ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ರಾಜ್ಯ ಆರ್ಮೆಡ್ ಪೋಲಿಸ್ ಆಗಿ ಆಯ್ಕೆಯಾಗಿ ಸುಳ್ಯದ ಹಿರಿಮೆ, ಗರಿಮೆ, ಕೀರ್ತಿ ಹೆಚ್ಚಿಸಿದ ಯಾಸಿರ್ ಚಟ್ಟೆಕಲ್ಲು ರವರಿಗೆ ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಸಮಿತಿ ವತಿಯಿಂದ ಅಭಿನಂದನೆ ಹಾಗೂ ಸನ್ಮಾನ ಮಾಡಲಾಯಿತು. ಈ ಸಂಧರ್ಭದಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಜಿ.ಕೆ.ಇಬ್ರಾಹಿಂ ಅಮ್ಜದಿ ಯವರು ಮಾತನಾಡಿ ಸಮುದಾಯದಲ್ಲಿ ಇನ್ನಷ್ಟು ಅಧಿಕಾರಿಗಳು ಬೆಳೆದು ಬರಲು ಈ ಸನ್ಮಾನ ಪ್ರೇರಕವಾಗಲೆಂದು ಹಾರೈಸಿದರು.
ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷರಾದ ಎ.ಎಂ.ಫೈಝಲ್ ಝುಹ್ ರಿ ಕಲ್ಲುಗುಂಡಿ, ಕಾರ್ಯದರ್ಶಿ ಸ್ವಬಾಹುದ್ದೀನ್ ಹಿಮಮಿ ಸಖಾಫಿ ಬೀಜಕೊಚ್ಚಿ, ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ ಹಾಗೂ ಸಂಘಟನಾ ನಾಯಕರಾದ ಹಾರಿಸ್ ಗೂನಡ್ಕ, ಇಜಾಸ್ ಗೂನಡ್ಕ, ಸಲೀಕ್ ಕಲ್ಲುಗುಂಡಿ ಮೊದಲಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.