಿದೆ.
ಅಯೋದ್ಯೆಯಲ್ಲಿ ರಾಮಮಂದಿರ ಇದ್ದುದಕ್ಕೆ ಯಾವುದೇ ಕುರುಹುಗಳು ಇಲ್ಲದಿದ್ದರೂ ವಿವಾದಿತ ಸ್ಥಳವನ್ನು ಭಾವನೆಗಳ ಮೇಲೆ ತೀರ್ಪು ನೀಡಿ ನ್ಯಾಯಪೀಠವು ನ್ಯಾಯವನ್ನು ಅಣಕವಾಡಿದ್ದು ಜೀವಂತವಾಗಿರುವಾಗಲೇ,ಅದನ್ನು ಧ್ವಂಸ ಮಾಡಲು ಪಿತೂರಿ ಹಾಗು ಪ್ರಚೋದನೆ ನೀಡಿದ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿರುವುದು ದುರಂತ,ಅದಲ್ಲದೆ ಲಿಬರ್ಹಾನ್ ಆಯೋಗ ನೀಡಿದ ವರದಿಗೆ ಯಾವುದೇ ಮನ್ನಣೆ ನೀಡದೆ,ಆರೋಪಿಗಳ ಬಗ್ಗೆ ಸ್ಪಷ್ಟ ಸಾಕ್ಷಿಗಳು ಇದ್ದು ಕೂಡ ಆರೋಪಿಗಳನ್ನು ಶಿಕ್ಷಿಸದೆ ಸುಮ್ಮನೆ ಬಿಟ್ಟಿರುವುದು ಜನತೆ ನ್ಯಾಯಾಂಗದ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ಐ ಎಸ್ ಎಫ್ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಅನೇಕ ವರ್ಷಗಳ ಗೂಡಾಲೋಚನೆಯ ತರುವಾಯ ಬಾಬರಿ ಮಸೀದಿಯ ಸಾಕ್ಷ್ಯಗಳನ್ನು ನಾಶಪಡಿಸಿ,ದೇಶದ ಕಾರ್ಯಾಂಗ ಮತ್ತು ಶಾಸಕಾಂಗಗಳನ್ನು ಸ್ವಾಧೀನಪಡಿಸಿದ ಸಂಘಪರಿವಾರ ಈಗ ನ್ಯಾಯಾಂಗವನ್ನು ಸ್ವಾಧೀನಿಸುವ ಮೂಲಕ,ನ್ಯಾಯ ವ್ಯವಸ್ಥೆಯನ್ನು ಅಲ್ಲೋಲಕಲ್ಲೋಲಗೊಳಿಸಿದೆ ಎಂದಿದೆ.ದೇಶದ ವಿರೋಧಪಕ್ಷಗಳು ಕೂಡ ವ್ಯವಸ್ಥೆಯ ವಿರುದ್ಧ ಶಬ್ದವೆತ್ತದೆ ದಿವ್ಯ ಮೌನ ತಾಳಿರುವುದು ದೇಶವನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಆರೋಪಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.