(www.vknews.com) : ರಾತ್ರಿ ಮತ್ತು ಬೆಳ್ಳಂಬೆಳಗ್ಗೆ ಮದ್ರಸಕ್ಕೆ ಮಕ್ಕಳನ್ನು ಕಳುಹಿಸುವ ಹೆತ್ತವರು ತಮ್ಮ ಮಕ್ಕಳ ಕುರಿತ ಜಾಗೃತೆ ವಹಿಸ ಬೇಕು. ಕೆಲವೊಂದು ಅಘಾತಕಾರಿ ವಾರ್ತೆಗಳು ಬರುತ್ತಿದ್ದು, ನಮ್ಮ ಗಂಡು ಮತ್ತು ಹೆಣ್ಣು ಮಕ್ಕಳ ಸುರಕ್ಷೆಗೆ ಸದಾ ಎಚ್ಚರಿಕೆ ವಹಿಸಬೇಕು ಎಂದು ಕಲ್ಲೆಗ ಜುಮ್ಮಾ ಮಸೀದಿಯ ಖತೀಬರಾದ ಅಬುಬಕ್ಕರ್ ಸಿದ್ದೀಕ್ ಜಲಾಲಿ ಇಂದಿನ ಜುಮ್ಮಾ ಭಾಷಣದಲ್ಲಿ ಸಮುದಾಯವನ್ನು ಎಚ್ಚರಿಸಿದರು. ಮದರಸಕ್ಕೆ ಕಳುಹಿಸುವ ಸಮಯ ಮತ್ತು ವಾಪಾಸು ಮನೆ ಸೇರುವ ಸಮಯದಲ್ಲಿ ಅವರೊಂದಿಗೆ ಸಂಪರ್ಕ ಸಾದಿಸಬೇಕು ಹಾಗೇ ಸಮಯದ ಕುರಿತು ವಿವರಣೆ ಪಡೆಯಬೇಕು. ಇದು ಮದರಸ ವಿಧ್ಯಾರ್ಥಿಗಳ ಕುರಿತಂತೆ ಮಾತ್ರವಲ್ಲ, ಶಾಲಾ-ಕಾಲೇಜಿಗೆ ಹೋಗುವ ನಮ್ಮ ಯುವಕ -ಯುವತಿಯರಲ್ಲೂ ಹೆತ್ತವರು ಸದಾ ಜಾಗೃತೆ ಪಾಲಿಸುವುದು ಬಲು ದೊಡ್ಡ ಜವಾಬ್ದಾರಿಯಾಗಿದೆ. ಕೆಲವೊಂದು ಕೆಟ್ಟ ಸೂಚನೆಗಳು ಸಿಕ್ಕಿದೆ. ಮಕ್ಕಳ ಭವಿಷ್ಯ ಆಹುತಿಯಾದ ನಂತರ ಚಿಂತಿಸಿ ಫಲವಿಲ್ಲ ಎಂದವರು ಹೇಳಿದರು.
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗೆ ಇನ್ನು 80 ದಿನಗಳು ಮಾತ್ರವೇ ಇದ್ದು ಹೆತ್ತವರು ಮಕ್ಕಳ ಪರೀಕ್ಷೆ ತಯಾರಿಗೆ ಸಹಕರಿಸಬೇಕು. ಮಕ್ಕಳ ಮೇಲೆ ಒತ್ತಡ ಹೇರದೆ ಮತ್ತು ತಾತ್ಸಾರ ಮಾಡದೆ, ಅವರನ್ನು ಹುರಿದುಂಬಿಸುವ ಕೆಲಸ ಮಾಡಬೇಕು. ಮೊಬೈಲ್, ಟೀವಿ, ವಸ್ತ್ರ, ಮದುವೆ, ಹಬ್ಬ ಎಂಬ ಆಸಕ್ತಿಗಳಿಂದ ಅವರನ್ನು ದೂರ ಇರಿಸಿ ಅವರನ್ನು ವಿಧ್ಯೆಯ ಮಹತ್ವ, ಸಾರ್ಥಕತೆ ಮತ್ತು ಪ್ರಯೋಜನದ ಉಪದೇಶ ಮಾಡಿ ಪ್ರೋತ್ಸಾಹಿಸಬೇಕು ಎಂದ ಖತೀಬರು, ದೈನಂದಿನ ದಿನಚರಿಯನ್ನು ಅವರಿಗೆ ನೀಡಿ, ಅದರ ಮೂಲಕ ಉತ್ತಮ ಫಲಿತಾಂಶ ಸಿಗುವಂತೆ ಉತ್ತೇಜಿಸಬೇಕು. ಅವರು ಕಲಿಯುವ ಶಾಲೆಗೆ ತಂದೆ ಸ್ವತಹ ಹೋಗಿ ವಿಚಾರಿಸಬೇಕು, ಅವರ ಶಿಕ್ಷಕಿಯರಲ್ಲಿ ಅವರ ಕುರಿತಂತೆ ಅರಿತುಕೊಳ್ಳಬೇಕು. ಮಕ್ಕಳನ್ನು ಪ್ರೀತಿಸುವ ಜೊತೆಗೆ, ಅವರ ಬದುಕನ್ನು ಪ್ರೀತಿಸಿ ಈ ಕಾಳಜಿ ನಾವು ತೋರಿಸಲೇ ಬೇಕು ಎಂದವರು ಹೇಳಿದರು.
ಪ್ರತೀ ಮಸೀದಿಯಲ್ಲೂ ಎಸ್.ಎಸ್.ಎಲ್.ಸಿ , ಪಿಯುಸಿ ವಿಧ್ಯಾರ್ಥಿಗಳನ್ನು ಕರೆಯಿಸಿ ಅವರಿಗೆ ಪ್ರೇರಣಾತ್ಮಕ ಉಪದೇಶ ಮಾಡ ಬೇಕು, ಸಾಧ್ಯವಾದರೆ, ಸ್ಥಳೀಯವಾಗಿ ಇರುವ ಪಧವೀದರರ ಮೂಲಕ ಟ್ಯೂಷನ್ ಕೇಂದ್ರವನ್ನೂ ಮಸೀದಿಯಲ್ಲಿ ಆರಂಭಿಸಬೇಕು. ಜಮಾಅತಿನಲ್ಲಿರುವ ಎಸ್ ಎಸ್.ಎಲ್.ಸಿ ಮತ್ತು ಪಿಯುಸಿ ಮಕ್ಕಳ ಡಾಟಾ ಸಂಗ್ರಹಿಸಿ ಅದರ ಮೂಲಕ ಅವರ ಫಲಿತಾಂಶ ಬಂದಾಗ, ಅದರಲ್ಲಿ ಉತ್ತೀರ್ಣರಾದವರಿಗೆ ಸರಿಯಾದ ಮಾರ್ಗದರ್ಶನ, ಸಹಕಾರ, ಪ್ರೋತ್ಸಾಹ ಮಾಡಬೇಕು. ಪಾಸಾಗಿ, ಸಿಕ್ಕಿದ ಕೋರ್ಸ್ ಆಯ್ಕೆ ಮಾಡುವುದಕ್ಕಿಂತ ಮೊದಲೇ ಅದಕ್ಕೆ ಸರಿಯಾದ ಮಾರ್ಗದರ್ಶನ ಮಾಡಲು ಪುತ್ತೂರಿನಲ್ಲಿ ಕಮ್ಯುನಿಟಿ ಸೆಂಟರ್ ಆರಂಭಿಸಲಾಗಿದೆ. ಪೈಲ್ ಆದ ವಿಧ್ಯಾರ್ಥಿಗಳು ಡ್ರಾಪೌಟ್ ಆಗದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಎಲ್ಲಾ ವಿಧ್ಯಾರ್ಥಿಗಳು ಪಾಸಾಗಬೇಕು ಆ ಮೂಲಕ ಮುಸ್ಲಿಂ ಸಮುದಾಯಕ್ಕೆ ಮತ್ತು ಕಲಿಯುವ ಶಾಲೆಗೆ ಕೀರ್ತಿ ತರಬೇಕು ಎಂದ ಖತೀಬರು, ಮುಂದಿನ ವಾರ ನಮ್ಮ ಮಸೀದಿಯ ವ್ಯಾಪ್ತಿಯ ಎಸ್.ಎಸ್.ಎಲ್ ಸಿ ಮತ್ತು ಪಿಯುಸಿ ವಿಧ್ಯಾರ್ಥಿಗಳ ಮನೆಮನೆಗೆ ಖತೀಬರಾದ ನಾನೂ ಜಮಾಅತ್ ಕಮೀಟಿಯ ಸದಸ್ಯರು ಹೋಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ ಮಾಡುವ ಪ್ರಯತ್ನ ಮಾಡಲಿದ್ದೇವೆ ಎಂದರು.
ಕಲ್ಲೆಗ ಜಮಾಅತಿನಲ್ಲಿ ಜಮಾಅತ್ ಡೆವಲಪ್ಪ್ ಮೆಂಟ್ ಸೆಂಟರ್ ಸ್ಥಾಪಿಸಲಾಗಿದೆ. ವಿಧ್ಯಾರ್ಥಿ ಕಲಿಯಲು ಆಸಕ್ತಿ ಇದ್ದು ಸವಲತ್ತು ಇಲ್ಲದಿದ್ದರೆ ಇಲ್ಲಿ ಬಂದು ನಮ್ಮಲ್ಲಿ ಹೇಳಬಹುದು. ಅವರಿಗೆ ಉನ್ನತ ಶಿಕ್ಷಣ ಕೊಡುವ ಜವಾಬ್ದಾರಿ ನಮ್ಮದು. ಅದೇ ರೀತಿ ಎಸ್.ಎಸ್.ಎಲ್ .ಸಿ ಮತ್ತು ಪಿಯುಸಿ ಪಾಸಾದ ತಕ್ಷಣ ನಮ್ಮಲ್ಲಿ ಸಂಪರ್ಕಿಸಿ ಮುಂದಿನ ಶಿಕ್ಷಣದ ಬಗ್ಗೆ ಮಾಹಿತಿ ಪಡೆಯಬಹುದು. ಅದಕ್ಕಾಗಿ ನುರಿತ ಕ್ಯಾರಿಯರ್ ಗೈಡೆಂನ್ಸ್ ಎಕ್ಸ್ ಪರ್ಟ್ ಗಳು ನಮ್ಮಲ್ಲಿದ್ದಾರೆ ಎಂದ ಖತೀಬರು, ಈ ಬಾರಿ ಸಿಎ ಪಾಸಾಗಿ ರಾಷ್ಟ್ರ ಮಟ್ಟದಲ್ಲಿ ಹತ್ತನೇ ರ್ಯಾಂಕ್ ಗಳಿಸಿ ನಮ್ಮ ರಾಜ್ಯಕ್ಕೂ, ಸಮುದಾಯಕ್ಕೂ ಕೀರ್ತಿ ತಂದ ಉಪ್ಪಿನಂಗಡಿಯ ತಾಬಿಷ್ ಹಸನ್, ಪ್ರಥಮ ಪ್ರಯತ್ನದಲ್ಲೇ ಸಿ.ಎ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಅಬ್ದುಲ್ ರಹಿಮಾನ್ ಉಸ್ತಾದರ ಮಗಳು ಆಯಿಷಾ ರವರು ಸಿ.ಎ. ಪರೀಕ್ಷೆ ಬರೆದು ಪಾಸಾಗಿರುವ ಬಗ್ಗೆ ಅಭಿಮಾನ ಪಟ್ಟರು. ಅವರ ಬದುಕಿನ ಯಶಸ್ವಿಗೆ ಹಾಗೂ ಅವರ ಕುಟುಂಬದ ಸಮೃದ್ದಿಗೆ ಪ್ರಾರ್ಥಿಸಿದರು.
ಹನೀಫ್ ಪುತ್ತೂರು ಸುನ್ನೀಟುಡೇ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.