ಮಂಗಳೂರು(ವಿಶ್ವಕನ್ನಡಿಗ ನ್ಯೂಸ್):ಮಂಗಳೂರಿನ ಕದ್ರಿ ಸಮೀಪ ಇರುವ ಅಪಾರ್ಟ್ಮೆಂಟ್ವೊಂದರ ಕಂಪೌಂಡ್ ಗೋಡೆಯ ಮೇಲೆ ಹಿಂದೂ ಪರ ಸಂಘಟನೆಗಳಿಗೆ ಬೆದರಿಕೆಯೊಡ್ಡಿ,ಲಷ್ಕರೆ ಸಂಘಟನೆಯನ್ನು ಬೆಂಬಲಿಸಿರುವ ಗೋಡೆ ಬರಹವೊಂದು ಶುಕ್ರವಾರ ಬೆಳಿಗ್ಗೆ ಕಾಣಿಸಿಕೊಂಡಿರುವುದರ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕೆಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ದಕ್ಷಿಣ ಕನ್ನಡ ಜಿಲ್ಲಾದ್ಯಕ್ಷರಾದ ಅಡ್ವಕೇಟ್ ಸರ್ಫರಾಝ್ ಒತ್ತಾಯಿಸಿದ್ದಾರೆ. ಈ ರೀತಿಯ ಸಮಾಜ ಒಡೆಯುವಂತಹ ಕೆಲಸ ಮಾಡುವ ದುಷ್ಕರ್ಮಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.ಮೊದಲೇ ಕೋಮು ಸೂಕ್ಷ್ಮ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಕೆಲವರು ಇದರ ಲಾಭ ಪಡೆಯಲು ಪ್ರಯತ್ನಿಸುವುದಕ್ಕಿಂತ ಮೊದಲೇ ಪೋಲಿಸ್ ಇಲಾಖೆ ಇದರ ಆರೋಪಿಗಳನ್ನು ಬಯಲಿಗೆ ತರಬೇಕೆಂಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.